ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳ ಕುರಿತು ಹೆಚ್ಚು ಅಧ್ಯಯನ, ಸಂಶೋಧನೆಗಳು ಅಗತ್ಯವಿದೆ.
(SHIVAMOGA): ಸೊರಬ: ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳ ಕುರಿತು ಹೆಚ್ಚು ಅಧ್ಯಯನ, ಸಂಶೋಧನೆಗಳು ಅಗತ್ಯವಿದೆ ಎಂದು ಸಪ್ರದ ಕಾಲೇಜು ಶಿರಳಕೊಪ್ಪ ಪ್ರಾಧ್ಯಾಪಕಿ ಡಾ. ಮಂಜುಳಾ ಕೆ.ಪಿ. ಹೇಳಿದರು.
ಪಟ್ಟಣದ ಸಪ್ರದ ಕಾಲೇಜಿನಲ್ಲಿ ನಡೆದ ಐಕ್ಯೂಎಸಿ ಸಹಯೋಗದೊಂದಿಗೆ ಸಮಾಜಶಾಸ್ತ್ರ ವಿಭಾಗ ಆಯೋಜಿಸಿದ್ದ ಸಮಾಜಶಾಸ್ತ್ರದಲ್ಲಿ ಸಂಶೋಧನಾ ವಿಧಾನಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಮಾಜ ನಿಂತ ನೀರಲ್ಲ, ಹಾಗಾಗಿ ನಿರಂತರ ಪರಿಚಲನೆಯುಳ್ಳ ಮಾನವ ಸಮೂಹದ ಚಟುವಟಿಕೆಗಳನ್ನು ಅಭ್ಯಸಿಸಬೇಕು. ಅಧ್ಯಯನದ ಮೂಲಕ ಸಾಮಾಜಿಕ ಪಿಡುಗು, ಸಮಸ್ಯೆಗಳಿಗೆ, ಸುಧಾರಣೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಸಮಾಜಶಾಸ್ತ್ರದ ವಿದ್ಯಾರ್ಥಿಗಳು ಇಂತಹ ಶೋಧನೆಯತ್ತ ಮುಂದಾಗಬೇಕು. ಸಮಾಜದ ವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಆ ಮೂಲಕ ಆಡಳಿತದ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಸಮಾಜಶಾಸ್ತ್ರದ ಸಂಶೋಧನಾ ವಿಧಾನಗಳ ವಿವರ, ಅನುಸರಣಾ ವಿಧಾನ, ಅಗತ್ಯತೆ, ಪ್ರಸ್ತುತತೆ ಕುರಿತು ವಿಷಯ ಮಂಡಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಾದೇಶ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ನೇತ್ರಾವತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಜೋಷಿ ಐಕ್ಯೂಎಸಿ ಸಪ್ರದ ಸೊರಬ ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಚಂದನಾ, ಈಶ್ವರಿ ಪ್ರಾರ್ಥಿಸಿ, ಅನುಷಾ ನಿರೂಪಿಸಿದರು. ಉಪನ್ಯಾಸಕ ರಾಜಶೇಖರ ಗೌಡ ಸ್ವಾಗತಿಸಿದರು. ತೇಜಸ್ವಿನಿ ವಂದಿಸಿದರು.
ವರದಿ: ಮಧು ರಾಮ್ ಸೊರಬ