ಸೋಮವಾರದಿಂದ ಪಟ್ಟಣಕ್ಕೆ ಯರಗೋಳ ನೀರು ಸರಬರಾಜು 15 ದಿನಗಳ ಕಾಲ ಕುಡಿಯುವುದಕ್ಕೆ ಯಾರು ಉಪಯೋಗಿಸಬೇಡಿ : ಶಾಸಕ ಎಸ್ಎನ್ ನಾರಾಯಣಸ್ವಾಮಿ
(KOLARA): ಬಂಗಾರಪೇಟೆಯಲ್ಲಿ ಸೋಮವಾರದಿಂದ ಪಟ್ಟಣದ ಜೂನಿಯರ್ ಕಾಲೇಜ್ ಬಳಿ ಇರುವ ಓವರ್ ಟ್ಯಾಂಕ್ ಗೆ ಎರಗೋಲ ನೀರು ಸರಬರಾಜು ಮಾಡಲಾಗುವುದು ಅಲ್ಲಿಂದ ದೇಶಿಹಳ್ಳಿ ಮುನಿಯಮ್ಮ ಲೇಔಟ್, ಅಮರಾವತಿ, ಫಲತಿಮ್ಮನಹಳ್ಳಿ, ಕೆರೆ ಕೋಡಿಗೆ ಸರಬರಾಜು ಮಾಡಲಾಗುವುದು ಈ ನೀರನ್ನು ಹದಿನೈದು ದಿನಗಳ ಕಾಲ ಯಾರು ಸಹ ಕುಡಿಯುವುದಕ್ಕೆ ಬಳಸಬಾರದು ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು.
ಯರಗೋಲ ನೀರು ಮೊದಲನೆಯ ಹಂತವಾಗಿ ಶುದ್ಧೀಕರಣಗೊಂಡು ಈಗ ನಗರಕ್ಕೆ ಪೈಪ್ ಲೈನ್ ಮುಖಾಂತರ ಬರುತ್ತಿದೆ. ಆದರಿಂದ 15 ದಿನಗಳ ಕಾಲ ಯಾರು ಕುಡಿಯುವುದಕ್ಕೆ,ಅಡಿಗೆ ಮಾಡುವುದಕ್ಕೆ ಉಪಯೋಗಿಸಬೇಡಿ, ಈ ಭಾಗದ ಜನರಿಗೆ ಕುಡಿಯುವ ನೀರನ್ನು ಎಸ್ ಎನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಬರಾಜು ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಮೀನಾಕ್ಷಿ, ಸದಸ್ಯರಾದ ಆರೋಗ್ಯರಾಜನ್, ಮಂಜುನಾಥ್, ರಾಕೇಶ್ ಗೌಡ, ಸಾಧಿಕ್, ಶಫಿ ಗಂಗಮ್ಮ, ಪೊನ್ನಿ ರಮೇಶ್, ಬಾಬುಲಾಲ್ ಮೊದಲಾದವರು ಇದ್ದರು.
ವರದಿ:- ವಿಷ್ಣು ಬಂಗಾರಪೇಟೆ