ಚುನಾವಣಾ ಸಂದರ್ಭದಲ್ಲಿ ಮಾತ್ರ ಆಶ್ವಾಸನೆ ಮತ್ತೆ ತಿರುಗಿ ನೋಡದ ರಾಜಕಾರಣಿಗಳು…! ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ..!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರಿನ ಮಲಯಾಳಿ ಕಾಲೋನಿ ನಿವಾಸಿಗಳಿಂದ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು ಚುನಾವಣಾ ಸಂದರ್ಭದಲ್ಲಿ ಮಾತ್ರ ಆಶ್ವಾಸನೆ ಇಟ್ಟು ಮತ್ತೆ ಏರಿಯಾದ ಕಡೆ ಅಧಿಕಾರಿಗಳು, ಶಾಸಕರು ತಿರುಗಿ ನೋಡುವುದಿಲ್ಲ ಆದ್ದರಿಂದ ಈ ಬಾರಿ ಚುನಾವಣಾ ಬಹಿಷ್ಕಾರ.
ಕಡ್ಲೆಮಕ್ಕಿ ಅಂಗನವಾಡಿಯು ದುರಸ್ಥಿತಿ ಗೊಂಡು 1 ವರ್ಷ ಮೇಲೆ ಆಯಿತು ಅಲ್ಲಿನ ಮಹಿಳೆಯರು 2 ಕಿಮೀ ದೂರ ಮಸೀದಿಕೆರೆ ಅಂಗನವಾಡಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಬಿಟ್ಟು ಬರಬೇಕು. ಹಾಗು ಇದು ಅಲ್ಲಿನ ಮೆಂಬರ್ಗಳ ಗಮನಕ್ಕೆ ಬಂದರು ಮೆಂಬರ್ ಗಳು ಯಾವುದು ಗೊತ್ತಿಲ್ಲದ ರೀತಿಯಲ್ಲಿ ಇದ್ದಾರೆ. ಆದರಿಂದ ಜನರು”. ನಮಗೆ ರೋಡ್ ಇಲ್ಲ, ಮಕ್ಕಳಿಗೆ ಅಂಗನವಾಡಿ ಇಲ್ಲ, ನೀರು ಇಲ್ಲ, ಗ್ರಾಮ ಪಂಚಾಯಿತಿ ಕಾಂಗ್ರೆಸ್ ನವಾರದ್ದು, ಮೆಂಬರ್ ಕಾಂಗ್ರೆಸ್ ನವರು, ಕೆಲಸ ಮಾತ್ರ ಆಶ್ವಾಸನೆ ಅಷ್ಟೆ. ನಮ್ಮನ್ನ ಮೂಲೆ ಗುಂಪು ಮಾಡ್ತಾ ಇದಾರೆ ಬೇರೆ ಕಡೆ ಜನ ಇಲ್ಲದ ಜಗದಲ್ಲಿ ರೋಡ್ ಅಂಗನವಾಡಿ ಗುದ್ದಲಿ ಪೂಜೆ ಅಂತೇ, ಶಾಸಕರಿಗೆ ಕಣ್ಣೆ ಕಾಡ್ತಾ ಇಲ್ಲ ನಮ್ಮ ಏರಿಯಾ. ರೋಡ್ ಗೆ ಬೇಡಿಕೆ ಇಟ್ಟು ಕಾಂಗ್ರೆಸ್ ಮೆಂಬರ್ ಗಳು ಏನು ಉತ್ತರನೇ ಕೊಡ್ತಿಲ್ಲ ಇನ್ನು ಅಂಗನವಾಡಿ ಯಾವಾಗ ಆಗೋದು.? ಕಡ್ಲೆಮಕ್ಕಿ ಮೆಂಬರ್ಗಳಿಗೆ ಗಳಿಗೆ ದಿಕ್ಕಾರ. “ಎಂದು ಜನರು ಮೆಂಬರ್ಗಳ ವಿರುದ್ಧ ದಿಕ್ಕಾರ ಕೂಗುತಿದ್ದಾರೆ.
ಬಿ. ಕಣಬೂರು ಗ್ರಾಮ ಪಂಚಾಯತಿ ಕಡ್ಲೆಮಕ್ಕಿ ವಾರ್ಡ್ 70 ವರ್ಷ ದಿಂದ ಕಾಂಗ್ರೆಸ್ ದೇ ಅಧಿಕಾರವಾದರು ಒಂದು ಕೆಲಸ ಆಗಿಲ್ಲ ಒಂದು ರೋಡ್ ಇಲ್ಲ ಒಂದು ಬಿದಿ ದೀಪ ಇಲ್ಲ ಬಾಕ್ಸ್ ಚರಂಡಿ ಇಲ್ಲ ನೀರು ಸರಿಯಾಗಿ ಬರ್ತಿಲ್ಲ. ಇಲ್ಲಿನ ಜನಗಳ ಕಷ್ಟ ಕೇಳೋರು ಇಲ್ಲದಾಗೀದೆ. 15ವರ್ಷ ದಿಂದ ಬೇಡಿಕೆ ಇಟ್ಟು ಒಂದು ತಿಂಗಳ ಮುಂಚೆ ಅರ್ಧ ರೋಡ್ ಮಾಡಿ ಹೋಗಿದ್ದಾರೆ. ಒಂದು ದಿವಸನು ಅಲ್ಲಿಯ ಸ್ಥಳೀಯ ಕಾಂಗ್ರೆಸ್ ಮೆಂಬರ್ಗಳು ಬಂದು ನೋಡಿಲ್ಲ ಅಲ್ಲಿನ ಜನಗಳ ಪರಿಸ್ಥಿತಿ ರೋಡ್ ಕ್ಯೂರಿಂಗ್ ಆಗಿಲ್ಲ ಅಂತ ಅವರತ್ರ ಹೇಳಿ ಹೇಳಿ ಬಾಳೆಹೊನ್ನೂರ್ ನ ಒಬ್ರು ದಾನಿಗಳು ನೀರು ಟ್ಯಾಂಕರ್ ಸ್ಪೋನ್ಸರ್ ಮಾಡಿದ್ರು ಆದ್ರೂನು ಅಲ್ಲಿನ ಮೆಂಬರ್ ಬಂದು ನೋಡಿಲ್ಲ ಈವಾಗ ರೋಡ್ ಅರ್ಧ ಆಗಿದೆ ರೋಡ್ ಎಡ್ಜ್ ಮಣ್ಣು ಅಕೋಕ್ಕೆ ಹೇಳಿ ಹೇಳಿ ಸಾಕಾಯಿತು. ಬೈಕ್ ಸವಾರರು ರಸ್ತೆಯಲ್ಲಿ ಪ್ರೇಣಿಸಲು ಪರದಾಡುವ ಪರಿಸ್ಥಿತಿಯಾಗಿದೆ. ಲೋಕಸಭಾ ಚುನಾವಣೆ ಪ್ರಚಾರಕ್ಕೆ ತಮ್ಮ ಕಾಲೋನಿಗೆ ಬರದಂತೆ ರಾಜಕೀಯ ಮುಖಂಡರಿಗೆ, ಹಾಗೂ ಈ ಬಾರಿ ಬಹಿಷ್ಕಾರ ಹಾಕುತ್ತಿರುವುದು ತಮ್ಮ ಕಾಲೋನಿ ಯಿಂದ ಮತ ಚಲಾವಣೆಗೆ ಬರದೇ ಇರುವುದು ತಮ್ಮ ಕಾಲೋನಿಗೆ ಪ್ರತಾಪ್ ಮತ ಪ್ರಚಾರಕ್ಕೆ ಬರಬೇಡಿ ಎಂದು ಬಹಿಷ್ಕಾರ ಹಾಕುತ್ತಿದ್ದಾರೆ. ರೋಡ್ ಆಗಿಲ್ಲಾ ಅಂದರೇ ಒಂದೆ ಒಂದು ಓಟು ಹಾಕುವುದಿಲ್ಲ ಯೆಂದು ಪ್ರತಿಭಟಿಸಿದ್ದರೇ. ರಸ್ತೆ ದುರಸ್ತಿ ಮಾಡದೇ ಇದ್ದರೆ ಗ್ರಾಮ ಪಂಚಾಯಿತಿಯ ಮುಂದೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಬಿಷ, ಕತ್ತಿಜ, ಜಗದೀಶ್ ಗೌಡ, ಸಿದ್ದಿಕ್, ಫಾತಿಮಾ, ಮಿಸ್ರಿಯ, ಸಿದ್ದಿಕ್, ಖಾಲಿದ್, ಟಿ.ಟಿ ಮೊಹಮದ್ ಮತ್ತಿತ್ತರು ಸಹ ಇದ್ದರು.