ಜಿಲ್ಲೆನ್ಯೂಸ್

ಸ್ವಾತಂತ್ರ ಹೋರಾಟದಲ್ಲಿ ಬಿಜೆಪಿ ಪಕ್ಷದ ಯಾರೊಬ್ಬರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ.

ಸ್ವಾತಂತ್ರ ಹೋರಾಟದಲ್ಲಿ ಬಿಜೆಪಿ ಪಕ್ಷದ ಯಾರೊಬ್ಬರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ.

(KOLARA): ಬಂಗಾರಪೇಟೆ: ಸ್ವಾತಂತ್ರ ಹೋರಾಟದಲ್ಲಿ ಬಿಜೆಪಿ ಪಕ್ಷದ ಯಾರೊಬ್ಬರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ. ಬಿಜೆಪಿ ಆರ್.ಎಸ್.ಎಸ್ ನ. ಒಂದು ಅಂಗ ಮಾತ್ರ, ಈ ದೇಶದ ಸ್ವಾತಂತ್ರ ಹೋರಾಟ ಜ್ಯಾತ್ಯಾತೀತವಾಗಿ ನಡೆದ ಪರಿಣಾಮ ಈ ದೇಶ ಸರ್ವಜನಾಂಗದ ಶಾಂತಿಯ‌ ತೋಟವಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ 138ನೇ ವರ್ಷದ ಕಾಂಗ್ರೆಸ್ ಸಂಸ್ಥಾಪಕ ದಿನಾಚರಣೆ ಕಾಂಗ್ರೆಸ್ ಭವನದಲ್ಲಿ ಗಾಂಧಿ, ನೆಹರು, ಇಂದಿರಾಗಾಂಧಿ ಮತ್ತು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ,ಈ ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ ಹಾಗೂ ಜನಪರತೆಯ ಆಧಾರದ ಮೇಲೆ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ ಸಮಾನ ಅವಕಾಶಗಳನ್ನು ಸೃಷ್ಟಿಸಿದ ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನಾಚರಣೆ ಇಂದು. ಸ್ವಾತಂತ್ರ್ಯದ ನಂತರದಲ್ಲಿ ಅತ್ಯಂತ ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದರು.

ಅದರಲ್ಲೂ ದೇಶ ವಿಭಜನೆಯ ತಂತ್ರಗಳನ್ನು ಅನುಸರಿಸುತ್ತಾ ಸದಾ ದೇಶದೊಳಗೆ ಕ್ಷೋಭೆ ಹಾಗೂ ಅಶಾಂತಿಯನ್ನೇ ಉಂಟುಮಾಡಲು ಶ್ರಮಿಸುತ್ತಿದ್ದ ದುಷ್ಟ ಮನುವಾದಿಗಳ ನಿಯಂತ್ರಣಕ್ಕೆ ದೇಶವನ್ನು ಒಪ್ಪಿಸದೇ ಸುದೀರ್ಘ ಕಾಲ ದೇಶದ ಅಧಿಕಾರ ಚುಕ್ಕಾಣಿ ಹಿಡಿದು ಬಾಬಾ ಸಾಹೇಬರ ಸಂವಿಧಾನದ ನೆರವಿನಿಂದ ವ್ಯವಸ್ಥಿತವಾಗಿ ದೇಶದ ಮುನ್ನಡೆಗೆ ಕಾರಣವಾದ ಕಾಂಗ್ರೆಸ್ ಪಕ್ಷವು ನೂರೆಂಟು ಜನಪರ ಕಾಯ್ದೆಗಳ ಮೂಲಕ ಜನರ ಬದುಕಿನ ಹಿತ ಕಾಯುವಂತಹ ಕೆಲಸ ಮಾಡಿತು ಎಂಬುದನ್ನು ಹೇಳದೇ ಹೋದರೆ ಅದು ಆತ್ಮ ವಂಚನೆ ಆಗುತ್ತದೆ.

60 ವರ್ಷಗಳ ತನ್ನ ಅಧಿಕಾರದ ಅವಧಿಯಲ್ಲಿ ಜನ ಸಮುದಾಯಗಳ ಸಮಾನ ಏಳಿಗೆಗಾಗಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಕಾಯ್ದೆಗಳು ಮತ್ತು ಯೋಜನೆಗಳು ಅಪಾರವಾಗಿತ್ತು. ಇನ್ನು 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಕೆಲಸಗಳು ಬೆಟ್ಟದಷ್ಟು ಇದೆ ಎಂದು ಹೇಳಿದರು.

ಈ ದೇಶದಲ್ಲಿ ಸುದೀರ್ಘವಾಗಿ ನಡೆದ ಸ್ವಾತಂತ್ರ ಹೋರಾಟದಲ್ಲಿ ಅನೇಕ ಹಿಂದು,ಮುಸ್ಲಮಾನ್, ಸಿಕ್, ಕ್ರಿಶ್ಚಿಯನ್ನರು, ಬೌದ್ದರು ಎಲ್ಲಾ ಜಾತಿಯ ಜನತೆ ಸ್ವಾತಂತ್ರ ಹೋರಾಟ ಮಾಡಿದರು.ಕಾಂಗ್ರೆಸ್ ಪಕ್ಷ ಈ ಹೋರಾಟದ ನೇತೃತ್ವವಹಿಸದೆ ಹೊಗಿದ್ದರೆ ನಮಗೆ ಸ್ವಾತಂತ್ರ ಸಿಗುತ್ತಿರಲಿಲ್ಲ. ಇಂದು ಅಧಿಕಾರ ನಡೆಸುತ್ತಿರುವ ಕೇಂದ್ರ‌ದಮೋದಿ ಸರಕಾರ ಸುಳ್ಳುಭರವಸೆಗಳನ್ನು ನೀಡುತ್ತಿದೆ. ಬಿಜೆಪಿ ಎಂದರೆ ಹಿಂದುಗಳ ಪಕ್ಷ ಎಂಬ ಬ್ರಮೆ ಉಂಟು ಮಾಡುತ್ತಿದ್ದಾರೆ.

ಬಿಜೆಪಿ ಪಕ್ಷ ಹೇಳಿದಂತೆ ನಾವು ನಮ್ಮ ಶ್ರೀರಾಮನ ಪೂಜೆ ಮಾಡಬೇಕ ನಮ್ಮ ಪೂರ್ವಿಕರಿಗೆ ಮತ್ತು ನಮಗೆ ಗೊತ್ತಿದೆ ರಾಮ, ಕೃಷ್ಣ, ಮತ್ತು ಶಕ್ತಿ ದೇವೆತೆಗಳನ್ನು‌ ಆರಾಧಿಸುವುದು ಮತ್ತು ಪೂಜಿಸುವುದು ನಮಗೆ ಗೊತ್ತಿದೆ ನಿಮ್ಮಿಂದ ನಾವು ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಮುಖಂಡರಾದ ಪಾರ್ಥಸಾರಥಿ, ಗೋಪಾಲ ರೆಡ್ಡಿ, ಚಂದು, ಸಂಶುದ್ದೀನ್ ಬಾಬು, ಮಹದೇವಪ್ಪ, ಬೂದಿಕೋಟೆ ಬಾಬು ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code