ಮಗಳ ಬೀಳ್ಕೊಡುಗೆ ಕಣ್ತುಂಬಿಕೊಂಡ ತಾಯಿ ಕರಿಯಮ್ಮ
ಮನಮಿಡಿದ ಪೋಷಕರು ಹಾಗೂ ಮಕ್ಕಳು
(SHIVAMOGA): ಸಾಗರ:ತಮ್ಮ ಕಾರ್ಯ ತತ್ಪರತೆ ಯಿಂದ ಎಲ್ಲಾರ ಮನಸ್ಸನ್ನು ಗೆಲ್ಲಲು ಸಾಧ್ಯ ಎಂದು ಬಿಇಓ ಪರಶುರಾಮಪ್ಪ ಈ ಹೇಳಿದರು.
ಅವರು ಇಲ್ಲಿನ ಮಂಕಳಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಕಳಲೆಯಲ್ಲಿ ಕಾರ್ಯನಿರ್ವಹಿಸಿ ವಯೊನಿವೃತ್ತಿ ಹೊಂದಿದ ಮಾಲತಿ ಶಿಕ್ಷಕಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಬೃಹತ್ ಅಭಿನಂದನ ನೆನಪಿನ ಕಾಣಿಕೆ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ತಾವು ಗುರುತಿಸಿ ಕೊಂಡಿರುವ ವೃತ್ತಿ ಸಂಸ್ಥೆಯಲ್ಲಿ ತಮ್ಮನ್ನು ತಾವು ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳಬೇಕು, ಶಿಕ್ಷಕರು ತಮ್ಮ ಕಾರ್ಯ ವೈಖರಿಯಿಂದ ಮಕ್ಕಳು ಹಾಗೂ ಪೋಷಕರ ಮನಸು ಗೆಲ್ಲಲು ಸಾಧ್ಯ ಅದಕ್ಕೆ ಮಾಲತಿ ಶಿಕ್ಷಕಿಯ ಕಾರ್ಯ ಅಭಿನಂದನೀಯ ಎಂದರು.
ನನ್ನ ವೃತ್ತಿ ಬದುಕು ಸಾರ್ಥಕವಾಗಿದೆ ನಿವೃತ್ತಿಯ ಬೀಳ್ಕೊಡುಗೆ ಸಿಗುತ್ತದೆ ಎಂದು ಭಾವಿಸಿರಲಿಲ್ಲ, ನನಗೆ ತುಂಭಾ ದುಃಖ ಎನಿಸುತ್ತದೆ ಆದರೆ ವಯೊನಿವೃತ್ತಿ ಇದು ಅನಿವಾರ್ಯವಾಗಿದೆ. ನಾನು ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ ನನಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿ.ಟಿ.ಸ್ವಾಮಿ ಮಾತನಾಡಿ ಮನಸ್ಸಿಗೆ ಹತ್ತಿರವಾಗಿ ಮನಸು ಅರಳಿಸುವಂತಹ ಕೆಲಸ ಆಗಬೇಕು, ಪ್ರೀತಿ ವಿಶ್ವಾಸದಿಂದ ಕಾರ್ಯ ನಿರ್ವಹಿಸಿದಲ್ಲಿ ವೃತ್ತಿ ಬದುಕು ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗರಾಜ, ಗ್ರಾ.ಪಂ.ಸದಸ್ಯೆ ಜಯಂತಿ ಸುಧಾಕರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಸನ್ನ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಗನ್ನಾಥ ಕೆ, ಉಪಾಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ, ಪ್ರಮುಖರಾದ ಮೂರ್ತಿ ಬಿ.ವೈ, ಮನೋಹರಪ್ಪ, ಸಿ.ಆರ್.ಪಿ.ನಾಗರಾಜ್,ಬಿ.ಆರ್.ಪಿ,ಸಂತೋಷ್, ಮಲ್ಲಿಕಾರ್ಜುನ್, ನಂದೀಶ್, ಯಶೋಧರ, ಕೆರಿಯಮ್ಮ, ಸಾರ್ವಜನಿಕರು, ಪೋಷಕರು, ಮಕ್ಕಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಮುಖ್ಯ ಶಿಕ್ಷಕ ಈಶ್ವರಪ್ಪ ಕಾರ್ಯಕ್ರಮ ನಿರೂಪಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ