ಶೃಂಗೇರಿ ಕ್ಷೇತ್ರದ ಶಾಸಕರು ಸ್ವಲ್ಪ ಮಲೆನಾಡ ಪರಿಸ್ಥಿತಿ, ರೈತರ ಮನಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು
(CHIKKAMAGALURU): ಶೃಂಗೇರಿ ಕ್ಷೇತ್ರದ ಶಾಸಕರು ಸ್ವಲ್ಪ ಮಲೆನಾಡ ಪರಿಸ್ಥಿತಿಯ, ರೈತರ ಮನಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು ಕಳೆದ ಹತ್ತು ದಿನಗಳಿಂದ ಆನೆ ಬಿಡರದ ಬಗ್ಗೆ ಪತ್ರಿಕ ಮಾಧ್ಯಮಗಳು ವಿಸ್ತೃತ ವರದಿ ಮಾಡಿದರು ಸಹ ಆನೆ ಬಿಡಾರ ಕುರಿತು ಈ ರೀತಿಯ ಹೇಳಿಕೆ ನೀಡುವುದು ಒಳಿತಲ್ಲ.
ಅರಣ್ಯ ಸಚಿವರು ಹಾಗೂ ಅಧಿಕಾರಿಗಳ ಗೊಂದಲದ ಹೇಳಿಕೆಗಳ ನಡುವೆ ಮಲೆನಾಡಿನ ರೈತರು ಆತಂಕದಲ್ಲಿ ಇದ್ದೇವೆ, ಈ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಆನೆ ಬಿಡಾರ ಘೋಷಣೆ ಆಗಿದೆ ಅದರಿಂದಾಗಿ ರೈತರು ಇನ್ನಷ್ಟು ಆತಂಕಕ್ಕೆ ಈಡಾಗಿದ್ದಾರೆ. ಆದರೆ ಶಾಸಕರು ನಿನ್ನೆಯ ಖಾಸಗಿ ಸಭೆಯಲ್ಲಿ ಇದರ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಲೆನಾಡಿನ ಜನಪ್ರತಿನಿಧಿಗಳು ಇನ್ನಾದರೂ ಇಂತಹ ಆತಂಕಕಾರಿ ವಿಚಾರಗಳ ಕುರಿತು ನಿರ್ಲಕ್ಷ್ಯ ವಹಿಸದೆ ಜನರಿಗೆ ಸರಿಯಾದ ಮಾಹಿತಿ ನೀಡಿ ಆತಂಕ ದೂರ ಮಾಡಬೇಕು.
ಮಲೆನಾಡಿಗರಿಗೆ ಕಳೆದ ಹಲವು ವರ್ಷಗಳಿಂದ ಯೋಜನೆಗಳ ಮೇಲೆ ಯೋಜನೆಗಳು ತೀರ ನಿದ್ದೆಗೆಡಿಸಿದೆ ಆದರು ರೈತರು ಬದಕಲೇಬೇಕಾದ ಅನಿವಾರ್ಯವಿದೆ. ಈ ನಡುವೆ ಶಾಸಕರು ಹಾಗೂ ಸರ್ಕಾರಗಳ ನಡೆ ತೀರಾ ಗೊಂದಲಮಯವಾಗಿದೆ.
ಮಲೆನಾಡಿನ ರೈತರು ಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ, ಮಳೆ ಪ್ರಮಾಣವು ಜಾಸ್ತಿ ಆಗಿ ಬೆಳೆ ನಷ್ಟ ಉಂಟಾಗಿದೆ ಒತ್ತುವರಿ ಸಮಸ್ಯೆಯ ನಂತರ ಆನೆ ಬಿಡಾರದಂತ ಆಲೋಚನೆಗಳು ಸರ್ಕಾರ ಮಾಡುತ್ತಿರುವುದು ತೀರಾ ಖಂಡನೀಯವಾಗಿದೆ. ಇದೆ ರೀತಿ ಗೊಂದಲಮಯ ಹೇಳಿಕೆಗಳು ನೀಡುತ್ತಲೇ ಬಂದರೆ ಮುಂದೆ ಶೃಂಗೇರಿ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ.
ಮನುಷ್ಯನಿಗಿಂದ ಪ್ರಾಣಿಗಳ ಜೊತೆಗೆ ನಿಮ್ಮ ಒಡನಾಟವಿದ್ದರೆ ಅವುಗಳ ಜೊತೆಗೆ ಸರ್ಕಾರ ಬದುಕಿಬಿಡಲಿ ಅನಾದಿಕಾಲದಿಂದ ಪರಪಂರೆಯ ಕೃಷಿ ಪ್ರಕೃತಿ ಉಳಿಸಿಕೊಂಡ ಬಂದ ಮಾನವ ಇಂದು ಈ ರೀತಿಯ ಅಸಮರ್ಪಕ ಯೋಜನೆಗಳಿಂದ ಅವನ ಬದುಕೆ ಪ್ರಶ್ನಾವಳಿಯಾಗಿ ಉಳಿದಿದೆ ಎಂದು ನಾಗರಿಕ ಹಿತ ರಕ್ಷಣೆ ವೇದಿಕೆ ಶೃಂಗೇರಿ ಕ್ಷೇತ್ರ ವತಿಯಿಂದ ಕಾರ್ತಿಕ್ ಕಾರ್ ಗದ್ದೆ ಈ ರೀತಿಯಲ್ಲಿ ಪತ್ರಿಕೆಗೆ ತಿಳಿಸಿರುತ್ತಾರೆ.