ಛಾಯಾಗ್ರಾಹಕ ಗುರು ರಾಜ್ಯ ಪ್ರಶಸ್ತಿ ಎಲ್. ಪಿ ಜಗದೀಶ್ ರವರಿಗೆ ಶ್ರದ್ಧಾಂಜಲಿ ಅರ್ಪಣೆ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ನಿವಾಸಿಯಾದ ಎಲ್.ಪಿ ಜಗದೀಶ್ ( ಫೋಟೊ ಜಗಣ್ಣ )ರವರು ಪತ್ರಕರ್ತರು ಹಾಗೂ ಛಾಯಾಗ್ರಾಹಕರಾಗಿದ್ದು ಜನಪ್ರಿಯ ರಾಗಿದ್ದರು. ಜನವರಿ 03 /2024 ರಂದು ದೈವಾಧೀನರಾಗಿದ್ದಾರೆ. ಅವರಿಗೆ ಬಾಳೆಹೊನ್ನೂರು ಹಾಗೂ ನರಸಿಂಹರಾಜಪುರದ ಸಂಘ ಸಂಸ್ಥೆಗಳಿಂದ ಪತ್ರಕರ್ತರು ವಿವಿಧ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸೇರಿ ಬಾಳೆಹೊನ್ನೂರು ಶ್ರೀ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ದಿನಾಂಕ 5/01/2024 ಸಂಜೆ 7 ಗಂಟೆಯ ಸಮಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಅವರ ಜೊತೆ ಒಡನಾಟದಲ್ಲಿ ಇದ್ದ ವ್ಯಕ್ತಿಗಳು ಅವರ ಬಗ್ಗೆ ಮಾತನಾಡಿ ದುಃಖವನ್ನು ವ್ಯಕ್ತಪಡಿಸಿದ್ದರು ಹಾಗೂ ಛಾಯಾಗ್ರಾಹಕ ಗುರು ರಾಜ್ಯ ಪ್ರಶಸ್ತಿಯನ್ನು 2023 ಸಾಲಿನಲ್ಲಿ ಪಡೆದಿದ್ದ ಜಗದೀಶ್ ರವರು ಛಾಯಾಗ್ರಾಹಕ ಹಾಗೂ ಪತ್ರಕರ್ತರಾಗಿ ಸೇವೆ ಸಲಿಸಿದರು ಮೃದು ನಗುಮುಖದ ವ್ಯಕ್ತಿಯಾಗಿದ್ದ ಇವರು ತಾಲೂಕು ಹಾಗೂ ಜಿಲ್ಲೆಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು.
ಈ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಕೆ ಟಿ ವೆಂಕಟೇಶ್, ಅಜಿತ್, ಚ್ಯೇತನ್ಯ ವೆಂಕಿ, ಸುರೇಂದ್ರ, ತಿಪೇಶ್, ರಾಘವೇಂದ್ರ , ಹಿರಣ್ಣ, ತುಪ್ಪೂರು ಮಂಜು, ಗೋವಿಂದ ಗೌಡ, ಸ್ಟೀಫನ್, ಯಜ್ಞಾ ಪುರುಷ ಭಟ್, ಸತೀಶ್ ಆರಳಿಕೊಪ್ಪ, ಸೋಮೇಶ್, ಮಹೇದಿ, ಸಚಿನ್, ಹಾಗೂ ಪತ್ರಕರ್ತರು ವಾಹನ ಸಂಘದ ಅಧ್ಯಕ್ಷರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.