ಮಳೆ ಇಲ್ಲಾ ಬೆಳೆ ಇಲ್ಲಾ..? ಅಕಾಲ ಮಳೆ ಇಂದಾ ಕುಗ್ಗಿ ಹೋದ ರೈತರು….!
(SHIVAMOGA): ಸಾಗರ ತಾಲೂಕಿನ ತಾಳಗುಪ್ಪ ಹೋಬಳಿ ವ್ಯಾಪ್ತಿಯಲ್ಲಿ ರೈತಾಪಿ ಜನರೆ ಹೆಚ್ಚಾಗಿರುವುದುದರಿಂದ ಹಾಗು ಹೆಚ್ಚಿನವರು ನಾಡಿಗೆ ವಿದ್ಯುತ್ ದೊರಕಿಸಿಕೊಡುತ್ತಿರುವ ಶರಾವತಿ ಕಣಿವೆ ಯೋಜನೆಯ ಸಂತ್ರಸ್ತರಾಗಿರುತ್ತಾರೆ.
ತಾಳಗುಪ್ಪ ಹೋಬಳಿಯಲ್ಲಿ ಯಾವುದೇ ಉದ್ಯಮಗಳಾಗಲಿ , ಕೈಗಾರಿಕೆಗಳಾಗಲಿ ಇರುವುದಿಲ್ಲ ಹಾಗು ಇಲ್ಲಿನ ಜನರು ಕೃಷಿಯನ್ನೇ ಅವಲಂಬಿಸಿರುತ್ತಾರೆ. ಇಲ್ಲಿ ಕೃಷಿಯೇ ಪ್ರದಾನವಾಗಿದೆ. ಕಳೆದ ಮುಂಗಾರಿನ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ಹಾಗು ಅಕಾಲ ಮಳೆಯಿಂದ ಹರಸಾಹಸ ಪಡುತ್ತಿರುವ ರೈತರು. ರೈತರು ಪ್ರಸ್ತುತ ಬೇಸಿಗೆಯಲ್ಲಿ ನೀರಿಲ್ಲದೆ ಒಣಗಿ ಬರದ ಬವಣೆ ಯೆದುರಿಸುತ್ತಿರುತ್ತಾರೆ. ಮೇಲ್ಮೈ ನೀರಿಲ್ಲದೆ ಬೋರ್ ವೆಲ್ ಗಳ ಮೊರೆ ಹೊಗಿದ್ದರೂ ವಿದ್ಯುತ್ ಸರಬರಾಜು ಗುಣಮಟ್ಟವೂ ಇಲ್ಲದೇ ಅಸಮರ್ಪಕವಾಗಿರುವುದರಿಂದ ಕೃಷಿ ಪಂಪ್ ಉಪಯೊಗಕ್ಕೆ ಬಾರದವುಗಳಾಗಿವೆ. ಇದಾರಿಂದಾಗಿ ರೈತರ ಬವಣೆ ಹೇಳತೀರದಾಗಿದೆ. ಆದರಿಂದ ರೈತರು ಹಾಗೂ ಭಾರತೀಯ ಜನತಾ ಪಾರ್ಟಿ ತಾಳಗುಪ್ಪ ಹೋಬಳಿ ಘಟಕದ ಕಾರ್ಯಕರ್ತರಿಂದ ಆಕ್ರೋಶದಿಂದ ಈಗಿನ ಸರ್ಕಾರದ ನೀತಿಯನ್ನು ಪ್ರತಿಭಟಿಸಿ , ಮೆರವಣಿಗೆ ಮೂಲಕ ಬಂದು ಸರ್ಕಾರಕ್ಕೆ ಈ ಕೆಳಕಂಡಂತೆ ಮಾನವಿಯನ್ನ ಸಲ್ಲಿಸಿದ್ದಾರೆ.
(ರೈತರ ಪರವಾಗಿ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಇಲ್ಲಿನ ರೈತರ ಪಂಪ್ ಸೆಟ್ ಗಳಿಗೆ ಸಕಾಲದಲ್ಲಿ ಸಮರ್ಪಕ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಿ ಹಸನುಗೋಳಿಸುವಂತೆ) ಶ್ರೀ ಕೆ ಜಿ ಜಾರ್ಜ್ ರವರು ಮಾನ್ಯ ಇಂಧನ ಸಚಿವರು ಕರ್ನಾಟಕ ಸರ್ಕಾರ ವಿಧಾನ ಸೌಧ ಇವರಲ್ಲಿ ವಿನಂತಿಸಿಕೊಂಡಿದ್ದಾರೆ.
ವರದಿ: ರಾಘವೇಂದ್ರ ತಾಳಗುಪ್ಪ