ಜಿಲ್ಲೆನ್ಯೂಸ್

ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ ಪಕ್ಷ ಮೊದಲು ಪಕ್ಷಕ್ಕಾಗಿ ದುಡಿಯೋಣ – ಬಸನಗೌಡ ದದ್ದಲ್

ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ ಪಕ್ಷ ಮೊದಲು ಪಕ್ಷಕ್ಕಾಗಿ ದುಡಿಯೋಣ – ಬಸನಗೌಡ ದದ್ದಲ್

(RAYACHURU): ರಾಯಚೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಂತರ ರಾಯಚೂರು ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಬಸನಗೌಡ ದದ್ದಲ್ ರವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಎಪಿಎಂಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸನಗೌಡ ದದ್ದಲ್ ಅವರು ಕಾಂಗ್ರೆಸ್ ಪಕ್ಷದ ಕೊಡುಗೆಯಿಂದ ನಾನು ಎರಡನೆಯ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದೇನೆ ಜೊತೆಗೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸರ್ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಸರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸರ್ ಹಾಗೂ ರಾಹುಲ್ ಗಾಂಧೀಜಿ ರವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.


ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.
ಕ್ಷೇತ್ರದ ಜನರಿಗೆ ಮತ್ತು ನಿಗಮದ ವತಿಯಿಂದ ದೊರೆಯುವ ಪ್ರತಿಯೊಂದು ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರೆಯುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪ್ರತಿಯೊಬ್ಬ ಕಾರ್ಯಕರ್ತನು ನನಗೆ ಸ್ಟಾರ್ ಪ್ರಚಾರಕರು ನನ್ನ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಿಲ್ಲ ಈ ಹುದ್ದೆ ದೊರೆಯಬೇಕಾದರೆ ಕೂಡ ನನ್ನ ಕ್ಷೇತ್ರದ ಜನರು ಜನರು ಮತ್ತು ಪಕ್ಷದ ಮುಖಂಡರು ಕಾರಣ.
ನನ್ನ ಕ್ಷೇತ್ರವನ್ನು ನೀರವನೆನ್ನಾಗಿ ಮಾಡಬೇಕು ಎಂದು ಕಳೆದ ಬಾರಿ ಶಾಸಕರಾಗಿದ್ದ ನಿಂದಲೂ ನಂತರ ಎರಡನೆಯ ಅವಧಿಗೆ ಶಾಸಕರಾದ ನಂತರ ಕೂಡ ನನ್ನ ಮೊದಲ ಆದ್ಯತೆ ನೀರಾವರಿ ಕ್ಷೇತ್ರಕ್ಕೆ ಈಗಾಗಲೇ ಬಂಗಾರಪ್ಪ ಕೆರೆ ತುಂಬಾ ಯೋಜನೆಯ 200 ಕೋಟಿ ರೂಪಾಯಿ ಕಾಮಗಾರಿ ಪೂರ್ಣಗೊಂಡಿದೆ ಉದ್ಘಾಟನೆಗೆ ಸಿದ್ಧವಾಗಿದೆ ಜೊತೆಗೆ ಗುಂಜಳ್ಳಿ ಬಸಪ್ಪ ಕೆರೆ ತುಂಬುವ ಯೋಜನೆ ಮತ್ತು ಚಿಕ್ಕಮಂಚಾಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರು ಮಾಡಿದೆ ಶ್ರೀ ಗುರು ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗುತ್ತದೆ.


ನನ್ನ ಭಾಗದ ರೈತಾಪಿ ವರ್ಗದ ಜನರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಬ್ರಿಜ್ ಕಮ್ ಬ್ಯಾರೇಜಿಗೆ 158 ಕೋಟಿ ಮಂಜೂರು ಮಾಡಿಸಲಾಗಿದೆ. ಗುಂಜಳ್ಳಿ ಬಸಪ್ಪ ಕೆರೆ ತುಂಬ ಯೋಜನೆಯ ಕಮಲಾಪುರ ಕೆರೆಬೂದೂರು ಈ ಕೆರೆಗಳ ತುಂಬಾ ಯೋಜನೆಗೆ ಅನುಮೋದನೆ ದೊರೆತಿದೆ.
ನನ್ನ ಕ್ಷೇತ್ರದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಎಲ್ಲಾ ಧರ್ಮದವರಿಗೂ ದೇವಸ್ಥಾನಗಳು ಮಸೀದಿ ಚರ್ಚೆ ಮಂದಿರ ಗಳ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತದೆ ನೀವು ಹೇಳಿದಂತಹ ಕೆಲಸವನ್ನು ತಪ್ಪದೆ ಮಾಡುತ್ತೇನೆ.


ಮಾತು ಕೊಟ್ಟಂತೆ ಒಂಬತ್ತು ತಿಂಗಳಲ್ಲಿ ನಿರ್ವಹಿಸಿಕೊಂಡು ನಿಮ್ಮ ನಂಬಿಕೆಗೆ ದ್ರೋಹಾಗದಂತೆ ಪ್ರಾಮಾಣಿಕ ಸೇವೆ ಮಾಡುತ್ತೇನೆ ಪ್ರತಿಯೊಬ್ಬ ಮತದಾರರು ನನಗೆ ದೊಡ್ಡ ಶಕ್ತಿ ನಿಮಗಾಗಿ ಹಗಲಿರುಳು ಕ್ಷಮಿಸುತ್ತೇನೆ.ಚಂದ್ರಗೊಂಡ ಭಾಗದಲ್ಲಿ 49 ಕೋಟಿ ರೂಪಾಯಿ ನೀರಾವರಿ ಯೋಜನೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಇದರ ಜೊತೆಗೆ ಇನ್ನು ಎರಡು ಡಿಪಿಆರ್ ಗಳನ್ನು ಮಾಡಿಸಲಾಗಿದೆ ವೀರಭದ್ರೇಶ್ವರ ನೀರಾವರಿ ಯೋಜನೆ 110 ಕೋಟಿ ರೂಪಾಯಿ ಯೋಜನೆಗಳನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅನುಮೋದನೆ ದೊರೆತರೆ ಈ ಭಾಗದಲ್ಲಿ ಸಂಪೂರ್ಣವಾಗಿ ನೀರಾವರಿಯಾಗುತ್ತದೆ.
ಟಿ ಕೆ ಟಿಪ್ಪಣಿಗಳಿಗೆ ಕಿವಿಗೊಡದೆ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಮಾಡಿದ ಮಾತು ಯಾವತ್ತು ತಪ್ಪೋದಿಲ್ಲ ಕೊಟ್ಟ ಮಾತಿನಂತೆ ನನ್ನ ರೈತರಿಗೆ ಕ್ಷೇತ್ರದ ಜನರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ.
ನಂತರ ಎಸ್ ಸಿ,ಎಸ್ ಟಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಮೋಟಾರ್ , ಪೈಪ್ , ಇತರೆ ಪೂರಕ ಸಾಮಗ್ರಿಗಳನ್ನು ವಿತರಿಸಿದರು.


ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ ವಸಂತಕುಮಾರ್, ಶಾಂತಪ್ಪಣ್ಣ, ರಾಜಶೇಖರ ನಾಯಕ, ಎಪಿಎಂಸಿ ಅಧ್ಯಕ್ಷರು ಮಲ್ಲಿಕಾರ್ಜುನ ಗೌಡ, ದೇವಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಂಪಾಪತಿ, ಅಸ್ಲಾಂ ಪಾಷ, ಜಯಂತರಾವ್ ಪತಂಗಿ, ಚಂದ್ರಶೇಖರ ಆಶಾಪೂರ್, ಬಸವರಾಜ ವಕೀಲ್, ರಾಮನಗೌಡ ವಕೀಲ್ ಮುಖಂಡರುಗಳು ಸೇರಿದಂತೆ ಅನೇಕರಿದ್ದರು.

ವರದಿ: ಶಂಕರ್ ರಾಯಚೂರು

Leave a Reply

Your email address will not be published. Required fields are marked *

Scan the code