ಕೋಲಾರನ್ಯೂಸ್

ಬಂಗಾರಪೇಟೆ ಸಮನ್ವಯ ಸಮಿತಿ ಸಭೆಗೆ ಸಂಸದ ಎಸ್.ಮುನಿಸ್ವಾಮಿ ಬೆಂಬಲಿಗರ ಗೈರು..?

ಬಂಗಾರಪೇಟೆ ಸಮನ್ವಯ ಸಮಿತಿ ಸಭೆಗೆ ಸಂಸದ ಎಸ್.ಮುನಿಸ್ವಾಮಿ ಬೆಂಬಲಿಗರ ಗೈರು..?

(KOLARA): ಬಂಗಾರಪೇಟೆ: ಕೋಲಾರ ಲೋಕಸಭೆ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಬಾಬು ಏಪ್ರಿಲ್ ನಾಲ್ಕುರಂದು ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಬಂಗಾರಪೇಟೆಯ ಕೃಷಿಕ ಸಮಾಜ ಕಟ್ಟಡದಲ್ಲಿರುವ ಕೆಸಿಆರ್ ಕಛೇರಿಯಲ್ಲಿ ಮಂಗಳವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಹಾಲಿ ಸಂಸದ ಎಸ್.ಮುನಿಸ್ವಾಮಿ ಬೆಂಬಲಿಗರು ಗೈರು ಹಾಜರಿ ಆಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಕೋಲಾರ ಲೋಕಸಭೆ ಚುನಾವಣೆಗೆ ಎನ್ ಡಿ ಎ ನಿಂದ ಬಿಜೆಪಿಯಿಂದ ಹಾಲಿ ಸಂಸದ ಎಸ್ ಮುನಿಸ್ವಾಮಿ ರವರಿಗೆ ಟಿಕೇಟ್ ಸಿಗುವ ನಿರೀಕ್ಷೆಯಲ್ಲಿದ್ದ ಸಂಸದರ ಬಹುತೇಖ ಬೆಂಬಲಿಗರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಬಾಬುಗೆ ಟಿಕೇಟ್ ಸಿಗುವ ಮೂಲಕ ಸಹಜವಾಗಿ ಬೆಂಬಲಿಗರಲ್ಲಿ ಅಸಮಧಾನ ಉಂಟಾಗಿದೆ. ಈ ಅಸಮಧಾನ ತೊಲಗಿಸಿ ಎರಡೂ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯನ್ನು ಇಂದು ಕರೆಯಲಾಗಿತ್ತು. ಈ ಸಭೆಗೆ ಬಹುತೇಖ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಆಗಿಸಿದ್ದಾದ್ರೂ, ಸಂಸದ ಎಸ್.ಮುನಿಸ್ವಾಮಿ ಬೆಂಬಲಿಗರು ಗೈರು ಹಾಜರಿ ಆಗಿರುವುದು ಕಂಡು ಬಂದಿದೆ. ಸಂಸದರ ಬೆಂಬಲಿಗರಲ್ಲಿ ಪ್ರಭಾವಿ ಮುಖಂಡರಾದ ಕಪಾಲಿ ಶಂಕರ್, ಸೂಲಿಕುಂಟೆ ಶ್ರೀನಿವಾಸಗೌಡ, ಸೋರೇಗೌಡನಕೋಟೆ ಹೊಸರಾಯಪ್ಪ, ಒಂಬತ್ತುಗಳಿ ವೆಂಕಟೇಶರೆಡ್ಡಿ ಸೇರಿದಂತೆ ಬಹುತೇಖ ನಾಯಕರು ಸಭೆಗೆ ಆಗಮಿಸಲಿಲ್ಲ.


ಬಿಜೆಪಿ ಮುಖಂಡರಾದ ಬಿ.ಪಿ.ವೆಂಕಟಮುನಿಯಪ್ಪ,  ಕೆ.ಚಂದ್ರಾರೆಡ್ಡಿ, ಶಿವುಕುಮಾರ್, ಸಂಪಂಗಿರೆಡ್ಡಿ, ಬಿ.ವಿ.ಮಹೇಶ್ , ಜೆಡಿಎಸ್ ಮುಖಂಡರಾದ ಮುನಿರಾಜು, ವಡಗೂರ್ ಹರೀಶ್ ಮತ್ತಿತ್ತರರು ಸಭೆಯಲ್ಲಿ ಭಾಗವಹಿಸಿ ಏಪ್ರಿಲ್ ನಾಲ್ಕರಂದು ನಾಮಪತ್ರ ಸಲ್ಲಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ರವರ ಕಾರ್ಯಕ್ರಮಕ್ಕೆ ಹೋಬಳಿವಾರು ಕಾರ್ಯಕರ್ತರನ್ನ ಕರೆತರುವ ಬಗ್ಗೆ ಚರ್ಚಿಸಲಾಯಿತು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code