ಸ್ಪೆಷಲ್ ಒಲಂಪಿಕ್ ಭಾರತ್ ಕರ್ನಾಟಕ ಘಟಕದಿಂದ ಒಂದು ದಿನದ ಕಾರ್ಯಾಗಾರ
(KOLARA): ಕೋಲಾರ : ಸ್ಪೆಷಲ್ ಒಲಂಪಿಕ್ಸ್ ಭಾರತ್(ಎಸ್.ಓ.ಬಿ-ಕೆ) ಕರ್ನಾಟಕ ಘಟಕದಿಂದ ವಿಶೇಷ ಶಿಕ್ಷಕರಿಗೆ ಮತ್ತು ಬಿ.ಅರ್.ಸಿ ಗಳಿಗೆ ಒಂದು ದಿನದ ಕಾರ್ಯಾಗಾರವನ್ನು ನಗರದ ಅಂತರಗಂಗಾ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದರು.
ಸ್ಪೆಷಲ್ ಒಲಂಪಿಕ್ ಭರತ್ ಕರ್ನಾಟಕ ರಾಜ್ಯ ಅಧ್ಯಕ್ಷರದಂತಹ ಶ್ರೀಮತಿ ಶಶಿಕಲಾ ಜೊಲ್ಲೆ ರವರು ನೀಡಿರುವಂತಹ ಆದೇಶದ ಮೇರೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಹ ಸ್ಪೆಷಲ್ ಒಲಂಪಿಕ್ಸ್ ಭಾರತ್ ವತಿಯಿಂದ ಬುದ್ಧಿಮಾಂದ್ಯ ವಿದ್ಯಾರ್ಥಿಗಳು ವಿಶೇಷ ಕ್ರೀಡಾಕೂಟಗಳನ್ನು ಆಯೋಜನೆ ಮಾಡಬೇಕು ಆದ್ದರಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಕಾರ್ಯಾಗಾರ ಮಾಡಬೇಕಾಗಿದೆ ಆದ್ದರಿಂದ ನಮ್ಮ ಕೋಲಾರ ಜಿಲ್ಲೆಯಲ್ಲಿಯು ಶನಿವಾರ ರಾಜ್ಯ ಉಪಾಧ್ಯಕ್ಷರಾದ ರುಪ್ ಸಿಂಗ್ ಮತ್ತು ರಾಜ್ಯ ಕಾರ್ಯದರ್ಶಿ ಅಮರೇಂದ್ರ ಅವರು ತರಬೇತಿಯನ್ನು ನಡೆಸಿದರು.
ಎಸ್.ಓ ಬಿ ಕೆ ರಾಜ್ಯ ಕಾರ್ಯದರ್ಶಿ ಅಮರೇಂದ್ರ ಅವರು ಮಾತನಾಡಿ ಇಂದು ಕೋಲಾರದ ಅಂತರಗಂಗಾ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಾವು ಸ್ಪೆಷಲ್ ಒಲಂಪಿಕ್ಸ್ ಭಾರತ್-ಕರ್ನಾಟಕ ವತಿಯಿಂದ ಜಿಲ್ಲಾಧ್ಯಕ್ಷರದ ಡಾ. ಕೆ.ಎಸ್.ಶಂಕರ್ ರವರ ನೇತೃತ್ವದಲ್ಲಿ ತರಬೇತಿ ಕಾರ್ಯಾಗಾರ ವನ್ನು ಹಮ್ಮಿಕೊಂಡಿದ್ದೆವು ಮುಂದಿನ ತಿಂಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಹಮ್ಮಿಕೊಂಡು ಅದರಲ್ಲಿ ಆಯ್ಕೆಯಾದ ವಿಶೇಷ ಚೇತನ ಮಕ್ಕಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆಮಾಡಲಾಗುತ್ತದೆ ಆದ್ದರಿಂದ ಶಿಕ್ಷಕರು ತಾವು ತಮ್ಮ ವಿದ್ಯಾರ್ಥಿಗಳನ್ನು ಪೂರ್ವತಯಾರಿ ನಡೆಸಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ರುಪ್ ಸಿಂಗ್,ಕಾರ್ಯದರ್ಶಿ ಅಮರೇಂದ್ರ,ರಾಜ್ಯ ಆಯ್ಕೆ ಸಮಿತಿಯ ಸದಸ್ಯರಾದ ರವಿ,ತರಬೇತಿದರರಾದ ಮೌನಿಕ, ಉತ್ತರ ಜಿಲ್ಲಾದ್ಯಾಕ್ಷರಾದ ಡಾ.ಕೆ,ಎಸ್.ಶಂಕರ್ ಉಪದ್ಯಾಕ್ಷರಾದ ಶ್ರೀಮತಿ ಕೆ.ಎಸ್ ಶಾರದ ಕಾರ್ಯದರ್ಶಿ ಪಿ.ಮೇಘರಾಜ್ ಸೇರಿದಂತೆ ಎಲ್ಲಾ ವಿಶೇಷ ಶಾಲೆಗಳ ಶಿಕ್ಷಕರು ಇದ್ದರು.
ವರದಿ: ವಿಷ್ಣು ಕೋಲಾರ