News & UpdatesUncategorizedಶಿವಮೊಗ್ಗ

ಸಾಗರದಲ್ಲೊಂದು 100% ಸರ್ಕಾರಿ ಉರ್ದು (RMSA)ಪ್ರೌಢಶಾಲೆ.

ಸಾಗರದಲ್ಲೊಂದು 100% ಸರ್ಕಾರಿ ಉರ್ದು (RMSA)ಪ್ರೌಢಶಾಲೆ.

ಸಾಗರದಲ್ಲೊಂದು 100% ಸರ್ಕಾರಿ ಉರ್ದು (RMSA)ಪ್ರೌಢಶಾಲೆ.
*****
ಒಂದು ಶಾಲೆ ಹೇಗೆ ಇರಬೇಕು ಎಂದುಕೊಳ್ಳುತ್ತೇವೆಯೋ ಹಾಗೆ ಸರಿಯಾಗಿ ನಡೆಸಿಕೊಂಡು ಹೋಗಬೇಕಾದರೆ ಅದಕ್ಕೊಂದು ಪೂರ್ವ ಸಿದ್ದತೆ ಹಾಗೂ ಕಾರ್ಯ ನಿರ್ವಹಣೆ ಅತಿ ಮುಖ್ಯ ಎನ್ನುವುದನ್ನು ಸಹಜವಾಗಿಯೇ ಹೇಳುತ್ತಾರೆ. ಆದರೆ ಅದನ್ನು ಪಾಲಿಸಿದಲ್ಲಿ ಆ ಗುರಿ ಮುಟ್ಟಿದಲ್ಲಿ ಸಿಗುವ ತೃಪ್ತಿ ಹಾಗೂ ಆನಂದ ನಿಜವಾಗಿಯೂ ಮನದಲ್ಲಿಯೇ ಸ್ವರ್ಗ ಸುಖ ಅಲ್ಲವೇ ?
ನಾವು ಅಂದುಕೊಳ್ಳುತ್ತೇವೆ… ಅಂದುಕೊಂಡದ್ದನ್ನು ಸಾಧಿಸಲು ಸಾಕಷ್ಟು ಸವಾಲುಗಳು ನಮ್ಮೆದುರಿಗೆ ಇರುತ್ತವೆ. ಅವುಗಳನ್ನೆಲ್ಲ ದಾಟಿ ಬಂದಾಗ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಅಯ್ಯೋ ನಮಗೇಕೆ ಬೇಕು ಯಾವುದರ ಸಹವಾಸವು ಬೇಡ ನಮ್ಮಷ್ಟಕ್ಕೆ ನಾವು ಇದ್ದರೆ ಸಾಕು ಎಂದುಕೊಳ್ಳುವವರೇ ಹೆಚ್ಚು..!!


ಶಾಲೆ ಎಂದರೆ ಅದೊಂದು ದೇಗುಲ, ಅಲ್ಲಿರುವ ಮಕ್ಕಳು ದೇವರಿದ್ದಂತೆ ಹೀಗೆ ಅನೇಕ ರೀತಿಯಲ್ಲಿ ವಿಶೇಷಣವನ್ನು ನೀಡಿ ಮಾತನಾಡುತ್ತೇವೆ. ಅಂತಹ ದೇಗುಲವನ್ನು ಸರಿಯಾಗಿ ನಿರ್ವಹಿಸಬೇಕಾದರೆ ನಿರಂತರ ಪರಿಶ್ರಮ ತುಂಬಾ ಅಗತ್ಯವಾಗಿರುತ್ತದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು. ಮಕ್ಕಳೊಂದಿಗೆ ಮಕ್ಕಳಾಗಿ, ಪೋಷಕರೊಂದಿಗೆ ಪೋಷಕರಾಗಿ, ಶಿಕ್ಷಕರೊಂದಿಗೆ ಶಿಕ್ಷಕರಾಗಿ ಜನ ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಇರುವ ಕಾರ್ಯ ಅಷ್ಟೊಂದು ಸುಲಭದ ಸಂಗತಿಯಲ್ಲ. ಆದರೂ ಸಾಧಿಸುವ ಛಲ ಇದ್ದವರು ಸಾಮೂಹಿಕವಾದ ಪ್ರಯತ್ನ ಹಾಗೂ ಕಾರ್ಯ ಸಾಧನೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ.


ಅಂತಹ ಶಾಲೆಯೊಂದು ಸಾಗರ ನಗರದ ಕೇಂದ್ರ ಭಾಗದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆ(RMSA) ಆಗಿದೆ. ಇದು ಭಾಷಾ ಅಲ್ಪ ಸಂಖ್ಯಾತ ಶಾಲೆಯಾಗಿದ್ದರೂ ಸಹ ಸಾಧನೆಯಲ್ಲಿ ಬಹು ಸಂಖ್ಯಾತ ಶಾಲೆಯನ್ನು ದಾಟಿ ಬೆಳೆದಿದೆ ಎಂದರೆ ಸಾಮಾನ್ಯದ ಸಂಗತಿಯೇನಲ್ಲ..
ಇದು ಬಿಇಓ ಕಛೇರಿಯ ಎದುರುಗಡೆ ಇದ್ದು 1946ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭವಾಗಿದ್ದು ನಂತರ 2011-12 ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಉನ್ನತೀಕರಣಗೊಂಡು ಪ್ರೌಢಶಾಲಾ ವಿಭಾಗವೂ ಆರಂಭವಾಯಿತು. 2015-16ರಲ್ಲಿ ಎರಡಂತಸ್ತಿನ ಶಾಲಾ ಕಟ್ಟಡ ಒಂದೇ ವರ್ಷದಲ್ಲಿ ನಿರ್ಮಾಣಗೊಂಡಿದ್ದು ವಿಶೇಷವಾಗಿದೆ. ಇದು ಅಂದಿನ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪನವರು ತೋರಿದ ಆಸಕ್ತಿಯಿಂದ ಸಾಧ್ಯವಾಯಿತು. ನಂತರ ಈ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಕ್ಕಿತು. ನಿರಂತರವಾಗಿ ಶಾಲಾ ಶಿಕ್ಷಣದ ಕಲಿಕೆಯ ಜೊತೆಯಲ್ಲಿ ಸೃಜನಶೀಲ ಚಟುವಟಿಕೆಗಳಿಗೆ ಆಧ್ಯತೆ ನೀಡಿದ್ದು ವಿಶೇಷವಾಗಿದೆ. ಶಾಲೆ ಆರಂಭವಾದಾಗಿನಿಂದ ಈ ಶಾಲೆಯಲ್ಲಿ ಓದುತ್ತಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಪರಿಣಾಮಕಾರಿಯಾಗಿದ್ದು, ಒಂದೆರಡು ವರ್ಷಗಳಲ್ಲಿ ಶೇಕಡ 90ಕ್ಕಿಂತ ಹೆಚ್ಚು ಇದ್ದು ನಂತರ ಸತತ ಆರು ವರ್ಷಗಳಲ್ಲಿ 100ಕ್ಕೆ ನೂರರಷ್ಟು ಫಲಿತಾಂಶ ಬಂದಿದ್ದು ಈ ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲೂ ಮಂಚೂಣಿಯಲ್ಲಿದ್ದು ಕ್ರೀಡೆ, ಪ್ರತಿಭಾ ಕಾರಂಜಿ ಹಾಗೂ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ
ಈ ಶಾಲೆ ಪ್ರಸ್ತುತದಲ್ಲಿ ಮಂಚೂಣಿಯಲ್ಲಿ ಗುರುತಿಸಿಕೊಂಡಿದೆ ಎನ್ನುವುದನ್ನು ಪರಿಗಣಿಸುವಂತದ್ದು.


ಈ ಶಾಲೆಯ ಅಭಿವೃದ್ದಿಗೆ ಸಾಕಷ್ಟು ಜನ ಶ್ರಮಿಸುತ್ತಿದ್ದು ಮುಖ್ಯ ಶಿಕ್ಷಕರಾದ ದತ್ತಾತ್ರಯ ಭಟ್ ಇವರ ಕ್ರಿಯಾಶೀಲ ಸಮರ್ಥ ನಾಯಕತ್ವ, ಸಹ ಶಿಕ್ಷಕರ ತೊಡಗಿಸಿಕೊಳ್ಳುವಿಕೆ, ಇಲಾಖೆಯ ಮಾರ್ಗದರ್ಶನ ನಗರಸಭೆ,ಪೋಷಕರ ಭಾಗವಹಿಸುವಿಕೆ ದಾನಿಗಳ,ಸಾರ್ವಜನಿಕರ ಸಹಕಾರದಿಂದಾಗಿ ಸರ್ವತೋಮುಖ ಪ್ರಗತಿ ಕಂಡ ಈ ಶಾಲೆ ಸಹಪಠ್ಯ ಚಟುವಟಿಕೆಗಳೊಂದಿಗೆ ಕಲಿಕಾ ಮಟ್ಟದಲ್ಲೂ 100 ಕ್ಕೆ 100%/ರಷ್ಟು ಸಾಧಿಸಲು ಸಾಧ್ಯವಾಗಿದೆ. ಹೀಗೆ ನಿರಂತರವಾಗಿ ಗುರಿಮುಟ್ಟುವುದು ಸುಲಭದ ಮಾತಲ್ಲ,ಅದು ನಿರಂತರ ಪರಿಶ್ರಮದ ಫಲವಾಗಿದೆ ಎನ್ನುವುದು ಅಷ್ಟೇ ಮುಖ್ಯವಾಗಿದೆ.
ಈ ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಸಾಕಷ್ಟು ಜನರು ಸಹಕಾರವನ್ನು ನೀಡುತ್ತ ಬಂದಿದ್ದಾರೆ ಜನಪ್ರತಿನಿಧಿಗಳು, ಅಧಿಕಾರಿಗಳು ಇಲಾಖೆಯ ಮಾರ್ಗದರ್ಶನವು ಸಹ ಅಷ್ಟೆ ಪ್ರಮುಖವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಈ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಹಿಂದಿನ ಅಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಪ್ರಸ್ತುತ ಅಧ್ಯಕ್ಷರಾದ ಸನಾವುಲ್ಲಾ ಎ.ಆರ್. ಇವರ ನಿರಂತರ ಪರಿಶ್ರಮ ಜೊತೆಗೆ ಸಮಿತಿ ಹಾಗೂ ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆ,ಸಹಕಾರ ಈ ಶಾಲೆಗೆ ಎದ್ದು ಕಾಣುತ್ತದೆ.
100 ಕ್ಕೆ 100% ರಷ್ಟು ಎಸ್ ಎಸ್ ಎಲ್ ಸಿ ಫಲಿತಾಂಶ ಸಾಧನೆ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಶಾಲೆಯ ಕಾರ್ಯವನ್ನು ಪ್ರತಿಯೊಬ್ಬರು ಮೆಚ್ಚಲೇಬೇಕಿದೆ ಹಾಗೂ ಅಭಿನಂದನಿಸಬೇಕಾಗಿದೆ. ದತ್ತಾತ್ರಯ ಭಟ್, ಮುಖ್ಯ ಶಿಕ್ಷಕರು ಮೊ.ನಂ:9986230399

ಲೇಖನ:
ವಿ.ಟಿ.ಸ್ವಾಮಿ
ಶಿಕ್ಷಣ ಸಂಯೋಜಕರು
ಬಿ.ಇ.ಓ ಕಛೇರಿ, ಸಾಗರ
ಮೊ: 9889871716

Leave a Reply

Your email address will not be published. Required fields are marked *

Scan the code