ಕೋಲಾರನ್ಯೂಸ್

ವಿದ್ಯುತ್ ತಂತಿಗಳು, ಪ್ಲಗ್‌ಗಳೊಂದಿಗೆ ಎಂದಿಗೂ ಆಟವಾಡಬೇಡಿ.

ವಿದ್ಯುತ್ ತಂತಿಗಳು, ಪ್ಲಗ್‌ಗಳೊಂದಿಗೆ ಎಂದಿಗೂ ಆಟವಾಡಬೇಡಿ.

(KOLARA): ಬಂಗಾರಪೇಟೆ: ವಿದ್ಯುತ್ ತಂತಿಗಳು, ತಂತಿಗಳು, ಸ್ವಿಚ್‌ಗಳು ಅಥವಾ ಪ್ಲಗ್‌ಗಳೊಂದಿಗೆ ಎಂದಿಗೂ ಆಟವಾಡಬೇಡಿ. ಒದ್ದೆಯಾದ ಕೈಗಳಿಂದ ಅಥವಾ ಒದ್ದೆಯಾದ ಮೇಲ್ಮೈಯಲ್ಲಿ ನಿಂತಿರುವಾಗ ಅವುಗಳನ್ನು ಬಳಸುವುದನ್ನು ತಡೆಯಬೇಕೆಂದು ಬೆಸ್ಕಾಂ ಎಇಇ ರಾಮಕೃಷ್ಣಪ್ಪ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಸ್ಕಾಂ ಹಾಗೂ ನಿಸರ್ಗ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಸಹಯೋಗದಲ್ಲಿ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬೆಸ್ಕಾಂ ವಿದ್ಯುತ್ ಅಪಘಾತಗಳು ಆಗದಂತೆ ಎಷ್ಟೋ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದರೂ ಕೆಲವೊಂದು ಅಚಾರ್ತುಗಳಿಂದ ದುರಂತಗಳು ಸಂಭವಿಸುತ್ತಿದೆ, ದಿನನಿತ್ಯ ಬೆಸ್ಕಾಂ ಸಿಬ್ಬಂದಿ ಎಲ್ಲೇ ಸಮಸ್ಯೆ ಇದ್ದರೂ ಬಗೆಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದoತೆ ಕೆಲಸ ನಿರ್ವಹಿಸುತ್ತಾರೆ, ಆದರೆ ಕೆಲವೊಂದು ಸಂದರ್ಭಗಳಲ್ಲಿ, ಮಳೆಗಾಲ, ಬಿರುಗಾಳಿ ವೇಳೆ ಅಪಘಾತಗಳಾಗುತ್ತವೆ, ಈ ಸಂದರ್ಭದಲ್ಲಿ ಜನರು ಎಚ್ಚೆತ್ತುಕೊಂಡು ವಿದ್ಯುತ್ ಪ್ರವಹಿಸುವ ಸ್ಥಳಗಳಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು ಎಂದರು.


ಮಕ್ಕಳು ವಿದ್ಯುತ್ ಎಂದರೆ ಮಾರುದ್ದ ದೂರವಿರಬೇಕು, ಏನೂ ಆಗುವುದಿಲ್ಲ, ಇನ್ನಿತರೇ ತಾತ್ಸಾರ ಮನೋಭಾವನೆಯಿಂದ ಎಷ್ಟೋ ಮಕ್ಕಳು, ಪೋಷಕರು ವಿದ್ಯುತ್ ಅವಘಡಗಳಿಗೆ ಬಲಿಯಾಗಿರುವುದು ನಮ್ಮ ಕಣ್ಣ ಮುಂದೆ ಇದೆ, ಇನ್ನು ಮುಂದಾದರೂ ಮಕ್ಕಳು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಇoದು ಉಪಕರಣಗಳು ಅಂತರ್ನಿರ್ಮಿತ ಸುರಕ್ಷತೆಗಳೊಂದಿಗೆ ಬಂದರೂ ಸಹ, ವಿದ್ಯುತ್ ಬಳಸುವಾಗ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅಭ್ಯಾಸ ಮಾಡುವುದು ಯಾವಾಗಲೂ ಉತ್ತಮವಾಗಿದೆ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಯಾವುದೇ ಅಪಘಾತದಿಂದ ಸುರಕ್ಷಿತವಾಗಿರಿಸಲು ಮನೆಯಲ್ಲಿ ವಿದ್ಯುತ್ ಮತ್ತು ವಿದ್ಯುತ್ ಉಪಕರಣಗಳೊಂದಿಗೆ ವ್ಯವಹರಿಸುವಾಗ ದಯವಿಟ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಗಾಳಿ ಪಟಗಳು, ಬಲೂನ್‌ಗಳು ಮತ್ತು ಮಾದರಿಯ ವಿಮಾನಗಳನ್ನು ಓವರ್‌ಹೆಡ್ ವಿದ್ಯುತ್ ತಂತಿಗಳ ಬಳಿ ಎಂದಿಗೂ ಹಾರಿಸಬೇಡಿ, ಒಂದು ಸಾಲಿನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡರೆ, ಅದನ್ನು ತೆಗೆದುಹಾಕಲು ಪ್ರಯತ್ನಿಸಬೇಡಿ ಎಂದು ಕಿವಿ ಮಾತು ಹೇಳಿದರು.


ಬೆಸ್ಕಾಂನ ಸಹಾಯಕ ಇಂಜಿನಿಯರ್ ಶಿವಕುಮಾರ್, ಆಶಾ, ಸುಬ್ರಮಣಿ, ಮೋಹನ್, ಅಂಬರೀಶ್, ಮಂಜುನಾಥ್, ವೇಣುಗೋಪಾಲ್, ಪ್ರಸಾದ್, ನಾಗರಾಜ್, ಈಶ್ವರಪ್ಪ, ಮಂಜುನಾಥ್, ಗುತ್ತಿಗೆದಾರರಾದ ಗಾಜಗ ಕೃಷ್ಣಪ್ಪ, ಕಾರವನಹಳ್ಳಿ ವೆಂಕಟೇಶ್, ಶ್ರೀನಿವಾಸ್ ಮೊದಲಾದವರು ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code