ದೆಹಲಿಯಿಂದ ಬಂದು ಕರ್ನಾಟಕ ವಿಧಾನಸಭಾದಲ್ಲಿ ಪಾಕ್ ಪರ ಘೋಷಣೆ ಕೂಗಿದ, ರಾಷ್ಟ್ರೀಯ ಕಾಂಗ್ರೆಸ್ ಸಂಯೋಜಕ ಮೊಹಮ್ಮದ್ ಇಲ್ತಾಜ್
(BENGALURU): ಕರ್ನಾಟಕ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಪಾಕ್ ಪರ ಘೋಷಣೆ, ಪೋಲಿಸರು ಮೂವರು ದೇಶ ದ್ರೋಹಿಗಳನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಒಬ್ಬ ಪಾಕಿಸ್ತಾನ ಎಂದು ಘೋಷಣೆ ಕೂಗಿದ್ದು ಇನ್ನಿಬ್ಬರು “ಜಿಂದಾಬಾದ್” ಎಂದು ಜೊತೆಗೂಡಿ ಕೂಗಿದ್ದಾರೆ. ಈ ವಿಷಯ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.
ಫೆ- 27ರಂದು ರಾಜ್ಯಸಭಾ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ನ (ಸೈಯದ್ ನಾಸಿರ್ ಹುಸೇನ್) ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಆರೋಪವಿತ್ತು. ನಾಸಿರ್ ಸಾಬ್ ಜಿಂದಾಬಾದ್ ಎಂದಿರುವುದಾಗಿ ಕೆಲವರು ತಿಳಿಸಿದರು.
ಘೋಷಣೆ ಕೂಗಿದ್ದ ದೃಶ್ಯ ವಾಹಿನಿಗಳ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಸೆರೆಹಿಡಿದ ಎಲ್ಲ ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಲಯಕ್ಕೆ ಕಳುಹಿಸಲಾಗಿತ್ತು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜವೆಂಬುದು ಪ್ರಯೋಗಾಲಯದಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ದೆಹಲಿ ಕಿಶನ್ ಗಂಝನ ರಾಷ್ಟ್ರೀಯ ಕಾಂಗ್ರೆಸ್ ಸಂಯೋಜಕ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆಯ ಬ್ಯಾಡಗಿಯ ಮಹಮ್ಮದ್ ಶಾಫಿ ನಾಶಿಪುಡಿ, ಬೆಂಗಳೂರು ಜಯಮಹಲ್ ನ ಮುನಾವರ್ ಮಹ್ಮದ್, ಪೋಲಿಸರು ಬಂಧಿಸಿದ ಆರೋಪಿಗಳು.
ದೆಹಲಿ ಕಿಶನ್ ಗಂಝನ ರಾಷ್ಟ್ರೀಯ ಕಾಂಗ್ರೆಸ್ ಸಂಯೋಜಕ ಮೊಹಮ್ಮದ್ ಇಲ್ತಾಜ್, ಸದಾ ಕಾಂಗ್ರೆಸ್ ಜೊತೆ ಇದ್ದ ಇಲ್ತಾಜ್ ರಾಷ್ಟ್ರೀಯ ಕಾಂಗ್ರೆಸ್ ಸಂಯೋಜಕ ಕಾರ್ಯನಿರ್ವಹಿಸುತ್ತಿದ್ದು, ಭಾರತ್ ಜೋಡೋ, ಹಾಗೂ ಕಾಂಗ್ರೆಸ್ ನ ಯಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ಕಾಂಗ್ರೆಸ್ ನ ಮುಖ್ಯಸ್ಥಾನ ವಹಿಸಿದ್ದ. ಹಾವೇರಿ ಜಿಲ್ಲೆಯ ಬ್ಯಾಡಗಿಯ ಮಹಮ್ಮದ್ ಶಾಫಿ ನಾಶಿಪುಡಿ ಎರಡು ತಿಂಗಳ ಹಿಂದೆ ಪಾಕಿಸ್ತಾನಕ್ಕೆ ಹೋಗಿದ್ದ ಎಂದು ಭಜರಂಗದಳ ಕಾರ್ಯಕರ್ತರು ತಿಳಿಸಿದ್ದಾರೆ.