ಬಿಜೆಪಿಯವರು ಏನೇ ಕುತಂತ್ರ ಮಾಡಿದರು, ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.
(KOLARA): ಬಂಗಾರಪೇಟೆ: ಬಿಜೆಪಿಯವರಿಗೆ ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲದೆ. ಸರ್ಕಾರ ಇದ್ದಾಗ ಬರಿ ಹಗರಣಗಳ ಮಾಡುವುದೇ ಅವರ ಉದ್ಯೋಗವಾಗಿತ್ತು.ಈಗ ಸಿದ್ದರಾಮಯ್ಯ ನೀಡಿದಂತಹ ಐದು ಗ್ಯಾರಂಟಿಗಳನ್ನು ಸಹಿಸಿಕೊಳ್ಳಲು ಆಗದೆ ಏನಾದರೂ ಮಾಡಿ ಸಿದ್ದರಾಮಯ್ಯನವರನ್ನು ಕೆಳಗಿಳಿಸಬೇಕೆಂದು ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಶಾಸಕರು ಸಿಟಿ ರೌಂಡ್ಸ್ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರನ್ನು ಅಮಿತ್ ಶಾ ಮತ್ತು ಮೋದಿಯವರು ತಮ್ಮ ಕೈ ಗೊಂಬೆಯಂತೆ ಬಳಸಿಕೊಂಡು ಸಂಬಂಧವೇ ಇಲ್ಲದ ದೂರನ್ನು ಬಳಸಿಕೊಂಡು. ಸಿದ್ದರಾಮಯ್ಯನವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.ಸಿದ್ದರಾಮಯ್ಯನವರು ಯಾವುದೇ ಸಹಿ ಮಾಡಿಲ್ಲ, ಪತ್ರ ನೀಡಿಲ್ಲ, ಹಣ ಪಡೆದಿಲ್ಲ, ಲಂಚ ಪಡೆದಿಲ್ಲ, ಬಿಜೆಪಿಯವರಿಗೆ ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲದೆ. ಸರ್ಕಾರ ಇದ್ದಾಗ ಬರಿ ಹಗರಣಗಳ ಮಾಡುವುದೇ ಅವರ ಉದ್ಯೋಗವಾಗಿತ್ತು.ಈಗ ಸಿದ್ದರಾಮಯ್ಯ ನೀಡಿದಂತಹ ಐದು ಗ್ಯಾರಂಟಿಗಳನ್ನು ಸಹಿಸಿಕೊಳ್ಳಲು ಆಗದೆ ಏನಾದರೂ ಮಾಡಿ ಸಿದ್ದರಾಮಯ್ಯನವರನ್ನು ಕೆಳಗಿಳಿಸಬೇಕೆಂದು ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಬಿಜೆಪಿಯವರನ್ನು ಪ್ರಶ್ನೆ ಮಾಡುತ್ತೇನೆ ಸಿದ್ದರಾಮಯ್ಯ ಯಾಕೆ ರಾಜೀನಾಮೆ ನೀಡಬೇಕು..? ನಿಮ್ಮ ಕೇಂದ್ರ ಮಂತ್ರಿ ಆಗಿರುವಂತಹ ಕುಮಾರಸ್ವಾಮಿ ಅವರ ಮೇಲೆ ಇವತ್ತು ಲೋಕಾಯುಕ್ತ ತನಿಖೆ ಮಾಡಿ, ತಪ್ಪಿತಸ್ಥ ಎಂದು ರಿಪೋರ್ಟ್ ನೀಡಿದೆ. ಮುರುಗೇಶ್, ಶಶಿಕಲಾ ಜೊಲ್ಲೆ ಹಾಗೂ ಯಡಿಯೂರಪ್ಪನ ಮೇಲೆ ಆರು ಕೇಸ್ ಗಳು ಇವೆ. ವಿಜಯೇಂದ್ರ ಮೇಲೆ ಭ್ರಷ್ಟಾಚಾರ ಕೇಸ್ ಇದೆ. ಆ ರೀತಿ ಏನಾದರೂ ಸಿದ್ದರಾಮಯ್ಯನವರು ಲಂಚ ಸ್ವೀಕಾರ ಮಾಡಿದ್ದಾರಾ. ಏನು ತಪ್ಪು ಮಾಡಿದರೆ ಎಂದು ಪ್ರಶ್ನಿಸಿದರು.
ನೀವು ಮಾಡಿದ ರೀತಿ ರಾಜ್ಯಭವನವನ್ನು ಬಳಸಿಕೊಂಡರೆ ಪ್ರತಿ ಎಂಎಲ್ಎ ಮೇಲೆ ಹಾಗೂ ಮಂತ್ರಿಗಳ ಮೇಲೆ ಎಫ್ಐಆರ್ ದಾಖಲು ಮಾಡಿಸಬಹುದು. ಎಫ್ಐಆರ್ ದಾಖಲಾದ ತಕ್ಷಣ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಎದೆಗುಂದುವುದಿಲ್ಲ ಯಾವುದೇ ತನಿಖೆ ಮಾಡಲಿ ನಾವು ಸಿದ್ದರಾಗಿದ್ದೇವೆ. ಸ್ಪಷ್ಟವಾಗಿ ತಿಳಿಸುತ್ತೇವೆ ಸಿದ್ದರಾಮಣ್ಣ ನೂರಕ್ಕೆ ನೂರರಷ್ಟು ತಪ್ಪು ಮಾಡಿಲ್ಲ, ಯಾವುದೇ ಕಾರಣಕ್ಕೂ ಸಹ ಸಿದ್ದರಾಮಣ್ಣನವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಬಿಜೆಪಿ ಜೆಡಿಎಸ್ ನವರು ಪಾಪ ಅಧಿಕಾರವಿಲ್ಲದೆ ಹತಾಶಯರಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಅವರ ಬೊಬ್ಬೆ ಕೇವಲ ಮಾಧ್ಯಮಗಳಿಗೆ ಮಾತ್ರ ಸೀಮಿತಾ.ಸಿದ್ದರಾಮಯ್ಯ ಅವರ ಬೆಂಬಲಕ್ಕಾಗಿ 136 ಶಾಸಕರು ಹಾಗೂ ಪಕ್ಷದ ಮುಖಂಡರು ನಾಯಕರು ಹಾಗೂ ಜೊತೆಗೆ ಹೈಕಮಾಂಡ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎಲ್ಲರೂ ಸಹ ಸಿದ್ದರಾಮಯ್ಯನವರ ಬೆಂಬಲಕ್ಕೆ ಇದ್ದಾರೆ ಕಾನೂನು ರೀತಿ ಎಲ್ಲಾ ಹೋರಾಟವನ್ನು ನಾವು ಮಾಡುತ್ತೇವೆ ಎಂದರು.
ನೂತನವಾಗಿ ಪುರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಭವಿಷ್ಯ ಅಭಿವೃದ್ಧಿ ವಾತಾವರಣ ಹಾಗೂ ಸ್ವಚ್ಛತೆ ವಾತಾವರಣ ಸೃಷ್ಟಿಯಾಗಿದೆ ಕಳೆದ ಒಂದು ವಾರದಿಂದ ಪ್ರತಿ ದಿನ ಒಂದೊಂದು ವಾರ್ಡಿನಂತೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸ್ವಾಗತ ಅರ್ಹ ಈಗಾಗಲೇ ಸುಮಾರು 7 ವಾರ್ಡುಗಳನ್ನು ಸ್ವಚ್ಛತೆಗೊಳಿಸಿದ್ದಾರೆ. ಅಧ್ಯಕ್ಷರು ಪುರಸಭೆ ಮುಖ್ಯ ಅಧಿಕಾರಿಯಾಗಿ ಸದಸ್ಯರು ಎಲ್ಲರೂ ಒಟ್ಟುಗೂಡಿ ನಗರದಲ್ಲಿ ಶುದ್ಧೀಕರಣ ಮಾಡಲು ಹಾಗೂ ಫುಟ್ಪಾತ್ ತೆರುಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಕ್ರಮವನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
ಏಕೆಂದರೆ ನಗರ ಸ್ವಚ್ಛವಾಗಿದ್ದರೆ. ದೂರದಿಂದ ಬರುವ ಸಾರ್ವಜನಿಕರಿಗೆ, ಹೆಣ್ಣು ಮಕ್ಕಳಿಗೆ, ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ, ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪುರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಸಹ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೂ ಸಹ ನಾವು ಕೂಡ ಕಾಲ್ನಡಿಗೆ ಮುಖಾಂತರ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಸಮಸ್ಯೆಗಳ ಬಗ್ಗೆ ಗಮನಹರಿಸುತಿದ್ದೇವೆ. ನಮ್ಮ ಉದ್ದೇಶ ಇಷ್ಟೇ ಈ ನಗರವನ್ನು ಸ್ವಚ್ಛತೆಯಗಿಡಬೇಕು, ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಬಂಗಾರಪೇಟೆ ಪುರಸಭೆ ಸ್ವಚ್ಛತೆಯಲ್ಲಿ ಉತ್ತಮ ಸ್ಥಾನ ಗಳಿಸಿದೆ. ಈ ಹೆಸರನ್ನು ನಾವು ಮುಂದುವರಿಸಬೇಕು ಅಧ್ಯಕ್ಷರು ಹಾಗೂ ಅವರ ತಂಡ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಈಗಾಗಲೇ ಕೋದಂಡರಾಮಸ್ವಾಮಿಯ ದೇವಾಲಯದ ಬಳಿ ಕಾಮಗಾರಿ ಪ್ರಾರಂಭವಾಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ. ಹಂತ ಹಂತವಾಗಿ ನಗರವನ್ನು ಅಭಿವೃದ್ಧಿಗೊಳಿಸುತ್ತೇವೆ. ಬೂದಿಕೋಟೆ ರಸ್ತೆ ಬಹಳ ಹಾಳಾಗಿದೆ. ಆ ರಸ್ತೆಯ ಕಾಮಗಾರಿಯನ್ನು ಸಹ ಆದಷ್ಟು ಬೇಗ ಪೂಜೆ ಸಲ್ಲಿಸಿ ಪ್ರಾರಂಭಿಸುತ್ತೇವೆ. ಆದಷ್ಟು ಬೇಗ ಬೂದಿಕೋಟೆಯ ರೈಲ್ವೆ ಬ್ರಿಜ್ ಸಹ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಚಂದು ಕುಮಾರ್, ಪುರಸಭೆ ಸದಸ್ಯ ಎಸ್ ವೆಂಕಟೇಶ್, ಪ್ರಶಾಂತ್, ಮುಖಂಡರಾದ ಗೋವಿಂದ, ಚಂಗಾರೆಡ್ಡಿ, ವೆಂಕಟೇಶ್ ಗೌಡ ಶ್ರೀಧರ್, ಹಾಗೂ ಇನ್ನೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ