ಜಿಲ್ಲೆನ್ಯೂಸ್

ಗ್ರಾಮ ಘಟಕದ ನಾಮಫಲಕ ಉದ್ಘಾಟನಾ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ

ಗ್ರಾಮ ಘಟಕದ ನಾಮಫಲಕ ಉದ್ಘಾಟನಾ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ

(VIJAYANAGARA): ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ನಾ ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾ// ಮುದೇನೂರು ಗ್ರಾಮದಲ್ಲಿ ತಾಲ್ಲೂಕು ಘಟಕದ ನಾಮಫಲಕದ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಸುಭಾಸಮಾರಂಭರದ ಪ್ರಯುಕ್ತ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ಅದೇ ಕ್ಷೇತ್ರದ ಯುವ ಸಾಮಾಜಿಕ ಕಳಕಳಿ ಇರುವ, ಬಡವರ, ಬಂಧು, ಯುವಕರು ಕಣ್ಮಣಿ ಸನ್ಮಾನ್ಯ ಶಾಸಕರಾದ ಕ್ರುಷ್ಣಾ ನಾಯ್ಕ ಸಾರ್ ಇವರು ಉದ್ಘಾಟಕರಾಗಿ ಆಗಮಿಸಿ ಹಾಗೆ ಇವರ ಜೊತೆಗೂಡಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ ಕೂಡಾ ಆಗಮಿಸಿ ಕಾರ್ಯಕ್ರಮಕ್ಕೆ ರಾಜಖಳೆಯನ್ನ ತಂದು ಕಾರ್ಯಕ್ರಮವನ್ನ ಯಶಸ್ವಿ ಗೊಳಿಸಿ ಖುಷಿ ಪಟ್ಟರು.

ಕಾರ್ಮಿಕರೆಲ್ಲಾ ಒಗ್ಗಟ್ಟಾಗಿ ನಿಂತ್ಕೊಳ್ಬೇಕು ಸರ್ಕಾರದ ಸೌಲಭ್ಯ ಪಡೆಯಲು ಕಟು ಬದ್ದರಾಗಿ ನಿಲ್ಲಬೇಕು ಎಂದು ಕರೆಕೊಟ್ಟರು. ಹಾಗೇ ಈ ಕಾರ್ಯಕ್ರಮಕ್ಕೆ ಸಂಘದ ಜಿಲ್ಲಾ ಅಧ್ಯಕ್ಷರಾದಿಯಾಗಿ ಎಲ್ಲಾ ಪದಾಧಿಕಾರಿಗಳು, ಅಷ್ಟೇ ಅಲ್ಲದೆ ಈ ಕಾರ್ಯಕ್ರಮದ ಮುಖ್ಯ ಪಾತ್ರ ಪಾತ್ರದಾರಿಗಳಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹಳ್ಳಿ ಅಂಜಿನಪ್ಪ ಇವರು ಹಾಗೂ ತಾಲ್ಲೂಕ ಪದಾಧಿಕಾರಿಗಳು ಹಾಗೂ ಮುದೇನೂರು ಗ್ರಾಮದ ಕಾರ್ಮಿಕರು ಯುವ ಮಿತ್ರರು ಗುರುಹಿರಿಯರು ಗ್ರಾಮದ ಅಧ್ಯಕ್ಷರು ಸರ್ವಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದರು.

Leave a Reply

Your email address will not be published. Required fields are marked *

Scan the code