ನ್ಯೂಸ್ಶಿವಮೊಗ್ಗ

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಮಧು ಬಂಗಾರಪ್ಪ

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಮಧು ಬಂಗಾರಪ್ಪ

(SHIVAMOGA): ಸೊರಬ:ಪೆನ್‌ಡ್ರೈವ್ ಹಂಚಿಕೆ ವಿವಾದಕ್ಕೆ ಕುರಿತಂತೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಎಲ್ಲವನ್ನೂ ಕಾನೂನು ನೋಡಿಕೊಳ್ಳುತ್ತದೆ ಎಂದರು. ಶಿವಮೊಗ್ಗ ಜಿಲ್ಲೆ ಸೊರಬದ ಕುಬಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಕಾನೂನು ನೋಡಿಕೊಳ್ಳುತ್ತದೆ.ಕಾನೂನಿಗಿಂತ ಯಾರೂ ದೊಡ್ಡವರಿಲ್ಲ.ಸುಮ್ಮಸುಮ್ಮನೆ ಪ್ರತಿಕ್ರಿಯಿಸುವುದು ಚುನಾವಣಾ ಸಂದರ್ಭದಲ್ಲಿ ತಪ್ಪಾಗುತ್ತದೆ.ಚುನಾವಣೆಯ ಸೂಕ್ಷ್ಮತೆ ಅರಿತು ಮಾತನಾಡಬೇಕಾಗುತ್ತದೆ.

ಹೊಂದಾಣಿಕೆಮೈತ್ರಿಯಿಂದ ವಿಪಕ್ಷ ಹತಾಶಭಾವನೆಯಿಂದ ಇಂತಹ ಆರೋಪ ಮಾಡುತ್ತಿದೆ.ನಮ್ಮ ಸರ್ಕಾರ ನೂರಕ್ಕೆನೂರು ಸಂತ್ರಸ್ತರಿಗೆ ರಕ್ಷಣೆ ನೀಡಿ ನ್ಯಾಯ ಒದಗಿಸುತ್ತದೆ.ಈ ವಿಚಾರವನ್ನು ಮಾಧ್ಯಮಗಳ ಮೂಲಕ ವಿಪಕ್ಷ ತಿರುಚಿ ರಾಜಕೀಯಗೊಳಿಸುವ ಪ್ರಯತ್ನ ಮಾಡಲಾಗುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.

ವರದಿ: ಸಂದೀಪ ಯು.ಎಲ್., ಸೊರಬ

Leave a Reply

Your email address will not be published. Required fields are marked *

Scan the code