ನ್ಯೂಸ್ರಾಜಕೀಯಶಿವಮೊಗ್ಗ

ನನ್ನ ನಡೆ ಪಕ್ಷದ ವಿರುದ್ಧ ಅಲ್ಲಾ ಪಕ್ಷಾಂತರಿಯ ವಿರುದ್ಧ

ನನ್ನ ನಡೆ ಪಕ್ಷದ ವಿರುದ್ಧ ಅಲ್ಲಾ ಪಕ್ಷಾಂತರಿಯ ವಿರುದ್ಧ

(SHIVAMOGA): ಸಾಗರ ಪದವೀಧರ ಕ್ಷೇತ್ರದ ಪಕ್ಷೇತರರ ಅಭ್ಯರ್ಥಿ ಎಸ್.ಪಿ.ದಿನೇಶ್ ಅವರು ಕಳೆದ 33 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ನನಗೆ ನೀಡಿದ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿದ್ದು ಕಳೆದ ಹತ್ತು ತಿಂಗಳ ಹಿಂದೆ ಕೆ.ಪಿ.ಸಿ.ಸಿ.ಅದ್ಯಕ್ಷರು ನನಗೆ ಬರವಸೆ ನೀಡಿದ ಬಳಿಕವಷ್ಟೆ ನಾನು ಕಳೆದ ಹತ್ತು ತಿಂಗಳಿಂದ ನನ್ನ ಇಡೀ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಾ ಬಂದಿದ್ದು.

ನನಗೆ ಪಕ್ಷದ ಶಾಸಕರು ‌ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ನೀಡುತ್ತಾ ಇದ್ದಾರೆ ಆದರೆ ಪಕ್ಷದಿಂದ ಪಕ್ಷಕ್ಕೆ ಹಾರಿ ನಮ್ಮ ಪಕ್ಷದ ವಿರುದ್ಧ ಮಾತನಾಡುತ್ತಾ ಇದ್ದ ಪಕ್ಷಾಂತರಿಗೆ ಇಂದು ಟಿಕೇಟ್ ಕೊಟ್ಟಿದ್ದು ನನಗೆ ಅಸಮಾಧಾನ ಇದೆ ಆ ಉದ್ದೇಶದಿಂದ ನಾ ಪಕ್ಷೇತರವಾಗಿ ನಿಲ್ಲುವ ಉದ್ದೇಶ ಹೊಂದಿದ್ದೆನೆ. ಪಕ್ಷವು ಅಭ್ಯರ್ಥಿ ಬದಲಾವಣೆ ಮಾಡಿದರೆ ನಾ ನನ್ನ ನಾಮಪತ್ರ ವಾಪಸ್ಸು ಪಡೆಯುವೆ ಇಲ್ಲ ಯಾವುದೇ ಕಾರಣಕ್ಕು ಮುಂದೆ ಇಟ್ಟ ಹೆಜ್ಜೆ ಹಿಂದೆ ತೆಗೆಯೋ ಮಾತು ಇಲ್ಲ ಒಂದು ವೇಳೆ ಪಕ್ಷ ಅಭ್ಯರ್ಥಿ ಬದಲಾವಣೆ ಮಾಡದೆ ಇದ್ದಲ್ಲಿ ನಾನು ನಾಡಿದ್ದು ಪಕ್ಷಕ್ಕೆ ರಾಜಿನಾಮೆ ನೀಡುತ್ತೇನೆ.
ಕಳೆದ ಸಲ ಗೆದ್ದ ಇವರು ಯಾವ ಶಾಲೆಗೆ ಯಾವ ಯಾವ ಕೆಲಸಕ್ಕೆ ಎಸ್ಟು ಅನುದಾನ ಕೊಟ್ಟಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಲಿ ಅವರ ಅವಧಿಯಲ್ಲಿ ಒಂದುವರೆ ವರ್ಷ ಇರುವಾಗಲೆ ತನ್ನ ರಾಜಕೀಯ ಸ್ವಾರ್ಥಕ್ಕೆ ರಾಜಿನಾಮೆ ನೀಡಿದ ಮಾಹಾನುಭಾವರು ಇವರು ಇಂತವರಿಗೆ ಟಿಕೇಟ್ ನಿಡೀದ್ದು ಎಸ್ಟು ಸರಿ ಎಂದು ಆಯನೂರು ಮಂಜುನಾಥ ವಿರುದ್ಧ ಟೀಕಿಸಿದರು. ಒಟ್ಟಲ್ಲಿ ಅವರನ್ನು ನಿಲ್ಲಿಸಿದವರು ಇವರನ್ನು ಹೇಗೆ ಗೆಲ್ಲಿಸುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು‌.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code