ಜನತಾ ದರ್ಶನ: ಸಂಬಳಕ್ಕೆ ಸರಿಯಾಗಿ ಕೆಲಸ ಮಾಡಬೇಕು ಅಧಿಕಾರಿಗಳೂ : ಮಾನ್ಯ ಶಾಸಕರು
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಬಿ ಕಣಬೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ ಗ್ರಾಮಕ್ಕೆ 15ದಿನಕೊಮ್ಮೆ ಗ್ರಾಮಪಂಚಾಯಿತಿಯಿಂದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ರಾಜ್ಯದ ಮುಖ್ಯಮಂತ್ರಿ ಹೊರಡಿಸಿದ ಆದೇಶದಂತೆ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಇಂದು ಬಾಳೆಹೊನ್ನೂರು ಬಿ. ಕಣಬೂರು ಗ್ರಾಮ ಪಂಚಾಯಿತಿಯಿಂದ ಜನತಾ ದರ್ಶನ ಕಾರ್ಯಕ್ರಮ ನಡೆಯಿತು. ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ಡಿ ರಾಜೇಗೌಡರು ಅಧಿಕಾರಿಗಳಿಗೆ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡಬೇಕು ಅಧಿಕಾರಿಗಳು ಹಾಗೂ ಸಭೆಗೆ ಹಾಜರಾಗಿದ್ದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ ಸಮಸ್ಯೆಗಳನ್ನು ಕೂತು ಚರ್ಚೆ ಮಾಡಬೇಕು ಎಂದು ಹೇಳಿದರು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳೂ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಭರವಸೆ ನೀಡಿದರು.
ಪ್ರಾಸ್ತವಿಕ ನುಡಿಗಳನ್ನಾಡಿದ ನರಸಿಂಹರಾಜಪುರ ತಹಶೀಲ್ದಾರು ತನುಜಾ ಸವದತ್ತಿ ಮುಖ್ಯ ಮಂತ್ರಿಗಳ ಆದೇಶದಂತೆ ಪ್ರತಿ ಗ್ರಾಮಪಂಚಾಯ್ತಿಗೆ 15 ದಿನಗಳಿಗೊಮ್ಮೆ ಜನತಾ ದರ್ಶನ ಕಾರ್ಯಕ್ರಮ ನಡೆಸುವಂತೆ ಆದೇಶ ಇದ್ದು. ಮತದಾರರ ಪಟ್ಟಿಗೆ ಯಾರ ಹೆಸರುಗಳು ಇಲ್ಲವೋ ಅಥವಾ ಪಟ್ಟಿಯಲ್ಲಿ ಬದಲಾವಣೆ ಆದವರ ಭಾವಚಿತ್ರಗಳನ್ನು ಸರಿಪಡಿಸಿ ಕೊಡಲಾಗಿದೆ ಎಂದು ಹೇಳಿದರು.ಬಿ. ಕಣಬೂರೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸದಾಶಿವರವರು ಗ್ರಾಮ ಪಂಚಾಯಿತಿಯ ಸಣ್ಣ ವಿಷಯಗಳನ್ನು ಇಲ್ಲಿ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡಬೇಡಿ ಎಂದರು.
ಸರ್ಕಾರ ಜನಸಾಮಾನ್ಯರ ತೆರಿಗೆಯಿಂದ ಅಧಿಕಾರಿಗಳಿಗೆ ಸಂಬಳ ನೀಡುತ್ತಿದೆ ನಾವು ಸಹ ಸಂಬಳ ಪಡೆಯುತ್ತಿದ್ದೇವೆ. ಸರ್ಕಾರಿ ಅಧಿಕಾರಿಯ ಕೆಲಸ ಖುಷಿ ಕೊಟ್ಟರೆ ಕೆಲಸ ಮಾಡಿಸಿಕೊಂಡವನು ಖುಷಿಗೆ ಲಂಚ ಕೊಡುವುದು ಆಗಿನಿಂದಲೂ ಬಂದ ಪದ್ದತಿಯಾಗಿದೆ ಆದರೆ ಈಗ ದುಡ್ಡು ಕೊಟ್ಟರೆ ಕೆಲಸ ತಕ್ಷಣವಾಗುತ್ತದೆ ಎಂದರು ಸಂಬಳಕ್ಕೆ ಸರಿಯಾಗಿ ಕೆಲಸ ಮಾಡಬೇಕು ಎಂದು ಟಿ ಡಿ ರಾಜೇಗೌಡರು ಅಧಿಕಾರಿಗಳಿಗೆ ತಿಳಿಸಿದರು. ತಾಲೂಕಿನಾದ್ಯಂತ ಮಳೆ ನಿಂತ ಕೂಡಲೇ ಕ್ಷೇತ್ರದಲ್ಲಿ ಎಲ್ಲೆಲ್ಲಿ ಗುಂಡಿ ಬಿದ್ದಿದೆ ಆ ರಸ್ತೆಗಳನ್ನು ಸರಿಮಾಡಿಸಿ ಮುಚ್ಚಿಕೊಡುವ ಕೆಲಸ ತನ್ನದಾಗಿದೆ ಎಂದು ಭರವಸೆ ನೀಡಿದರು.
ನಂತರ ಸಾರ್ವಜನಿಕರು ಪತ್ರದ ರೂಪದಲ್ಲಿ ತಂದಿದ್ದ ತಮ್ಮ ಸಮಸ್ಯೆಗಳನ್ನ ಒಂದೊಂದೇ ಮಂಡಿಸಲಾಯಿತು. ಕೆಲವು ಸಮಸ್ಯೆಗೆ ತಕ್ಷಣ ಪರಿಹಾರ ಮತ್ತೂ ಕೆಲವು ಸಮಸ್ಯೆಗಳಿಗೆ ಕಾಲಾವಕಾಶವನ್ನು ನೀಡಲಾಯಿತು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಈ ರೀತಿಯ ಬೇಡಿಕೆಗಳನ್ನು ಮಂಡಿಸಲಾಯಿತು.
ಬಾಳೆಹೊನ್ನೂರು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಜಾಗ ಮಂಜೂರು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಮನವಿ, ಮಾಗುಂಡಿ ರಸ್ತೆ ಬೇಟೆಕೆರೆ ಮತ್ತು ಶಾಂತಿನಗರ ಮುಖ್ಯ ರಸ್ತೆಗೆ ಒಂದು ಬೈಪಾಸ್ ರಸ್ತೆಯಾಗಿ ಅಭಿವೃದ್ಧಿ, ಬಾಳೆಹೊನ್ನೂರಿಗೆ ಕ್ರೀಡಾಂಗಣ ಮತ್ತು ಒಳಕ್ಕೆ ಕ್ರೀಡಾಂಗಣ ಮಂಜೂರು ಬಗ್ಗೆ, ಮಂಗಗಳ ನಿಯಂತ್ರಣ, ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಮತ್ತು ಪಾರ್ಕಿಂಗ್ ವ್ಯವಸ್ಥೆ ಬಗ್ಗೆ, ಬಾಳೆಹೊನ್ನೂರಿಗೆ ಸರ್ಕಾರಿ ಪದವಿ ಕಾಲೇಜಿನ ಮಂಜೂರು ಮಾಡಿಸುವ ಬಗ್ಗೆ, ಬಾಳೆಹೊನ್ನೂರಿನಲ್ಲಿ ಮೆಟ್ರಿಕ್ ನಂತರದ ಬಾಲಕರಿಗೆ ವಸತಿ ನಿಲಯ ಪ್ರಾರಂಭಿಸುವ ಬಗ್ಗೆ, ಬಾಳೆಹೊನ್ನೂರಿನಲ್ಲಿ ಅಗ್ನಿಶಾಮಕ ಕೇಂದ್ರವನ್ನು ಪ್ರಾರಂಭಿಸುವ ಬಗ್ಗೆ, ವಸತಿ ರಹಿತರಿಗೆ ನಿವೇಶನ ಮಂಜೂರಾತಿ, ಬಿಡಡಿ ದನಗಳ ನಿಯಂತ್ರಣ, ಕರ್ನಾಟಕ ಪಬ್ಲಿಕ್ ಸ್ಕೂಲ್ ಅನ್ನು ಸ್ಥಾಪಿಸುವ ಬಗ್ಗೆ, ಬೀದಿ ನಾಯಿಗಳ ನಿಯಂತ್ರಣ, ಅಂಬೇಡ್ಕರ್ ಭವನ ನಿರ್ಮಿಸಲು ಸಲುವಾಗಿ ಬಿ. ಕಣಬೂರು ಸರ್ವೆ ನಂಬರ್ 212/P2 ರಲ್ಲಿ ಒಂದು ಎಕರೆ ಜಾಗ ಕೊಡಿಸುವ ಬಗ್ಗೆ, ಅಂಗನವಾಡಿ ಕಟ್ಟಡಗಳು ಶಿಥಿಲ ಗೊಂಡಿರುವ ಬಗ್ಗೆ ಇತ್ಯಾದಿ.