ಜಿಲ್ಲೆನ್ಯೂಸ್

ಹದಿ ಹರೆಯದಲ್ಲಿ ಒಮ್ಮೆ ದಾರಿ ತಪ್ಪಿದರೆ ಬದುಕು ಕುಬ್ಜ ವಾಗುತ್ತದೆ. ವೈ ಎಂ ಲಲಿತಾ.

ಹದಿ ಹರೆಯದಲ್ಲಿ ಒಮ್ಮೆ ದಾರಿ ತಪ್ಪಿದರೆ ಬದುಕು ಕುಬ್ಜ ವಾಗುತ್ತದೆ. ವೈ ಎಂ ಲಲಿತಾ.


(CHIKKAMAGALURU): ಮಾಗುಂಡಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಉಪನ್ಯಾಸ.

ಕನ್ನಡ ಸಾಹಿತ್ಯ ಪರಿಷತ್ ನರಸಿಂಹರಾಜಪುರ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ “ಹದಿಹರೆಯದ ಸಮಸ್ಯೆ”ಕುರಿತು ಮಾತನಾಡಿದ ಶ್ರೀಮತಿ ವೈ ಎಂ ಲಲಿತಾ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹದಿ ಹರೆಯ ಹನ್ನೆರಡು ವಯಸ್ಸಿನಿಂದ ಹದಿನೆಂಟರ ತನಕ ಜಾಗ್ರತೆ ಇರಬೇಕು,ಈ ವಯಸ್ಸಿನಲ್ಲಿ ಕುಟುಂಬ,ಶಾಲೆ,ವಯಸ್ಸಿನ ಬದಲಾವಣೆ, ಸಾಮಾಜಿಕ ಸ್ಥಿತ್ಯಂತರ ಕೂಡ ಹದಿಯರೆಯದವರ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ತಮ್ಮ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಎರಡರ ಕಡೆಯಿಂದ ಎಚ್ಚರವಹಿಸಬೇಕು. ನಮ್ಮ ಆಹಾರ ಪದ್ಧತಿ ಕೂಡ ಬದಲಾಗುತ್ತಾ ಇದೆ. ಇದರಿಂದ ಆರೋಗ್ಯ ಸಮಸ್ಯೆ ಹದಗೆಡುತ್ತಾ ಇದೆ.ಮಕ್ಕಳು ಅಗತ್ಯವಾದ ಮಾಹಿತಿಯನ್ನು ಪಡೆಯಬೇಕು.ಮಕ್ಕಳು ಸ್ವಚ್ಚತೆಯನ್ನು ಕಾಪಾಡಬೇಕು. ಅದರಲ್ಲೂ ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಹೆಚ್ಚಿನ ಜಾಗ್ರತೆ ಹೊಂದಬೇಕು. ನೈರ್ಮಲ್ಯ ಕಾಪಾಡದೆ ಹೋದರೆ ಅದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡು ಕೆಡುತ್ತದೆ. ಇದೇ ರೀತಿ ಈ ವಯಸ್ಸಿನಲ್ಲಿ ಸ್ನಾನ ,ಕೈ ತೊಳೆಯುವುದು ಮಾಡ್ಬೇಕು.
ಆರೋಗ್ಯದ ವಿಚಾರದಲ್ಲಿ ಯಾವಾಗಲೂ ಮೌನ ಮುರಿಯಬೇಕು. ಆರೋಗ್ಯ ಸಮಸ್ಯೆ ಇದ್ದರೆ ಅದನ್ನು ಮನೆಯಲ್ಲಿ ಅಥವಾ ವೈದ್ಯರ ಬಳಿ ಹೇಳಿಕೊಳ್ಳಬೇಕು ಎಂದರು. ಮಕ್ಕಳು ತಂಡಿ ಇರುವ, ಕೊಳೆಯಾದ ಒಳ ಉಡುಪುಗಳನ್ನು ಬಳಸಬಾರದು ಎಂದರು.



ಪ್ರಾಸ್ತಾವಿಕವಾಗಿ ಮಾತನಾಡಿದ ಹೋಬಳಿ ಅದ್ಯಕ್ಷರು ಅದ ರತ್ನಾಕರ್ ಗಡಿಗೇಶ್ವರ ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಕುರಿತಾಗಿ ಅಲ್ಲದೆ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಯಾವ ವಿಷಯದ ಅಗತ್ಯ ಇದೆ ಅದನ್ನು ತಾಲ್ಲೂಕಿನ ಎಲ್ಲಾ ಭಾಗದಲ್ಲಿ ಸಾಹಿತ್ಯ ಪರಿಷತ್ ಕಡೆಯಿಂದ ನೀಡುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ರಮೇಶ್ ನಾಯ್ಕ ಅವರು ಮಾತನಾಡಿ ನಮ್ಮ ಶಾಲೆಯಲ್ಲಿ ಸಾಹಿತ್ಯ ಪರಿಷತ್ ಕಡೆಯಿಂದ ಮಕ್ಕಳ ಆರೋಗ್ಯಕ್ಕೆ ಕುರಿತಾದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಇದನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಹಿರಿಯ ಆರೋಗ್ಯ ಅಧಿಕಾರಿಗಳಾದ ಭಗವಾನ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಿನಾದ್ಯಂತ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಎಂದರು.

ಮಾಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ/ಮಂಜೇಶ ಅವರು ಮಾತನಾಡಿ ಆರೋಗ್ಯದ ಕುರಿತಾದ ಮಾಹಿತಿ ಎಲ್ಲರಿಗೂ ಇರಬೇಕು. ಇಂದು ಸಾಹಿತ್ಯ ಪರಿಷತ್ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆಯುತಿರುವುದು ಸಂತೋಷದ ವಿಷಯ ಎಂದರು.

ಸಾಹಿತ್ಯ ಪರಿಷತ್ ಪೂರ್ವ ಅಧ್ಯಕ್ಷರಾದ ಕೆಟಿ ವೆಂಕಟೇಶ್ ಮಾತನಾಡಿ ಸಾಹಿತ್ಯ ಪರಿಷತ್ ಮಕ್ಕಳಿಗೆ ಇಂತಹ ಆರೋಗ್ಯ ಮೂಡಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ವೈ ಎಂ, ವೈದ್ಯರಾದ ಮಂಜೇಶ, ಶುಶ್ರೂಷಕಿ ಸುಮತಿ, ಅವರಿಗೆ ಸನ್ಮಾನ ಮಾಡಲಾಯಿತು,ಮಕ್ಕಳಿಗೆ ಸುಂದರ ಕೈಬರಹ ಸ್ಪರ್ಧೆ ಏರ್ಪಡಿಸಲಾಗಿತ್ತು.




ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಪೂರ್ಣೇಶ ಮಾತನಾಡಿ,ಸಾಹಿತ್ಯ ಪರಿಷತ್ ಮಕ್ಕಳಿಗೆ ಅಗತ್ಯವಾದ ಮಾಹಿತಿ ಕೊಡುವ ಕೆಲಸ ಮಾಡುತ್ತಿದೆ. ಇವತ್ತು ನಮ್ಮೊಂದಿಗೆ ಶಾಲೆ ಹಾಗೂ ಆರೋಗ್ಯ ಇಲಾಖೆ ಎರಡು ನಮ್ಮೊಂದಿಗೆ ಕೈ ಜೋಡಿಸಿರುವುದು ಸಂತೋಷದ ವಿಷಯ ಎಂದರು.

ದೈಹಿಕ ಶಿಕ್ಷಕರಾದ ವೆಂಕಟೇಶ್ ಅವರು ಕಾರ್ಯಕ್ರಮ ನಿರೂಪಿಸಿದರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ,ಶಾಲಾ ಶಿಕ್ಷಕರು ಮಕ್ಕಳು ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *

Scan the code