ನ್ಯೂಸ್ಶಿವಮೊಗ್ಗ

ಸರಕಾರಿ ನೌಕರರ ಸಂಘದಿಂದ ಒಂದು ದಿನದ ಅನ್ನ ಸಂತರ್ಪಣೆ.

ಸರಕಾರಿ ನೌಕರರ ಸಂಘದಿಂದ ಒಂದು ದಿನದ ಅನ್ನ ಸಂತರ್ಪಣೆ.

(SHIVAMOGA): ಸಾಗರ ಪಟ್ಟಣದಲ್ಲಿ ನಡೆಯುತ್ತಿರುವ ಶಕ್ತಿ ದೇವತೆ ಶ್ರೀ ಮಹಾಗಣಪತಿ ರಥೋತ್ಸವದ ಸಂದರ್ಭದಲ್ಲಿ ಒಂದು ದಿನದ ಅನ್ನ ಸಂತರ್ಪಣೆಯ ವೆಚ್ಚವನ್ನು ತಾಲೂಕಿನ ಸರಕಾರಿ ನೌಕರರ ಸಂಘದಿoದ ಕೊಡಲಾಯಿತು. ಸಂಘದ ಅಧ್ಯಕ್ಷ ಪರಮೇಶ್ವರ ಹಾಗೂ ಸಾಗರ ಉಪವಿಭಾಗಾಧಿಕಾರಿ ಯತೀಶ್, ತಹಶೀಲ್ದಾರ್ ಕರೀಂ ಉಲ್ಲಾರವರು ಗಣಪತಿ ರಥೋತ್ಸವದ ಅನ್ನಸಂತರ್ಪಣೆ ವಿಭಾಗದ ಸಂಚಾಲಕ ಐ.ವಿ. ಹೆಗಡೆಯವರಿಗೆ ಶನಿವಾರ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನೀಡಿದರು.

 
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಪರಮೇಶ್ವರ, ಸರಕಾರಿ ನೌಕರರ ಸಂಘವು ತನ್ನ ಸಾಮಾಜಿಕ ಬದ್ಧತೆಯನ್ನು ಮರೆಯದೆ ಸಾರ್ವಜನಿಕ ಕರ್ಯಗಳಲ್ಲಿ ಸದಾ ತೊಡಗಿಸಿಕೊಂಡಿದೆ. ಗಣಪತಿ ರಥೋತ್ಸವ, ಮೂರು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ಸೇರಿದಂತೆ ಹಲವು ಸಮಾರಂಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಬಂದಿದೆ. ಸಂಘದ ಎಲ್ಲ ನಿರ್ದೇಶಕರು, ಪದಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ದೇಣಿಗೆ ಸಂಗ್ರಹಿಸಿ ಕೊಡುತ್ತಾ ಬಂದಿದ್ದೇವೆ ಎಂದು ಹೇಳಿದರು.
ಸಂಘದ ಗೌರವಧ್ಯಕ್ಷ ಜಿ. ಬಸವರಾಜ, ಉಪಾಧ್ಯಕ್ಷ ಲಕ್ಷ್ಮಣ್ ಆರ್. ನಾಯ್ಕ್, ಕಾರ್ಯದರ್ಶಿ ಹೆಚ್.ಎಸ್. ರಾಘವೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಸೋಮಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಜಗನ್ನಾಥ, ಲಕ್ಷ್ಮೀ ಭಾಗವತ್, ಮಾಲತೇಶ್, ಎಲ್.ಎಂ. ಹೆಗಡೆ, ಸುನಿಲ್ ಕುಮಾರ್, ವೈ, ಮೋಹನ್, ಸಿದ್ದರಾಜು ಮೊದಲಾದವರಿದ್ದರು.
ಪಟ್ಟಣದ ಎಸಿ ಕಚೇರಿಯಲ್ಲಿ ಗಣಪತಿ ರಥೋತ್ಸವದ ಅನ್ನ ಸಂತರ್ಪಣೆಗೆ ಸರಕಾರಿ ನೌಕರರ ಸಂಘದಿoದ ದೇಣಿಗೆ ನೀಡಲಾಯಿತು.


ಚುನಾವಣೆಯಲ್ಲಿ ಗುಣಮಟ್ಟದ ಸೇವೆ ಒದಗಿಸುವಂತೆ ಆಯೋಗಕ್ಕೆ ನೌಕರರ ಸಂಘದಿoದ ಮನವಿ
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮತದಾನದ ಕೆಲಸದಲ್ಲಿ ತೊಡಗಿಕೊಳ್ಳುವ ಸರಕಾರಿ ನೌಕರರು, ಅಧಿಕಾರಿಗಳಿಗೆ ಒದಗಿಸುವ ಸೇವೆಯಲ್ಲಿ ಯಾವುದೇ ಕುಂದುಕೊರತೆಯಾಗದoತೆ ಚುನಾವಣಾ ಆಯೋಗವು ಗಮನ ಹರಿಸಬೇಕು ಎಂದು ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿ ಆರ್. ಯತೀಶ್ರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧೆಡೆಯಿಂದ ಬರುವ ಅಧಿಕಾರಿಗಳು, ನೌಕರರಿಗೆ ಚುನಾವಣಾ ಆಯೋಗದ ಕಡೆಯಿಂದ ಯಾವುದೇ ತೊಂದರೆಯಾಗದoತೆ ನೋಡಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಒತ್ತಡವಿರುವುದರಿಂದ ಕೆಲಸಕ್ಕೆ ಬರುವವರಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಬೇಕು. ಇದರಿಂದ ಮತದಾನದ ಹಬ್ಬದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಸಾರ್ವಜನಿಕರಿಗೂ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯ ಎಂದರು.


ಉಪವಿಭಾಗಾಧಿಕಾರಿ ಆರ್. ಯತೀಶ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಆಗಿರುವ ಸಮಸ್ಯೆಗಳು, ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ. ಜತೆಯಲ್ಲಿ ಆರೋಗ್ಯ ಸಮಸ್ಯೆ ಇರುವ ಸಿಬ್ಬಂದಿಗಳಿಗೂ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಚುನಾವಣಾ ಕರ್ಯದಲ್ಲಿ ತೊಂದರೆಆಗದಂತೆ ಸುಸೂತ್ರವಾಗಿ ಎಲ್ಲ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಆರ್. ಯತೀಶ್, ತಹಶೀಲ್ದಾರ್ ಕರೀಂ ಉಲ್ಲಾರನ್ನು ಸರಕಾರಿ ನೌಕರರ ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಗೌರವಧ್ಯಕ್ಷ ಜಿ. ಬಸವರಾಜ, ಉಪಾಧ್ಯಕ್ಷ ಲಕ್ಷ್ಮಣ್ ಆರ್. ನಾಯ್ಕ್, ಕಾರ್ಯದರ್ಶಿ ಹೆಚ್.ಎಸ್. ರಾಘವೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಸೋಮಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಜಗನ್ನಾಥ, ಲಕ್ಷ್ಮೀ ಭಾಗವತ್, ಮಾಲತೇಶ್, ಎಲ್.ಎಂ. ಹೆಗಡೆ, ಸುನಿಲ್ ಕುಮಾರ್, ವೈ. ಮೋಹನ್, ಮೊದಲಾದವರು ಹಾಜರಿದ್ದರು. 
ಸಾಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಎಸಿ ಆರ್. ಯತೀಶ್ರವರಿಗೆ ಹಾಗೂ ತಹಶೀಲ್ದಾರ್ ಕರೀಂ ಉಲ್ಲಾ ಅವರನ್ನು ಸರಕಾರಿ ನೌಕರರ ಸಂಘದಿoದ ಗೌರವಿಸಲಾಯಿತು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code