ಒಡಹುಟ್ಟಿದ 3 ಹೆಣ್ಣುಮಕ್ಕಳಿಗೆ ವಿಷ ಕುಡಿಸಿದ ತಂದೆ-ತಾಯಿ
(PANJAB) – ಬಿಹಾರದ ಕಟಿಹಾರ ಮೂಲದ ದಂಪತಿಗಳು ತಮ್ಮ 4 ಹೆಣ್ಣು ಮಕ್ಕಳು ಮತ್ತು 1 ಮಗನೊಂದಿಗೆ ಕಾನ್ಪುರ ಜಾಲಂಧರದಲ್ಲಿ ವಾಸವಾಗಿದ್ದರು. ಈ ತಂದೆ ತಾಯಂದಿರು ಹಾಲಿನಲ್ಲಿ ವಿಷ ಬೆರೆಸಿ 3 ಹೆಣ್ಣು ಮಕ್ಕಳಿಗೆ ನೀಡಿದ್ದಾರೆ. ಹಾಲು ಸೇವಿಸಿದ ಮೂವರು ಮಕ್ಕಳು ವಿಲವಿಲ ಒದ್ದಾಡಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ತಂದೆ-ತಾಯಿಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯನುಸಾರ ಆರೋಪಿ ಸುಶೀಲ ಮಂಡಲಾಗೆ ಮದ್ಯಪಾನದ ಚಟ ಇತ್ತು. ದಂಪತಿಗೆ ಸಂಪಾದನೆ ಸಾಲದ ಕಾರಣ
ಇದರಿಂದ ಐದೂ ಮಕ್ಕಳನ್ನು ಸಾಕಲು ಸಾಧ್ಯವಾಗದ ಕಾರಣ ಪತ್ನಿಯ ಸಹಾಯದೊಂದಿಗೆ ತನ್ನ ಮೊದಲು ಹೆಣ್ಣು ಮಕ್ಕಳ ಹತ್ಯೆ ಮಾಡಿದನು. ತಮ್ಮನ್ನು ರಕ್ಷಿಸಿಕೊಳ್ಳಲು, ಸುಶೀಲ ಮತ್ತು ಅವನ ಪತ್ನಿ ಮಂಜುದೇವಿಯು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಸುಳ್ಳು ಕಥೆಯನ್ನು ಹೆಣೆದರು ಆದರೆ ಪೊಲೀಸರು ಹುಡುಕಾಟ ನಡೆಸಿದಾಗ ಪಾಪಿಗಳ ಸತ್ಯ ಹೊರಬಿದ್ದಿದೆ. ಪೊಲೀಸರು ಸುಶೀಲ ಮಂಡಲ ಮತ್ತು ಆತನ ಪತ್ನಿ ಮಂಜುದೇವಿಯನ್ನು ಬಂಧಿಸಿದ್ದಾರೆ. ಈ ದಂಪತಿಯ ಉಳಿದ ಇಬ್ಬರು ಮಕ್ಕಳಾದ ಅನುಷ್ಕಾ (2 ವರ್ಷ) ಮತ್ತು ಶಾನಿ (1 ವರ್ಷ) ಅವರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.