ಇದೇ ತಿಂಗಳ 15 ರಂದು ನವದೆಹಲಿಯ ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಪಟ್ಟಣದ ಹುಮೇರ ಅಂಜುಂ ಆಯ್ಕೆ.
(KOLARA): ಬಂಗಾರಪೇಟೆ :ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಿನಾಂಕ : 15-11-2023 ರಂದು ನವದೆಹಲಿಯಲ್ಲಿ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಈ ಸಮ್ಮೇಳನದ ಮಕ್ಕಳ ಕವಿಗೋಷ್ಠಿಗೆ ಬಂಗಾರಪೇಟೆಯ ಇನ್ ಪ್ಯಾಂಟ್ ಜೀಸಸ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ ಹುಮೇರ ಅಂಜುಂ ಆಯ್ಕೆಯಾಗಿದ್ದಾರೆ. ಬಂಗಾರಪೇಟೆಯ ಶಿಕ್ಷಕರಾದ ಕಾ.ಹು.ಚಾನ್ ಪಾಷ, ಶಬಾನ ದಂಪತಿಗಳ ಹಿರಿಯ ಮಗಳಾದ ಹುಮೇರ ಅಂಜುಂ ಸಮುದಾಯದ ರಂಗ ಶಿಬಿರಗಳಲ್ಲಿ ಭಾಗವಹಿಸಿ ಹಲವಾರು ಮಕ್ಕಳ ನಾಟಕಗಳಲ್ಲಿ ರಂಗನಟಿಯಾಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಲವಾರು ಕವಿತೆಗಳು ಬರೆದು ಕವಿಗೋಷ್ಠಿಯಲ್ಲಿ ಕವಿತೆಗಳನ್ನು ಓದಿರುವ ಹುಮೇರ ಅಂಜುಂ ಈಗ ನವದೆಹಲಿಯಲ್ಲಿ ನಡೆಯಲಿರುವ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಿ.ಎನ್.ಅಶೋಕ್ ಅವರು ತಿಳಿಸಿದ್ದಾರೆ.
ವರದಿ: ವಿಷ್ಣು ಕೋಲಾರ