ಪೊಲೀಸರಿಂದ ನಾಡ ಬಂದೂಕುಗಳ ತಯಾರಕರ ತಂಡ ಪತ್ತೆ-8 ಆಯುಧಗಳ ಪತ್ತೆ
(KOLARA): ಕೋಲಾರ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ 8 ನಾಡ ಬಂದೂಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಬೂದಿಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.*
ಬೂದಿಕೋಟೆ ಹೋಬಳಿ, ಪಲಮಡಗು ಗ್ರಾಮದ ಕಾಲೋನಿ ಬಳಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ರಿಪೇರಿ ಮಾಡುವುದು ನಡೆಯುತ್ತಿದ್ದುದರ ಕುರಿತು ಪೊಲೀಸರಿಗೆ ದೊರೆತ ಮಾಹಿತಿಯನ್ವಯ ಮೇ. 17 ರಂದು ಪೊಲೀಸರು ದಾಳಿ ನಡೆಸಿದರು.
ಡಿವೈಎಸ್ಪಿ ಎಸ್.ಪಾಂಡುರಂಗ ಅವರುಗಳ ಮಾರ್ಗದರ್ಶನದಲ್ಲಿ ಕಾಮಸಮುದ್ರಂ సిపిఐ ಟಿ.ಟಿ.ಕೃಷ್ಣ ಮತ್ತು ಪಿಎಸ್ಐ ಸುನಿಲ್ ಐರೋಡಗಿ ನೇತೃತ್ವದ ವಿಶೇಷ ಅಪರಾಧ ತಂಡದ ಪೊಲೀಸರು ಕಾರ್ಯಾಚರಣೆ ನಡೆಸಿ, ಬೂದಿಕೋಟೆ ಹೋಬಳಿ ಪಲಮಡಗು ಗ್ರಾಮದ ಎಂ.ಮಾರಪ್ಪ @ ಚಿಕ್ಕಪ್ಪಯ್ಯ, ತಮಿಳುನಾಡು ಕೃಷ್ಣಗಿರಿ ಸಮೀಪದ ಪೆರಿಯಗುತ್ತಿ ಗ್ರಾಮದ ಸಿ.ರಾಮಪ್ಪ ಮತ್ತು ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಸಮೀಪದ ರಾಮನದೊಡ್ಡಿ ಗ್ರಾಮದ ಧರ್ಮನ್ ಪಡೇಶಪ್ಪ ಎಂಬುವವರನ್ನು ಬಂಧಿಸಿ, ಅವರುಗಳಿಂದ 80000ರೂ. ಮೌಲ್ಯದ 8
ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಕಾಮಸಮುದ್ರಂ ಸಿಪಿಐ ಕೃಷ್ಣ, ಪಿಎಸ್ಐಗಳಾದ ಸುನಿಲ್ಐರೋಡಗಿ, ಲಕ್ಷ್ಮೀನಾರಾಯಣ, ಸಿಬ್ಬಂದಿಗಳಾದ ವಿಜಯಕುಮಾರ್, ಅಮರೇಶ್, ಮುನಿಕೃಷ್ಣಪ್ಪ, ಮಂಜುನಾಥ, ವೆಂಕಟೇಶ್ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಶ್ಲಾಘಿಸಿದ್ದಾರೆ.
ವರದಿ: ವಿಷ್ಣು ಕೋಲಾರ