ಕೋಲಾರನ್ಯೂಸ್

ಕ್ರೀಡೆಯಲ್ಲಿ ಯಾರೇ ಗೆಲ್ಲಲಿ,ಯಾರೇ  ಸೋಲಲಿ ಎಲ್ಲರೂ ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳೇ,

ಕ್ರೀಡೆಯಲ್ಲಿ ಯಾರೇ ಗೆಲ್ಲಲಿ,ಯಾರೇ  ಸೋಲಲಿ ಎಲ್ಲರೂ ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳೇ,

(KOLARA): ಬಂಗಾರಪೇಟೆ: ಕ್ರೀಡೆಯಲ್ಲಿ ಯಾರೇ ಗೆಲ್ಲಲಿ,ಯಾರೇ  ಸೋಲಲಿ ಎಲ್ಲರೂ ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳೇ,ಸೋಲು ಗೆಲ್ಲುವ ಎನ್ನುವ ಮನೋಭಾವ ಬೇಡ ಎಲ್ಲರೂ ಸ್ಪರ್ಧಾ ಮನೋಭಾವದಿಂದ ಸ್ವೀಕಾರ ಮಾಡಿ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಕುಪ್ಪನಹಳ್ಳಿಯ ಮೋದಿ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವ ಹಾಗೂ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ ಹುತಾತ್ಮ ನೌಕರರ ಸ್ಮರಣಾರ್ಥವಾಗಿ ಟೆನ್ನಿಸ್ ಬಾಲ್ ಟೂರ್ನಮೆಂಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಬೆಸ್ಕಾಂ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇಂದು ಒಟ್ಟುಗೂಡಿ ಟೆನ್ನಿಸ್ ಬಾಲ್ ಟೂರ್ನಮೆಂಟ್ ಆಯೋಜನೆ ಮಾಡಿರುವುದು ಸಂತಸದ ವಿಷಯವಾಗಿದೆ ಎಂದರು.

ಟೆನ್ನಿಸ್ ಬಾಲ್ ಕ್ರೀಡೆಯಲ್ಲಿ ಗೆಲ್ಲುವವರು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟಕ್ಕೆ ಹಾಗೂ ರಾಜ್ಯಮಟ್ಟಕ್ಕೆ ಹೋಗಬೇಕು ಎಂದು ಹಾರೈಸಿದರು.ಬೆಸ್ಕಾಂ ಇಲಾಖೆಯಲ್ಲಿ ಎಲ್ಲಾ ನೌಕರರು ಒಗ್ಗಟ್ಟಾಗಿದ್ದೀರಿ ಆದರೆ. ನೌಕರರ ಚುನಾವಣೆ ಬಂದಾಗ ಸೋಲು ಗೆಲುವು ಸಹಜ,ಸೋಲು ಗೆಲುವನ್ನು ನಾವು ಸಮಾನವಾಗಿ ಸ್ವೀಕರಿಸಬೇಕು. ಯಾರೇ ಸೋತಿದ್ದರು ಯಾರೆ ಗೆದ್ದಿದ್ದರು, ಎಲ್ಲರೂ ನಮ್ಮವರೇ ಎಂಬ ಭಾವನೆ ಎಲ್ಲರಲ್ಲೂ ಬರಬೇಕು ಎಂದು ಕಿವಿಮಾತು ಹೇಳಿದರು.

ತಾಲೂಕಿನಲ್ಲಿ ಈಗಾಗಲೇ 5 ಹೊಸ ವಿದ್ಯುತ್ ಸ್ಟೇಷನ್ಗಳನ್ನು ಮಂಜೂರು ಮಾಡಿದ್ದೇನೆ ಸ್ಥಳವನ್ನು ಪರಿಶೀಲನೆ ಮಾಡಲಾಗುತ್ತಿದೆ. ಒಂದು ವರ್ಷದ ಒಳಗೆ ಹೊಸ ಸ್ಟೇಷನ್ ಪ್ರಾರಂಭ ಮಾಡೇ ಮಾಡುತ್ತೇನೆ ನಂತರ ತಾಲೂಕಿನಲ್ಲಿ ಎಲ್ಲಿಯೂ ಸಹ ವೋಲ್ಟೇಜ್ ಸಮಸ್ಯೆ ಬರುವುದಿಲ್ಲ ಎಂದರು.

ವಿಶೇಷವಾಗಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರವಾದ ಹುತ್ತೂರು ಹೋಬಳಿಯ ಹೊಳಲಿ ಗ್ರಾಮದ ಸಮೀಪ ರಾಜ್ಯಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ಪ್ರಾರಂಭ ಮಾಡುತ್ತಿದ್ದೇನೆ. ಇದರಿಂದ ರಾಜ್ಯದ ಎಲ್ಲಾ ಕ್ರೀಡಾ ಅಭಿಮಾನಿಗಳಿಗೆ ಹಾಗೂ ಯುವಕರಿಗೆ  ಉಪಯೋಗವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಸದಸ್ಯರಾದ ಕೆ ಚಂದ್ರಾರೆಡ್ಡಿ, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಕುಮಾರ್ ರಾಜು ಬಸವರಾಜು, ಮುಖಂಡರಾದ ಮಹದೇವಪ್ಪ, ಗಾಜಗ ಕೃಷ್ಣಪ್ಪ, ಬೆಸ್ಕಾಂ ಸಂಘದ ಅಧ್ಯಕ್ಷ ಬಾಬು, ಕಾರ್ಯದರ್ಶಿ ನಾಗರಾಜ್, ಇನ್ಸ್ಪೆಕ್ಟರ್ ರಾಜಣ್ಣ, ರಾಮಚಂದ್ರಣ್ಣ, ಶ್ರೀನಿವಾಸ್ ರೆಡ್ಡಿ,ಈಶ್ವರ್, ಬ್ಯಾಡ ಬೆಲೆ ನಿರಂಜನ್, ಹಾಗೂ ಬೆಸ್ಕಾಂ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code