ಕೋಲಾರನ್ಯೂಸ್

ಪಿಎಲ್‌ಡಿ ಮತದಾರರ ಪಟ್ಟಿ ಸಮರ್ಪಕವಾಗಿದೆ, ಲೋಪದೋಷ ಇದ್ದಲ್ಲಿ ನ್ಯಾಯಾಲಕ್ಕೆ ಹೋಗಬಹುದು

ಪಿಎಲ್‌ಡಿ ಮತದಾರರ ಪಟ್ಟಿ ಸಮರ್ಪಕವಾಗಿದೆ, ಲೋಪದೋಷ ಇದ್ದಲ್ಲಿ ನ್ಯಾಯಾಲಕ್ಕೆ ಹೋಗಬಹುದು

(KOLARA): ಬಂಗಾರಪೇಟೆ: ನನ್ನ 12 ವರ್ಷಗಳ ಅಧಿಕಾರ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡಿರುವುದಿಲ್ಲ, ಅಭಿವೃದ್ಧಿಯೇ ನನ್ನ ಮೂಲ ಗುರಿ, ಆಪಾದನೆ ಮಾಡುವವರು ಯೋಚಿಸಿ ಮಾತನಾಡಬೇಕೆಂದು, ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ, ಲೋಪ ದೋಷಗಳು ಇದೆ ಎಂದರೆ ನ್ಯಾಯಾಲಯಕ್ಕೆ ಹೋಗಿ ಎಂದು  ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.


ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು ನನ್ನ ವಿರುದ್ಧ ವಿರೋಧ ಪಕ್ಷದವರು ವಿನಾಕಾರಣ ಆರೋಪ ಮಾಡುತ್ತಿದ್ದು, ನಾನು ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದಿಲ್ಲ, ಅಭಿವೃದ್ಧಿಗೆ ಬೆಂಬಲ ನೀಡುತ್ತೇನೆ, ಯಾವುದೇ ಮತದಾರರ ಪಟ್ಟಿಯನ್ನು ನಾನು ತೆಗೆಸಿಲ್ಲ,  ಕಾನೂನು ಪ್ರಕಾರ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಮಾಡಿದ್ದಾರೆ, ಲೋಪ ದೋಷಗಳಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು ಎಂದರು.
ಚುನಾವಣಾ ಸಮಯದಲ್ಲಿ ಬಂದು ಬಾಯಿಗೆ ಬಂದAತೆ ಮಾತನಾಡುವುದು ಸರಿಯಲ್ಲ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ಕಾಂಗ್ರೆಸ್ ಅಭ್ಯರ್ಥಿಗಳು ನಮ್ಮ ಅಭ್ಯರ್ಥಿಗಳು ನೂರಕ್ಕೆ ನೂರು ಗೆಲುವುದು ಖಚಿತ ಎಂದರು.
ಎಚ್.ಕೆ.ನಾರಾಯಣಸ್ವಾಮಿ ಅಧ್ಯಕ್ಷರಾದ ನಂತರ ನಷ್ಟದಲ್ಲಿದ್ದ ಬ್ಯಾಂಕನ್ನು ಅಭಿವೃದ್ಧಿ ಮಾಡಿದ್ದು, ಹಳೆಯ ಕಟ್ಟಡ ರಿಪೇರಿ, ಮೇಲ್ಭಾಗದಲ್ಲಿ ಒಂದು ಕಟ್ಟಡ ನಿರ್ಮಾಣ, ಪಿಗ್ಮಿ ಯೋಜನೆ ಜಾರಿ ಸೇರಿದಂತೆ ತಿಂಗಳಿಗೆ 1 ಲಕ್ಷ ರೂಗಳ ಆದಾಯ ಬರುವಂತೆ ಬ್ಯಾಂಕನ್ನು ಅಭಿವೃದ್ಧಿ ಪಥದ ತಗೊದುಕೊಂಡು ಹೋಗಿರುವ  ಕೀರ್ತಿ ನಮ್ಮದಾಗಿದೆ, ಅಭಿವೃದ್ಧಿಗೆ ರೈತರು ಮತ ನೀಡಲಿದ್ದಾರೆ,

ನಮ್ಮ ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ಧ ಎಂದರು, ಅದೇ ರೀತಿ ಕಾಮಸೂಮುದ್ರ ಎಸ್‌ಟಿ ಅಭ್ಯರ್ಥಿ ಆನಂದ್ ರವರು ಒಬ್ಬರೇ ನಾಮಪತ್ರ ಸಲ್ಲಿಸಿರುವ ಕಾರಣ ಮೊದಲ ಗೆಲುವು ನಮಗೆ ದೊರತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಕೆ.ನಾರಾಯಣಸ್ವಾಮಿ, ಮಾಜಿ ನಿರ್ದೇಶಕರಾಗಿರಾದ ಚಿಕ್ಕಹೊಸಹಳ್ಳಿ ಮಂಜುನಾಥ್, ಹೊಸೂರು ಕೃಷ್ಣಪ್ಪ, ಮಹದೇವ್, ರಘುನಾಥ್, ಮಂಜುನಾಥ್, ಅರುಣಾಚಲಂಮಣಿ, ಶ್ರೀನಿವಾಸಗೌಡ ಸೇರಿದಂತೆ ಅನೇಕ  ಮುಖಂಡರು ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code