ಮಾತೃ ಭಾಷೆಗೆ ಬಹುದೊಡ್ಡ ಶಕ್ತಿ ಇದೆ
…ಪ್ರೊ.ಸುರೇಶ್ ಜಂಬಾನಿ
(SHIVAMOGA): ಸಾಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿಶ್ವ ಮಾತೃಭಾಷೆ ದಿನಾಚರಣೆ
ಸಾಗರ:ಭಾವನೆಗಳನ್ನು ಹಂಚಿಕೊಳ್ಳುವ ಬಹುಮುಖ್ಯವಾದ ಮಾಧ್ಯಮವೆ ಭಾಷೆಯಾಗಿದೆ ಎಂದು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೀಜಿನ ಸಹಾಯಕ ಪ್ರಾಧ್ಯಾಪಕ ಪ್ರೊ: ಸುರೇಶ್ ಜಂಬಾನಿ ಹೇಳಿದರು.
ಅವರು ಇಲ್ಲಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಾಗರ ಇವರು ಮೇಟ್ರಿಕ್ ನಂತರದ ಬಾಲಕೀಯರ ವಿದ್ಯಾರ್ಥಿ ನಿಲಯದಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಇತರೆ ಜೀವಿಗಳಿಂದ ವಿಭಿನ್ನವಾಗಿ ಗುರುತಿಸಿಕೊಂಡಿರುವ ಮನುಷ್ಯ ತನ್ನ ಅಭಿವ್ಯಕ್ತಿಯನ್ನು ಭಾಷೆಯ ಮೂಲಕ ಅಭಿವ್ಯಕ್ತಿಸುವ ಮಾಧ್ಯಮವಾಗಿದೆ, ಅದರಲ್ಲೂ ಬಹು ಮುಖ್ಯವಾಗಿ ಮಾತೃಭಾಷೆಗೆ ವಿಶೇಷವಾದ ಸ್ಥಾನವಿದೆ. ಆಧುನಿಕತೆ ಬೆಳೆದಂತೆ ಸಾಕಷ್ಟು ಭಾಷೆಗಳು ಕಳೆದು ಹೋಗಿವೆ. ಆದರೆ ಸಹಜವಾಗಿ ಹೇಳಿಕೊಳ್ಳುವಂತಹ ವಿಚಾರಗಳನ್ನು ತನ್ನ ಹೃದಯದ ಭಾಷೆಯ ಮೂಲಕ ಮಾತ್ರ ಸಾಧ್ಯ.
ಭಾಷೆಯಲ್ಲಿ ವೈವಿಧ್ಯತೆಯಿದ್ದರು ಅವುಗಳನ್ನು ಅಭಿವ್ಯಕ್ತಿಸುವುದು ಮಾತ್ರ ತನ್ನೊಳಗಿನ ಭಾವನೆಗಳಾಗಿವೆ, ನಾವು ನಿರ್ದಿಷ್ಟವಾಗಿ ನಮ್ಮ ನಮ್ಮ ಮಾತೃಭಾಷೆಯ ಬಗ್ಗೆ ಹೆಚ್ಚಿನ ಗಮನ ಇರಬೇಕಾಗಿದೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ, ಯಾವ ಭಾಷೆ ಜನ ಸಾಮಾನ್ಯರಿಗೆ ಸಹಜವಾಗಿ ಅರ್ಥವಾಗುತ್ತದೆಯೊ ಅದು ನಿರಂತರವಾಗಿ ಹಾಗೂ ಜೀವಂತವಾಗಿ ಉಳಿಯುತ್ತದೆ. ಎಲ್ಲಾ ಭಾಷೆಯನ್ನು ಪ್ರೀತಿಸು ಆದರೆ ಮಾತೃಭಾಷೆಯನ್ನು ಮಾತ್ರ ತನ್ನ ಅಂತರoಗದೋಳಗೆ ಇಟ್ಟು ಪೂಜಿಸು ಎಂದವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ವಿನೂತ ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮನುಷ್ಯನಿಗೆ ಬೇಕಾಗಿರುವುದು ಸಂವೇದಾನಶೀಲ ಭಾಷೆ ಬೇಕಾಗಿದೆ ಅಂತಹ ಭಾಷೆಯೆ ಮಾತೃಭಾಷೆಯಾಗಿದೆ. ನಮ್ಮ ಮಾತೃ ಭಾಷೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ ಕನ್ನಡ ಸಾಹಿತ್ಯ ಪರಿಷತ್ತು ಅಂತಹ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವುದು ಅಭಿನಂದನಿಯ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ ಮನಸ್ಸಿನ ಭಾಷೆಗಿಂತ ಶ್ರೇಷ್ಠ ಭಾಷೆ ಬೆರೊಂದಿಲ್ಲ ಭಾಷೆಗಳನ್ನು ಹೇರುವ ಕೆಲಸ ಆಗುತ್ತಿದೆ ನಮ್ಮ ನಮ್ಮ ದೇಶಿಯ ಹಾಗೂ ಮಾತೃ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮಾತೃ ಭಾಷೆ ಮರೆತಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ನಾಶಮಾಡಿದಂತಾಗುತ್ತದೆ ಹಾಗಾಗಿ ಮಾತೃಭಾಷೆಯನ್ನು ಮಾತ್ರ ನಾವು ಮರೆಯಬಾರದು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಆನಂದಪುರ ಹೊಬಳಿ ಘಟಕದ ಅಧ್ಯಕ್ಷ ಬಿ.ಡಿ.ರವಿಕುಮಾರ್, ಕಜಾಪ ಪ್ರಧಾನಕಾರ್ಯದರ್ಶಿ ಉಮೇಶ್ ಹಿರೇನೆಲ್ಲೂರು, ಸಾಂಸ್ಕೃತಿಕ ವೇದಿಕೆ ಪ್ರಧಾನಕಾರ್ಯದರ್ಶಿ ಸತ್ಯನಾರಾಯಣ, ಪ್ರಮುಖರಾದ ಸಹಾಯ ಪ್ರಾಧ್ಯಾಪಕ ಡಾ.ಪ್ರಸನ್ನ ಟಿ. ವಸತಿ ನಿಲಯದ ಕಲ್ಪನಾ, ವೆಂಕಟೇಶ್ ಚಂದಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಪೂರ್ಣಿಮಾ ಪ್ರಾರ್ಥಿಸಿ ಅನುಷ ಸ್ವಾಗತಿಸಿ, ವಂದಿಸಿ ನಿರೂಪಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ