ಶಾಸಕರು, ಶಾಸಕರ ಹಿಂಬಾಲಕರಿಂದ ನನ್ನ ಕೆಲಸ ಹೋಗಿದೆ: ಅಂಬುಲೆನ್ಸ್ ಡ್ರೈವರ್ ಸಂದೇಶ್.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಲೋಕಸೇವಾನಿರತ ಎಂ.ಎಸ್ ದ್ಯಾವೇಗೌಡರ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಕೊಪ್ಪ ಇಲ್ಲಿ ಆಂಬುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದೇಶನನ್ನು ಕೆಲಸದಿಂದ ವಜಾ ಗೊಳಿಸಿದ್ದು ಶೃಂಗೇರಿ ವಿಧಾನಸಭಾ ಶಾಸಕರು ಹಾಗೂ ಅವರ ಹಿಂಬಾಲಕರಿಂದ ತನ್ನ ತಪ್ಪಿಗೆ ಸರಿಯಾದ ಸಾಕ್ಷಿ ನೀಡುವಂತೆ. ಇದಕ್ಕೆ ಸೂಕ್ತ ಕಾರಣ ತಿಳಿಸದಿದ್ದರೆ ಗಬ್ಬಾನೆ ದೇವಸ್ಥಾನದಲ್ಲಿ ಹುಯಿಲು ಕೊಡುವುದಾಗಿ ಅಂಬುಲೆನ್ಸ್ ಡ್ರೈವರ್ ಸಂದೇಶ್ ತಿಳಿಸಿದ್ದಾರೆ.
ಹೊರಗುತ್ತಿಗೆದಾರರಾದ ಕಂಪನಿ ತಿಳಿಸುವುದೇನೆಂದರೆ ಎನ್.ಹೆಚ್.ಎಂ ಯೋಜನೆಯ ಸಾರ್ವಜನಿಕ ಆಸ್ಪತ್ರೆ ಕೊಪ್ಪ ಇಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಸಂದೇಶ್ ರವರು ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವುದು, ಸರಿಯಾಗಿ ಕರ್ತವ್ಯ ನಿರ್ವಹಿಸದಿರುವುದು. ಅಜಾಗರೂಕತೆಯಿಂದ ವಾಹನ ಚಾಲನೆ, ಪದೇ ಪದೇ ರಸ್ತೆ ಅಪಘಾತ ಹಾಗೂ ಸಾರ್ವಜನಿಕರಿಂದ ಹಣ ಬೇಡಿಕ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವ ಕಾರಣ, ಶ್ರೀ ಟಿ ಡಿ ರಾಜೇಗೌಡ, ಶಾಸಕರು, ಶೃಂಗೇರಿ ರವರ ಆದೇಶದ ಮೇರೆಗೆ, ಕೆಲಸದಿಂದ ವಜಾ ಗೊಳಿಸಲಾಗಿದೆ.
ಮಹಾಮಾರಿ ಕರೋನದ ಸಮಯದಲ್ಲಿ ತಿಂಗಳುಗಟ್ಟಲೆ ಮನೆಗೆ ಹೋಗದೆ ಕೆಲಸ ನಿರ್ವಹಿಸಿದ್ದು, ಕರೋನ ಬಂದಿದ್ದು ಆದರೂ ಕಾರ್ಯನಿರ್ವಹಿಸಿದವನು. ತನಗೆ ಬಂದಿರುವ ಕಾರಣಗಳು ನಿಜವಲ್ಲ ಎಂಬುದು ಆದರೆ ಅಪಘಾತ ಒಂದು ಬಾರಿ ಆಗಿರುವುದು ಸಾರ್ವಜನಿಕರ ಬಳಿ ಹಣ ಬೇಡಿಕೆ ಇಡುವುದು ಶುದ್ಧ ಸುಳ್ಳುನ ವಿಚಾರವಾಗಿದೆ. ಈ ಕಾರಣಕ್ಕೆ ಮನನೊಂದ ಆಂಬುಲೆನ್ಸ್ ಚಾಲಕ ಸಂದೇಶ್ ಇದಕ್ಕೆ ಸೂಕ್ತ ಕಾರಣ ತಿಳಿಸದಿದ್ದರೆ ಗಬ್ಬಾನೆ ದೇವಸ್ಥಾನದಲ್ಲಿ ಹುಯಿಲು ಕೊಡುವುದಾಗಿ ಅಂಬುಲೆನ್ಸ್ ಡ್ರೈವರ್ ಸಂದೇಶ್ ತಿಳಿಸಿದ್ದಾರೆ.