ಮಾದಗುಡ್ಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ ಎಸ್ ಪುನೀತ್ ಆಯ್ಕೆ.
(HASSANA): ಚನ್ನರಾಯಪಟ್ಟಣ :ತಾಲೂಕಿನ ಬಾಗೂರು ಹೋಬಳಿಯ ಮಾದಗುಡ್ಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್ ಪುನೀತ್ ಅವಿರೋಧವಾಗಿ ಆಯ್ಕೆಗೊಂಡರು, ನೂತನ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಗಳಾಗಿ ಶ್ರೀಮತಿ ಲೀಲಾ ಕಾರ್ಯನಿರ್ವಹಿಸಿದರು, ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿದ್ದು ಈ ದಿನ ಎಂ ಎಸ್ ಪುನೀತ್ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಎಸ್ ಪುನೀತ್ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಶ್ರೀಮತಿ ಲೀಲಾ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಪುನೀತ್ ಮಾತನಾಡಿ ಮುಂದಿನ ದಿನಗಳಲ್ಲಿ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರ ಸಲಹೆ ಸಹಕಾರ ಪಡೆದುಕೊಂಡು ಮಾದಗುಡ್ಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಶೇರುದಾರರ ಏಳಿಗೆಗೆ ಹಾಗೂ ಸಹಕಾರ ಸಂಘದ ಅಭಿವೃದ್ಧಿಗೆ ಕಾಯಾ, ವಾಚಾ, ಮಾನಸ ದುಡಿಯುತ್ತೇನೆ ಎಂದು ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ ಎಸ್,ಪುನೀತ್, ಉಪಾಧ್ಯಕ್ಷರಾದ ಶ್ರೀಮತಿ ಬ್ಯಾಟಮ್ಮ, ಚುನಾವಣಾ ಅಧಿಕಾರಿಗಳಾದ ಶ್ರೀಮತಿ ಲೀಲಾ,ಕಾರ್ಯದರ್ಶಿಯಾದ ಕೃಷ್ಣೇಗೌಡ, ಮಾದಗುಡ್ಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳಾದ ಜಯರಾಂ, ಶ್ರೀರಾಮ್,ಮಂಜೇಗೌಡ, ಶ್ರೀಮತಿ ಚಂದ್ರಮ್ಮ, ರಂಗಸ್ವಾಮಿ, ಧರ್ಮರಾಜು, ಶಂಭುಲಿಂಗೇಗೌಡ,ದೇವರಾಜು, ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ರುದ್ರೇಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಬ್ಯಾಡರಹಳ್ಳಿ ದೀಪು,ದರಸೀಹಳ್ಳಿ ದಿಲೀಪ್ ,ಕಾಂಗ್ರೆಸ್ ಮುಖಂಡರಾದ ಮರಗೂರು ರಘು,ಶಿವರಚೇತನ್, ಹೊಂಗೆಹಳ್ಳಿಗಿರೀಶ್, ದಿಲೀಪ್, ಗೋವಿನಕೆರೆ ದಿನೇಶ್, ಗೋವಿನಕೆರೆ ತೇಜಸ್, ಮಾದಗುಡ್ಡನಹಳ್ಳಿ ಗ್ರಾಮಸ್ಥರುಗಳಾದ ದೇವರಾಜು,ಸುರೇಶ್, ಗುರುಮಲ್ಲೇಶ್, ಬಸವರಾಜು,ರಂಗಸ್ವಾಮಿ, ಸ್ವಾಮಿಗೌಡ, ರಾಮಚಂದ್ರ, ಅಶೋಕ, ಸೇರಿದಂತೆ ಇತರರು ಹಾಜರಿದ್ದರು.
ಶಾಮಸುಂದರ್ ಕೆ ಅಣ್ಣೇನಹಳ್ಳಿ