ಮಚ್ಚಿನಿಂದ ಹೊಡೆದು ವ್ಯಕ್ತಿಯ ಕೊಲೆ
(KOLARA): ಬಂಗಾರಪೇಟೆ ; ಪಟ್ಟಣ ಬಸ್ ನಿಲ್ದಾಣ ಹಿಂಭಾಗದ ಚಿಕನ್ ರಮೇಶ್ ಅಂಗಡಿ ಮುಂಭಾಗದಲ್ಲಿ ವ್ಯಕ್ತಿಯೊಬ್ಬರಿಗೆ ಮಚ್ಚಿನಿಂದ ತಲೆಗೆ ಹೊಡೆದುಕೊಲೆ ಮಾಡಿರುವ ಘಟನೆ ರಾತ್ರಿ 8:00 ಗಂಟೆ ಸಮಯದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಬಂಗಾರಪೇಟೆ ತಾಲೂಕು ಕೇಸರನಹಳ್ಳಿ ಗ್ರಾಮ ದ ನಿವಾಸಿ 31 ವರ್ಷದ ಸುನೀಲ್ ಎಂದು ತಿಳಿದು ಬಂದಿದೆ. ಮನೆಗೆ ಹೋಗಲು ಬೈಕ್ ಸ್ಟಾರ್ಟ್ ಮಾಡುವಾಗ ಅಪರಿಚಿತ ವ್ಯಕ್ತಿ ಹಿಂದೆಯಿಂದ ಬಂದು ಮಚ್ಚಿನಿಂದ ತಲೆಗೆ ಹೊಡೆದಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು, ಮಚ್ಚಿನಿಂದ ಹೊಡೆದ ಏಟಿಗೆ ಸುನೀಲ್ ಸ್ಥಳದಲ್ಲೇ ಕುಸಿದಿ ಬಿದ್ದು ಸಾವನ್ನೊಪ್ಪಿದ್ದಾನೆ ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಕೆಜಿಎಪ್ ಜಿಲ್ಲಾ, ಡಿವೈಎಸ್ಪಿ ಪಾಂಡುರಂಗ ಹಾಗೂ ಬಂಗಾರಪೇಟೆ ಪೊಲೀಸರು ಬೇಟಿ ನೀಡಿ, ಸ್ಥಳ ಪರಿಶಿಲನೇ ನಡೆಸಿ ಕೊಲೆಗಾರನ ಬಂಧನಕ್ಕೆ ಬಲೆ ಬೀಸಿದ್ದಾರೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಬಂಗಾರಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದಯಾನಂದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪೊಲೀಸರ ತನಿಖೆಯಿಂದ ಮಾತ್ರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.
ವರದಿ: ವಿಷ್ಣು ಕೋಲಾರ