ಅಡಕೆ ಕಳವು ಪ್ರಕರಣ: ಮಾಲು ಸಹಿತ ಆರೋಪಿಗಳ ವಶಕ್ಕೆ ಪಡೆದ ಸಾಗರಗ್ರಾಮಾಂತರ ಪೊಲೀಸರು..
(SHIVAMOGA): ಸಾಗರ ತಾಲೂಕಿನ ಬೇದೂರಿನಲ್ಲಿ ಮರ ಕಡಿಯುವ ಯಂತ್ರ ಕಳವು ಪ್ರಕರಣ ಹಾಗೂ ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಅಡಕೆ ಕಳವು ಪ್ರಕರಣವನ್ನು ಬೇಧಿಸಿದರು ಗ್ರಾಮಾಂತರ ಠಾಣೆ ಪೋಲೀಸರು ಮಾಲು ಸಹಿತ ಕೃತ್ಯಕ್ಕೆ ಬಳಕೆಯಾಗಿದ್ದ ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಗರ ಗ್ರಾಮಾಂತರ ಹಾಗೂ ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹಲವು ಸ್ವತ್ತುಗಳ ಕಳವು ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಬಾತ್ಮಿದಾರರ ಮಾಹಿತಿ ಆಧರಿಸಿ ಆರೋಪಿಗಳಾದ ಸಾಗರ ಪಟ್ಟಣದ ನೆಹರೂ ನಗರ 1ನೇ ಕ್ರಾಸ್ನ ನಿವಾಸಿ ಎಂ. ನಾಗರಾಜ್ ಅಲಿಯಾಸ್ ಕರಡಿ (24), ಶಿವಪ್ಪನಾಯಕ ನಗರದ 4ನೇ ಕ್ರಾಸ್ ನಿವಾಸಿ ಎ. ರಾಘವೇಂದ್ರ ಅಲಿಯಾಸ್ ರೊಡ್ಡಿ (22)ಯವರನ್ನು ಬಂಧಿಸಲಾಗಿದೆ. 18 ಸಾವಿರ ಮೌಲ್ಯದ ಮರ ಕಡಿಯುವ ಯಂತ್ರ, ಕಳುವಾಗಿದ್ದ 1.05 ಲಕ್ಷ ಮೌಲ್ಯದ ಚಾಲಿ ಅಡಕೆ, ಕೃತ್ಯಕ್ಕೆ ಬಳಸಿದ್ದ 1 ಲಕ್ಷ ಮೌಲ್ಯದ ಆಟೋ ರಿಕ್ಷಾ (ಕೆಎ47-8465) ಹಾಗೂ 10 ಸಾವಿರ ಮೌಲ್ಯದ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಲಂ 303(2) ಬಿ, 289/2023, 500, 454, 457, 380, 379 ಅಡಿ ಪ್ರಕರಣ ದಾಖಲಾಗಿದೆ.
ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಎಸ್.ಎನ್. ಮಹಾಬಲೇಶ್ವರ, ಪಿಎಸ್ಐ ಸಿದ್ದರಾಮಪ್ಪ, ಸಿಬ್ಬಂದಿಗಳಾದ ಫೈರೋಜ್ ಅಹಮ್ಮದ್, ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿಗಳಾದ ಗುರುರಾಜ, ಇಂದ್ರೇಶ್, ಮತ್ತು ವಿಜಯ್ ಕುಮಾರ್ ಮೊದಲಾದವರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ