ಮೋದಿಯ ಗ್ಯಾರಂಟಿಗಳು ಜನರು ಬದುಕು ಕಟ್ಟಿಕೊಳ್ಳಲು ಸಹಾಯವಾಗುವಂತದ್ದು, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಜಯಂತಿ ಮಹೋತ್ಸವ ಅಂಗವಾಗಿ ಮಠಕ್ಕೆ ಭೇಟಿ ನೀಡಿ ಜಾನಪದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ.
ಆರು ದಿನಗಳ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಇಂದು ನಾಲ್ಕನೆ ದಿನ. ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಜಗದ್ಗುರುಗಳ ದರ್ಶನ ಪಡೆದು, ಪೀಠದ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಲೋಕಸಭಾ ಚುನಾವಣೆ ಶಿವಮೊಗ್ಗ ಮತ್ತು ದವಣೆಗೆರೆ ಸಮಾಧಾನ ಉಂಟಾಗಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಪಕ್ಷಕ್ಕೆ ಯಾವುದೆ ಸಮಸ್ಯೆ ಉಂಟಾಗುವುದಿಲ್ಲ ಎಂದರು. ಈಶ್ವರಪ್ಪನವರ ಬಳಿ ಮಾತುಕತೆ ನಡೆಯುತ್ತಿದೆ. ಹೆಚ್ಚು ಪೈಪೋಟಿ ಇದೆ. ಬಿಜೆಪಿಯ ಮೋದಿಯ ಗ್ಯಾರಂಟಿಗಳು ಜನರು ಬದುಕು ಕಟ್ಟಿಕೊಳ್ಳಲು ಸಹಾಯವಾಗುವಂತದ್ದು. ಕಾಂಗ್ರೆಸ್ ನವರು ಅವರ ನಂಬರ್ ಅವರು ಹೇಳುವರು ನಮ್ಮ ಪಕ್ಷದ ಸಂಖ್ಯೆ ನಾವು ಹೇಳಬೇಕಲ್ಲವೇ. ಚುನಾವಣೆಯ ತಯಾರಿಯು ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಲು ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನು ಸಹ ಎಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಾಗಿ ತಿಳಿಸಿದರು. ವಿಧಾನ ಸಭೆ ಚುನಾವಣೆ ಸಣ್ಣ ಮಟ್ಟದು, ಲೊಕಸಭಾ ಚುನಾವಣೆ ದೊಡ್ದ ಮಟ್ಟದ್ದು ಅದರಿಂದ ಈ ಬಾರಿ ಯವುದೇ ತಪ್ಪುಗಳು ಆಗುವುದಿಲ್ಲ ಬಹು ಮಾತ ದೊಂದಿದೆ ಗೆಲ್ಲುತ್ತೇವೆ ಎಂದರು.