ಕೋಲಾರನ್ಯೂಸ್

ಗ್ರಾಮಗಳ ಅಭಿವೃದ್ಧಿಗೆ ನನ್ನ ಪ್ರಥಮ ಆದ್ಯತೆ: ಕೇತಗಾನಹಳ್ಳಿ ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷ ಕೆ.ವಿ. ಮಂಜುಳಾ

ಗ್ರಾಮಗಳ ಅಭಿವೃದ್ಧಿಗೆ ನನ್ನ ಪ್ರಥಮ ಆದ್ಯತೆ: ಕೇತಗಾನಹಳ್ಳಿ ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷ ಕೆ.ವಿ. ಮಂಜುಳಾ

(KOLARA): ಬಂಗಾರಪೇಟೆ :ಗ್ರಾಮಗಳ ಅಭಿವೃದ್ಧಿಗೆ ನನ್ನ ಪ್ರಥಮ ಆದ್ಯತೆ ಎಂದು ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ವಿ. ಮಂಜುಳಾ ಶ್ರೀನಿವಾಸ್ ಹೇಳಿದರು.

ತಾಲ್ಲೂಕಿನ ಕಾಮಸಮುದ್ರ ಹೋಬಳಿಗೆ ಸೇರಿದ ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಅವರು ಕುಡಿಯುವ ನೀರು ಮತ್ತು ನೈರ್ಮಲ್ಯ, ಸ್ವಚ್ಛತೆ, ಬೀದಿ ದೀಪಗಳ ವ್ಯವಸ್ಥೆ, ಉತ್ತಮವಾದ ಚರಂಡಿ ವ್ಯವಸ್ಥೆ, ಪೈಪ್ ಲೈನ್ ಅಳವಡಿಸುವ ಬಗ್ಗೆ ಹಾಗೂ ಎಲ್ಲಾ ಮೂಲಭೂತ ಸೌಕರ್ಯ ಬಳಸಿಕೊಳ್ಳಲು 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆಗೆ ಇಂದಿನ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಿ ಗ್ರಾಮಗಳ ಅಭಿವೃದ್ಧಿಗಾಗಿ ಸಭೆಯಲ್ಲಿ ಎಲ್ಲಾ ಸದಸ್ಯರ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಧಮ್ಮ ರಾಮಪ್ಪ, ಸದಸ್ಯರಾದ ಕೆ.ಮಂಜುನಾಥ್, ಸುಮಿತ್ರ, ಶ್ರೀಧರ್, ಎನ್.ಎಸ್.ಧನಲಕ್ಷ್ಮಿ, ಎಸ್ ಆಶಾಲತಾ, ಎನ್.ರೇಣುಕಾಶ್ರೀ ಪ್ರದೀಪ್, ಎಸ್. ಶ್ರೀನಿವಾಸಯ್ಯ, ಟಿ.ನಟರಾಜ, ಸುಬ್ರಮಣಿ, ಎನ್.ಅರುಣ, ತುಳಸಿ ಕುಮಾರ್, ರವಿ, ಕೆ.ಶಶಿಧರ್ ರೆಡ್ಡಿ, ನಾರಾಯಣಸ್ವಾಮಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಆಡಳಿತ ಅಧಿಕಾರಿ ಡಿ.ಆನಂದ್ ಕಾರ್ಯದರ್ಶಿ ಶಂಕರಪ್ಪ, ಲೆಕ್ಕಾಧಿಕಾರಿ ಗೋವಿಂದರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code