ದಕ್ಷಿಣಕನ್ನಡನ್ಯೂಸ್

ದಕ್ಷಿಣ ಕನ್ನಡದಲ್ಲಿ  ಹೆಚ್ಚುತ್ತಿರುವ ನಕ್ಸಲ್‌ರ ಹಾವಳಿ…!

ದಕ್ಷಿಣ ಕನ್ನಡದಲ್ಲಿ  ಹೆಚ್ಚುತ್ತಿರುವ ನಕ್ಸಲ್‌ರ ಹಾವಳಿ…!

(MAGALURU): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಮಂಗಳೂರಿನಲ್ಲಿ) ಕಳೆದ 5 ವರ್ಷಗಳಿಂದ ನಿಯಂತ್ರಣದಲ್ಲಿದ್ದ ನೆಕ್ಸಲರು ಮಾರ್ಚ್18 ತಾರೀಕು ಮತ್ತೇ ಕಾಣಿಸಿಕೊಂಡಿದ್ದು ಜನರು ಆತಂಕ ಪಡುವಂತಾಗಿದೆ.  ಕಡಮಕಲ್ಲು, ಬಳಿಯ, ಕೂಜಿಮಲೆ ರಬ್ಬ‌ರ್ ಎಸ್ಟೇಟ್ ಬಳಿ ಇರುವ ಅಂಗಡಿಯೊಂದಕ್ಕೆ ಎಂಟು ಮಂದಿ ನಕ್ಸಲರ ತಂಡ ಆಗಮಿಸಿ ದಿನಸಿ ಖರೀದಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.   

                     
ಇತ್ತೀಚೆಗೆ ಕೊಲ್ಲೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ನಕ್ಸಲರು, ಈಗ ಕೊಡಗು ಮತ್ತು ದಕ್ಷಿಣ ಕನ್ನಡದಲ್ಲು ಪ್ರತ್ಯಕ್ಷರಾಗಿದ್ದಾರೆ.ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ಕೂಡಲೆ  ಪೊಲೀಸ್ ರು ನಕ್ಸಲರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಜೋತೆಗೆ ಕೂಜಿಮಲೆ, ಕಲ್ಮಕಾಲ್ಕೆ ನಕ್ಸಲ್ ನಿಗ್ರಹ ಪಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲ್ಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಳಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿತ್ತು. 20 ವರ್ಷಗಳ ಹಿಂದೆ ಆತ ನಕ್ಸಲೈಟ್‌ ಆಗಿದ್ದು ಕೇರಳದಲ್ಲಿ ಈತ ತನ್ನ ಚಟುವಟಿಕೆ ನಡೆಸುತಿದ್ದ. ಕಳೆದ ಬಾರಿ ಕೇರಳದ ಬೈಂದೂರಿಗೆ ಮೂವರು ಶಸ್ತ್ರಸ್ತದೊಂದಿಗೆ ಬೈಂದೂರಿಗೆ ಆಗಮಿಸಿರುವ ಮಾಹಿತಿ ತಿಳಿದುಬಂದಿದೆ .ಈ ಹಿನ್ನಲೆಯಲ್ಲಿ  ಪೊಲೀಸರು ಹೆಚ್ಚು ಅಲರ್ಟ್ ಆಗಿದ್ದಾರೆ.

Leave a Reply

Your email address will not be published. Required fields are marked *

Scan the code