ಪಟ್ಟಣದಲ್ಲಿ ಸತ್ಯ ಸಾಯಿ ಬಾಬಾರವರ 98ನೇ ಜನ್ಮದಿನೋತ್ಸವ ಪ್ರಯುಕ್ತ, ಅನ್ನದಾನ
(KOALARA): ಬಂಗಾರಪೇಟೆ : ಶ್ರೀ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ ವತಿಯಿಂದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರ 98ನೇ ಜನ್ಮದಿನೋತ್ಸವ ಪ್ರಯುಕ್ತ ಮಹಾ ನಾರಾಯಣ ಸೇವೆ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೃತ್ತದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಸಮಿತಿಯ ಗೀತಾ ರವರು ವಹಿಸಿದ್ದರು.
https://westrenghatnews.com/17-people-fell-ill-after-eating-biryani/
ಈ ವೇಳೆ ಚಿಕ್ಕ ಅಂಕಂಡಳ್ಳಿಯ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಹರೀಶ್ ಕುಮಾರ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಸತ್ಯಸಾಯಿ ಬಾಬಾ ರವರ 98ನೇ ಜನ್ಮದಿನ ದಿನೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೃತ್ತದಲ್ಲಿ ಸಾವಿರಾರು ಜನಕ್ಕೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರತಿ ವರ್ಷ ಕಮಲಾಕ್ಷರವರ ಸಹಯೋಗದೊಂದಿಗೆ ಹಾಗೂ ಸೇವಾ ಟ್ರಸ್ಟ್ ನ ಸದಸ್ಯರ ಜೊತೆಗೂಡಿ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದುವಂತಹ ಮಕ್ಕಳಿಗೆ ಪಠ್ಯಪುಸ್ತಕಗಳ ವಿತರಣೆ,ವೃದ್ಧಾಶ್ರಮಗಳಿಗೆ ಅನ್ನದಾನ ಕಾರ್ಯಕ್ರಮಗಳನ್ನು ಮಾಡುವುದು, ಹಾಗೂ ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರು ಎಲ್ಲೂ ಸಹ ಮಾಡಿರುವಂತಹ ಕಾರ್ಯಕ್ರಮಗಳನ್ನು ಪ್ರಚಾರ ಮಾಡಿಕೊಳ್ಳದೆ ಸುಮಾರು ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಇವರಿಗೆ ಆ ಭಗವಂತ ಸುಖ,ಶಾಂತಿ, ನೆಮ್ಮದಿ ಆರೋಗ್ಯ ಕರುಣಿಸಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸತ್ಯಸಾಯಿ ಆದ್ಯಾತ್ಮಿಕ ಸೇವಾ ಟ್ರಸ್ಟ್ ನ ಸದಸ್ಯರದ ಕಾವ್ಯ, ಶ್ರೀನಾಥ್, ಅಶೋಕ್, ಸಂದೀಪ್ ಗೌಡ, ಚಲಪತಿ, ಶ್ರೀನಿವಾಸ್,ಅಮರೇಶ್, ಗಿರೀಶ್ ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ