ಜಿಲ್ಲೆನ್ಯೂಸ್

ಪಾಠಮಾಡುವ ಮೇಷ್ಟ್ರು ಬೇಕಾಗಿದ್ದಾರೆ.
ಸಮ್ಮೇಳನ ಸರ್ವಾಧ್ಯಕ್ಷೆ ಕು.ಮಾನ್ವಿ ಕರೂರು

ಪಾಠಮಾಡುವ ಮೇಷ್ಟ್ರು ಬೇಕಾಗಿದ್ದಾರೆ. ಸಮ್ಮೇಳನ ಸರ್ವಾಧ್ಯಕ್ಷೆ ಕು.ಮಾನ್ವಿ ಕರೂರು


(SHIVAMOGA): ಸೊರಬ-ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಶಕ್ತಿ ಇದೆ ಎಂದು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಆರ್. ಹೇಳಿದರು ಅವರು ಇಲ್ಲಿನ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಮಿತಿ ಹಾಗೂ ಸೊರಬ ತಾಲೂಕು ಘಟಕ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾಮಟ್ಟದ 18ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಪ್ರಾಚೀನ ಪರಂಪರೆ ಇದೆ ಇಂತಹ ಕನ್ನಡದ ಧೀಮಂತ ಸಾಂಸ್ಕೃತಿಕ ಮನಸ್ಸು ಇರುವುದು ಕನ್ನಡದ ನೆಲಕ್ಕೆ ಮಾತ್ರ ಪಂಪನಿಂದ ಆರಂಭಿಸಿ ಇಂದಿನ ಕವಿಪುಂಗವರವರೆಗೆ ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ನಮ್ಮೆದುರಿಗೆ ಅನೇಕ ಸವಾಲುಗಳಿವೆ ಅಂತಹ ಸವಾಲುಗಳನ್ನು ಎದುರಿಸುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಯಿಂದ ಮನಸ್ಸುಗಳನ್ನು ಕಟ್ಟುವ ಕೆಲಸ ಆಗುತ್ತಿರುವುದು ಅಭಿನಂದನಿಯ. ಅದರಲ್ಲೂ ಮಕ್ಕಳಲ್ಲಿ ಸಾಹಿತ್ಯದ ಪರಿಸರವನ್ನು ನಿರ್ಮಾಣ ಮಾಡುವ ಮೂಲಕ ಸಾಹಿತ್ಯದಲ್ಲಿ ಬೆಳೆಸುವ ಕೆಲಸ ಮಾಡಿಸುತ್ತಿರುವುದು ಅಭಿನಂದನಿಯ ಇದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದವರು ಹೇಳಿದರು.


ಸಮ್ಮೇಳನದ ಸರ್ವಾಧ್ಯಕ್ಷರಾದ ಕುಮಾರಿ ಕೆ.ಪಿ. ಮಾನ್ವಿ ಕರೂರು. ಮಾತನಾಡಿ ಇಂದು ಕನ್ನಡ ಸಾಹಿತ್ಯ ವಿಶ್ವಮಟ್ಟದಲ್ಲಿ ಬೆಳೆಯುತ್ತದೆ ಇಂತಹ ಕನ್ನಡದ ನೆಲದಲ್ಲಿ ಅನೇಕ ಸಾಹಿತ್ಯ ದಿಗ್ಗಜರು ತಮ್ಮದೇ ಆದ ರೀತಿಯಲ್ಲಿ ಜಗತ್ತಿಗೆ ಸಾಹಿತ್ಯವನ್ನು ನೀಡಿದ್ದಾರೆ ಅದರಲ್ಲೂ ವಿಶೇಷವಾಗಿ ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಸಾಹಿತ್ಯಕ್ಕೆ ಇರುವಷ್ಟು ಮಹತ್ವ ಬೇರೆಲ್ಲೂ ಕಂಡುಬರುವುದಿಲ್ಲ ಇಲ್ಲಿನ ಪರಿಸರವೇ ಸಾಹಿತ್ಯಕ್ಕೆ ಪೂರಕವಾಗಿದೆ ಹಾಗಾಗಿ ಮನೆ ಮನೆಯಲ್ಲೂ ಸಾಹಿತಿ ಕಲಾವಿದರನ್ನು ಕಾಣಬಹುದಾಗಿದೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಸಾಹಿತ್ಯವನ್ನು ಬೆಳೆಸುವ ಕಾರ್ಯ ನಡೆಯುತ್ತಿದೆ. ಇದು ಅತ್ಯಂತ ಆಶಾದಾಯಕವಾದ ಕೆಲಸವಾಗಿದೆ. ಪ್ರತಿಯೊಬ್ಬರಲ್ಲೂ ಸಾಹಿತ್ಯದ ಮನಸ್ಸು ಇರುತ್ತದೆ ಅದನ್ನು ಹೊರ ತರುವ ಕೆಲಸ ಆಗಬೇಕಾಗಿದೆ. ಸಾಹಿತ್ಯ ಬರೆಯುವುದಕ್ಕಿಂತ ಮುಂಚೆ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಮನುಷ್ಯ ಸಂಬಂಧಗಳು ಹೆಚ್ಚಿಸಬೇಕಾಗಿದೆ ಪ್ರತಿಯೊಬ್ಬರಲ್ಲೂ ಸಾಹಿತ್ಯ ಹೊರ ಹಾಕುವ ಕೆಲಸ ಮಾಡಬೇಕಾಗಿದೆ. ಕಲಿಯುವ ಹಾಗೂ ಕಲಿಸುವ ವಿಧಾನವು ಬದಲಾಗಬೇಕಾಗಿದೆ ವಿಶೇಷವಾಗಿ ನಮ್ಮ ಶಾಲೆಗಳಲ್ಲಿ ಅಂಕಗಳಿಗೆ ಮಹತ್ವ ನೀಡುತ್ತಿರುವುದು ಶೋಚನಿಯವಾಗಿದೆ. ನಮಗೆ ಪಾಠ ಮಾಡುವ ಮೇಷ್ಟರು ಬೇಕಾಗಿದ್ದಾರೆ ಶಾಲೆಗಳು ನಮಗಿಂದು ಅಂಕಗಳಿಕೆಯ ಕೋಣೆಗಳಾಗಿವೆ. ಇಲ್ಲಿ ಜೀವನ ಮೌಲ್ಯದ ತಿಳಿಸುವ ನೈತಿಕ ಪಾಠಗಳು ಬೇಕಾಗಿದೆ ಅಂಕಗಳಿಗಾಗಿ ಹರೆಯ ಮಗು ಮನಸ್ಸಿನ ನಮ್ಮತನವನ್ನು ನಾಶ ಮಾಡಲಾಗುತ್ತದೆ ನಮ್ಮ ಓದಿನ ಜೊತೆಯಲ್ಲಿ ಜೀವನ ಪಾಠ ಹೇಳಿಕೊಡುವ ಮೇಷ್ಟರನ್ನು ತಂದುಕೊಡಿ ಅಂಕಗಳ ಬಂಧನದಿಂದ ನಮ್ಮನ್ನು ಹೊರತನ್ನಿ. ಅಂಕಪಟ್ಟಿಯಿಂದಲೇ ಬದುಕು ರೂಪುಗೊಳ್ಳುವುದು ಗೆಲ್ಲಬೇಕು ಸಾಮರ್ಥ್ಯಕ್ಕನುಗುಣವಾಗಿ ಜೀವನ ಸಜ್ಜುಗೊಳ್ಳಬೇಕಾಗಿದೆ.

ಪಟ್ಟಣ ಹಳ್ಳಿ ಶಿಕ್ಷಣದ ಅಸಮಾನತೆಯನ್ನು ನೀಗಿಸಿ ಶಿಕ್ಷಕರಿಂದ ಹಿಡಿದು ಎಲ್ಲಾ ವ್ಯವಸ್ಥೆಗಳಿದ್ದು ಕಲಿಯುವ ಪೇಟೆ ಶಾಲೆ ಒಂದೆಡೆಯಾದರೆ ಶಿಕ್ಷಕರಿಲ್ಲದೆ ಪಾಠಗಳಿಲ್ಲದೆ ಅರೇಬೆಂದ ಹಳ್ಳಿ ಶಾಲೆಗಳು ಇನ್ನೊಂದೆಡೆ ಈಗಾಗಲೇ ಸಮಾನತೆಯ ಕೂಗು ಎಲ್ಲಿಂದ ಬರಬೇಕಾಗುತ್ತದೆ ಶಿಕ್ಷಣ ನಿರುದ್ಯೋಗದ ಕಾರ್ಖಾನೆಗಳಾಗುತ್ತಿವೆ ಹಳ್ಳಿ ಶಾಲೆಗಳಲ್ಲಿ ಮಾತೃಭಾಷೆ ಕನ್ನಡವನ್ನು ಇರಿಸಿಕೊಂಡು ಒಂದನೇ ತರಗತಿಯಿಂದ ಇಂಗ್ಲೀಷ್ ಕೂಡ ಕಲಿಸಬೇಕಾಗಿದೆ ಪ್ರೌಢಶಾಲೆಗಳಲ್ಲಿ ಕನಿಷ್ಠ ಎರಡು ಜನ ಶಿಕ್ಷಕಿಯರನ್ನು ಇರಿಸುವ ಅಗತ್ಯ ಹಾಗೂ ಅನಿವಾರ್ಯತೆ ಇದೆ ಹದಿ ಹರಿಯ ಎನ್ನುವುದು ಬದುಕಿನ ಬಹಳ ಮುಖ್ಯ ಕ್ಷಣ ಈ ಹೊತ್ತಿನಲ್ಲಿ ಮಾರ್ಗದರ್ಶನ ನೀಡುವ ಹೆಣ್ಣು ಮಕ್ಕಳಿಗೆ ಶಿಕ್ಷಕರು ಅಗತ್ಯವಾಗಿದೆ ನಮ್ಮ ಪೋಷಕರ ಮನಸ್ಥಿತಿಗಳು ಬದಲಾಗಬೇಕಾಗಿದೆ. ವಿಶೇಷವಾಗಿ ಶಾಲೆಗಳಲ್ಲಿ ಕ್ಷೇಮ ಪಾಲನ ಸಮಿತಿಗಳಾಗಬೇಕು ಮಕ್ಕಳ ಮನಸ್ಸುಗಳನ್ನು ಅರಿತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕ್ಷೇಮಪಾಲನ ಸಮಿತಿಗಳು ತುಂಬಾ ಅಗತ್ಯವಾಗಿದೆ ಇವನ್ನು ಜಾರಿ ಮಾಡುವಲ್ಲಿ ಸರ್ಕಾರ ಮುಂದೆ ಬರಬೇಕಾಗಿದೆ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಹೆಣ್ಣು ಮಕ್ಕಳಿಗೆ ಇಂದಿಗೂ ಅಭದ್ರತೆ ಕಾಡುತ್ತಿದೆ ಸ್ವತಂತ್ರವಾಗಿ ಬದುಕುವ ಶಕ್ತಿ ಇಂದಿಗೂ ಸಾಧ್ಯವಾಗುತ್ತಿಲ್ಲ ಹಾಗಾಗಿ ಲಿಂಗ ಸಮಾನತೆ ಬರುವುದು ಬಹಳ ಮುಖ್ಯವಾಗಿದೆ ಪರಿಸರವನ್ನು ಉಳಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ನಮ್ಮೂರಿನ ಇನ್ನೀರಿನ ಜನರ ಬದುಕಿನ ಕಷ್ಟಗಳು ದೂರವಾಗಬೇಕಾಗಿದೆ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಲು ಸರ್ಕಾರ ಮುಂದಾಗಬೇಕಾಗಿದೆ ಜೊತೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಹಾಗೂ ಮಕ್ಕಳ ಸಾಹಿತ್ಯಕ್ಕೆ ವಿಶೇಷ ಅನುದಾನಗಳನ್ನು ಸರ್ಕಾರ ನೀಡುವ ಮೂಲಕ ಮಕ್ಕಳಲ್ಲಿರುವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುವ ಕೆಲಸ ಆಗಬೇಕಾಗಿದೆ ಪರಿಸರದ ಹೆಸರಿನಲ್ಲಿ ನಡೆಯುತ್ತಿರುವ ರೈತರ ಮೇಲಿನ ದೌರ್ಜನ್ಯ ನಿಲ್ಲಬೇಕಾಗಿದೆ.

ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲಾ ರೀತಿಯ ಪರಿಸರ ನಿರ್ಮಾಣವಾಗಬೇಕಾಗಿದೆ ಕಲಿಕೆಗೆ ಕೇವಲ ಅಂಕಗಳನ್ನು ಮುಂದಿಟ್ಟುಕೊಂಡು ಮಕ್ಕಳ ಮನಸ್ಸನ್ನು ಅಳೆಯುತ್ತಿರುವುದು ಸರಿಯಲ್ಲ ಅವರಲ್ಲೂ ಸಾಹಿತ್ಯದ ಮನಸ್ಸು ಇರುತ್ತದೆ ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ ಇಂತಹ ಅನೇಕ ಪ್ರತಿಫಲಗಳನ್ನು ಗುರುತಿಸುವ ಕೆಲಸ ಆಗಬೇಕಾಗಿದೆ ಎಂದವರು ಹೇಳಿದರು ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಡಿ ಮಂಜುನಾಥ್ ಆಸೆ ನುಡಿಗಳ ನಾಡಿ ನಾವು ಮಕ್ಕಳಲ್ಲಿರುವ ಸೃಜನಾತ್ಮಕ ಮನಸ್ಸನ್ನು ಗುರುತಿಸದೇ ಇರುವುದು ವಿಷಾದನೀಯ ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿರುವ ಸಾಹಿತ್ಯದ ಸದಾಭಿರುಚಿಯನ್ನು ಗುರುತಿಸುವ ಕೆಲಸ ಆಗಬೇಕಾಗಿದೆ ಮಕ್ಕಳ ಮನಸ್ಸನ್ನು ಅರಿತು ಕಲಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಸಾಕಷ್ಟು ಜನ ಮಕ್ಕಳು ತಮ್ಮ ಪ್ರತಿಭೆಗಳನ್ನು ಇಂತಹ ವೇದಿಕೆಗಳ ಮೂಲಕ ಗುರುತಿಸಿಕೊಂಡಿರುವುದು ಅಭಿನಂದನೆಯ ಹಾಗಾಗಿ ನಮ್ಮ ಸಂಸ್ಥೆಗಳು ಕಳೆದ ಮೂರು ದಶಕಗಳಿಂದ ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾದ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ನಡೆಸುತ್ತಾ ಬಂದಿದ್ದೇವೆೀ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ದೊರಕಿದೆ ಎಂದವರು ಹೇಳಿದರು ಈ ಸಂದರ್ಭದಲ್ಲಿ ಸರ್ವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಶಂಕರ್ ಸೆಟ್ ಕಾಸಪ್ಪ ಅಧ್ಯಕ್ಷರಾದ ಶಿವಾನಂದ ಪಾಣಿ ಆನವಟ್ಟಿ ಹೋಬಳಿ ಘಟಕದ ಅಧ್ಯಕ್ಷರಾದ ಕಾರ್ತಿಕ್ ಸಾಹುಕಾರ್ ಬಸವನಗೌಡರು ಕಲಂದರ್ಸಾಬ್ ಪಾಣಿ ರಾಜಪ್ಪ ಲೋಕಸಭಾ ಕಸ್ತೂರಿ ಸಾಗರ್ ಮೊದಲಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಸೊರಬ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿವಿಧ ಕಲಾತಂಡಗಳೊಂದಿಗೆ ಭವ್ಯವಾದ ಮೆರವಣಿಗೆಯನ್ನು ಸಮ್ಮೇಳನ ಅಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು ಮೆರವಣಿಗೆ ಸೊರಬದ ಜನರನ್ನು ಆಕರ್ಷಿಸಿತ್ತು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code