ಲೋಕಸಭಾ ಚುನವಣೆಗೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ವಿರೋಧ.!
(CHIKKAMAGALURU): ಉಡುಪಿ ಚಿಕ್ಕಮಂಗಳೂರು ಲೋಕಸಭಾ ಚುನಾವಣೆಗೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ಪತ್ರಚಳುವಳಿ ನಂತರ ಈಗ ಜನಸಂಘ ಪರಿವಾರದ ಕಾರ್ಯಕರ್ತರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು. ಪ್ರಜಾಪ್ರಭುತ್ವ ಉಳಿಸಿ ಅಂದೋಲನದ ವೇದಿಕೆ ಕಾರ್ಯಕರ್ತ ನಾಗೇಶ್ ಅಂಗಿರಸ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲು ಶೋಭಾ ಕರಂದ್ಲಾಜೆ ವಿರುದ್ಧ ವಿರೋಧ ವ್ಯಕ್ತವಾಗಿದೆ .
ಶೋಭಾಕರಂದ್ಲಾಜೆಗೆ ಟಿಕೆಟ್ ನೀಡದಂತೆ ಸ್ವಕ್ಷೇತ್ರದಲ್ಲೆ ವಿರೋಧ, ಪ್ರದಾನಿ ನರೇಂದ್ರ ಮೋದಿ, ಜೆ ಪಿ ನಡ್ಡಾ, ಅಮಿತ್ ಷಾ ಗೆ ಪತ್ರ ಬರೆದಿದ್ದು ನೂತನ ಅಭ್ಯರ್ಥಿಗೆ ಟಿಕೆಟ್ ಯೆಂಬುವಂತೆ ಜಯಪ್ರಕಾಶ್ ಹೆಗಡೆಗೆ ಟಿಕೆಟ್ ನೀಡುವಂತೆ ಬಿ ಜೆ ಪಿ ಮುಖಂಡರು ಆಗ್ರಹಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಾಸಭಾ ಕ್ಷೇತ್ರದಲ್ಲಿ ಎರಡು ಭಾರಿ ಆಯ್ಕೆಯಾದ ಶೋಭಾಕರಂದ್ಲಾಜೆಗೆ ಈಗ ಬಿಜೆಪಿ ಹಾಗೂ ಜನಸಂಘ ಕಾರ್ಯಕರ್ತರ ರಿಂದ ವಿರೋಧ ವ್ಯಕ್ತವಾಗಿದೆ. ಉಡುಪಿ ಚಿಕ್ಕಮಗಳೂರು ಲೋಕಸಭೆ ಚುನಾವಣೆ ಟಿಕೆಟ್ಟನ್ನು ಜಯಪ್ರಕಾಶ್ ಹೆಗಡೆ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದರು.