ಅಧಿಕಾರಗಳ ನಿರ್ಲಕ್ಷವೆ ಬಡ ಜನರ ಪಾಲಿಗೆ ಮುಳ್ಳು…! ರಾಜಕೀಯಕ್ಕೆ ತುತ್ತಾದ ವೃದ್ಧೆಮನೆ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ N R ಪುರ ತಾಲೂಕಿನ ಮೆಲ್ಬಾಲ್ ಗ್ರಾಮ ಪಂಚಾಯಿತಿ ಕರ್ಕೇಶ್ವರ ಕೈಮರ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಗುಲಾಬಿ c/o ತಿಮ್ಮೆ ಗೌಡ್ಲುರವರ ಮನೆ ಮಳೆಗೆ ಮನೆಯ ಮೇಲ್ಚಾವಣಿ ಬಿದ್ದಿರುತ್ತೆದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ PDO ಪ್ರೇಮ್ ಕುಮಾರ್, ಅಧ್ಯಕ್ಷರು ರಾಜೇಶ್ ಕೇಶವತಿ, ಹಾಗು ತಹಸೀಲ್ದಾರ್ ರವರ ಗಮನಕ್ಕೆ ಅನೇಕ ಬಾರಿ ಈ ವಿಷಯವನ್ನು ಗಮನಕ್ಕೆ ತಂದರು ಮನವಿಗೆ ಸ್ಪಂದಿಸಿಲ್ಲ.
ವಿಧಾನಸಭಾ ಕ್ಷೇತ್ರ ಚುನಾವಣೆ ಆಗುವವರೆಗೆ ಮಾತ್ರ ಬರವಸೆಯನ್ನು ಕೊಟ್ಟು ಚುನಾವಣೆ ಮುಗಿದ ನಂತರ ಆ ಭಾಗವನ್ನೇ ಮರೆತುಬಿಟ್ಟರು. ಅಧಿಕಾರಿಗಳಿಂದಾನೇ ಇಂದು ಗುಲಾಬಿ c/o ತಿಮ್ಮೆ ಗೌಡ್ಲುರವರ ಮನೆ ಈ ಸ್ಥಿತಿಗೆ ಬಂದಿದೆ ಎನ್ನಲಾಗಿದೆ. ಅಧಿಕಾರಗಳ ನಿರ್ಲಕ್ಷವೇ ಬಡಜನರ ಪಾಲಿಗೆ ಮುಳ್ಳಾಗಿದೆ.
ಕೂಲಿನಾಲಿ ಮಾಡಿ ಬದುಕು ದೂಡುತ್ತಿರುವ ವೃದ್ದೆ ಗುಲಾಬಿ ರವರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೊರಗೆ ಬಂದು ಮತ್ತೊಂದು ಸೂರು ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಶಿಥಿಲಗೊಂಡಿರುವ ಮನೆಗೆ ಟಾರ್ಪಲ್ ಗಳನ್ನು ಹಾಸಿ ವಾಸ ಮಾಡುತಿದ್ದರು. ಇದೀಗ ಆ ಮೇಲ್ಚಾವಣಿ ಕೂಡ ಬಿದ್ದು ಹೋಗಿದೆ. ಗುಲಾಬಿ ಅವರ ಮನೆಯ ಪಕ್ಕದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನೆಯಿದ್ದು ಅಧ್ಯಕ್ಷರು ನೋಡಿದರೂ ನೋಡದಂತಿರುವುದು ಅನ್ಯಾಯವಾಗಿದೆ.
2 ನವೆಂಬರ್ 2023 ರಲ್ಲೀ ಮನೆ ಶಿಥಿಲಗೊಂಡ ವಿಷಯವಾಗಿ ವೆಸ್ಟರ್ನ್ ಘಾಟ್ ನ್ಯೂಸ್ ಸುದ್ದಿ ಮಾಧ್ಯಮದಲ್ಲಿ ಸುದ್ದಿ ಸಹ ಮಾಡಲಾಗಿತ್ತು. ಅಧಿಕಾರಿಗಳಿಗೆ ಫೋನ್ ಕರೆ ಮೂಲಕ ಮನವಿ ಸಹ ಮಾಡಿಕೊಳ್ಳಲಾಗಿತ್ತು. ಯಾವುದಕ್ಕೂ ಸ್ಪಂಧಿಸದೆ ಎಚ್ಚೆತ್ತುಕೊಳ್ಳದ ಅಧಿಕಾರಗಳ ನಿರ್ಲಕ್ಷವೇ ಈ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ರಾಜಕೀಯಕ್ಕೆ ತುತ್ತಾದ ವೃದ್ಧೆ ಮನೆ.