ನ್ಯೂಸ್ರಾಜಕೀಯಶಿವಮೊಗ್ಗ

ಬಿ‌.ಜೆ.ಪಿ.ಅಧಿಕಾರಕ್ಕೆ ಬರೋದು ಯಾರಿಂದಲೂ ತಪ್ಪಿಸಲು ಸಾದ್ಯ ಇಲ್ಲ ಪ್ರಶಾಂತ್.

ಬಿ‌.ಜೆ.ಪಿ.ಅಧಿಕಾರಕ್ಕೆ ಬರೋದು ಯಾರಿಂದಲೂ ತಪ್ಪಿಸಲು ಸಾದ್ಯ ಇಲ್ಲ ಪ್ರಶಾಂತ್.

(SHIVAMOGA): ದೇಶಕ್ಕಾಗಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು ಎಲ್ಲರು ಪಣತೋಡೊಣ ಎಂದು ಪ್ರಶಾಂತ ಕರೆ.

ಭಾರಂಗಿ ಹೋಬಳಿ ಜನರನ್ನು ಒಕ್ಕಲೆಬ್ಬಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಒಕ್ಕಲೆಬ್ಬಿಸುವ ಗ್ರಾಮಸ್ಥರನ್ನು ಎಲ್ಲಿಗೆ ಕಳಿಸುತ್ತೀರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಓಬಿಸಿ ಜಿಲ್ಲಾ ಪ್ರಭಾರಿ ಕೆ.ಎಸ್.ಪ್ರಶಾಂತ್ ಪ್ರಶ್ನೆ ಮಾಡಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೆ ಎರಡು ಬಾರಿ ನಾಡಿಗೆ ವಿದ್ಯುತ್ ನೀಡಲು ಸರ್ವಸ್ವವನ್ನು ಕಳೆದುಕೊಂಡ ಜನರ ಹಿತಕಾಯಬೇಕಾದ ಶಾಸಕರು ಅವರನ್ನು ಒಕ್ಕಲೆಬ್ಬಿಸಿ ಎಂದು ಪತ್ರ ಬರೆದಿರುವುದು ದುರದೃಷ್ಟಕರ ಸಂಗತಿ. ಒಂದೊಮ್ಮೆ ಸ್ಥಳೀಯ ಜನರು ಏನಾದರೂ ಹೆಚ್ಚುಕಡಿಮೆ ಮಾಡಿಕೊಂಡರೆ ಅದಕ್ಕೆ ಶಾಸಕರೆ ನೇರ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.

ರಾಮೇಶ್ವರ ಕೆಫೆ ಸ್ಪೋಟ ಪ್ರಕರಣದ ಆರಂಭದಲ್ಲಿ ಸ್ಪೋಟ ಮಾಡಿದವರನ್ನು ಗುಂಡಿಟ್ಟು ಕೊಲ್ಲಿ ಎಂದು ಶಾಸಕರು ರಾಜರೋಷವಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಕಾರಣ ಪ್ರಕರಣ ತನಿಖೆ ಸಂದರ್ಭದಲ್ಲಿ ಹಿಂದೂ ಯುವಕನೊಬ್ಬನ ಮೊಬೈಲ್ ಫೋನ್‌ನಿಂದ ಕರೆ ಹೋಗಿದ್ದೇ ಆಗಿತ್ತು. ಯಾವಾಗ ಪ್ರಕರಣದಲ್ಲಿ ಹಿಂದೂ ಯುವಕರ ಪಾತ್ರವಿಲ್ಲ. ಮುಸ್ಲೀಮರು ಇದ್ದಾರೆ ಎನ್ನುವುದು ಗೊತ್ತಾಯಿತೋ ಶಾಸಕರ ವರಸೆ ಬದಲಾಗಿದ್ದು, ಈಗ ಗುಂಡಿಟ್ಟು ಕೊಲ್ಲಿ ಎಂದು ಏಕೆ ಹೇಳಿಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಗೆಲುವಿಗೆ ಪೂರಕ ವಾತಾವರಣ ಇದೆ ಎಂದು ಹೇಳಿದರು.


ಬಿಜೆಪಿ ಹಿರಿಯ ಮುಖಂಡ ಕೆ.ಎನ್.ಶ್ರೀಧರ್ ಮಾತನಾಡಿ, ಕ್ಷೇತ್ರದ ಶಾಸಕರ ವರ್ತನೆಯಿಂದ ಬೇಸತ್ತು ಕಾಂಗ್ರೇಸ್‌ನಿಂದ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೇಸ್‌ನಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಷ್ಟು ಉತ್ಸಾಹ ಇಲ್ಲವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ ಅನುದಾನದ ಕಾಮಗಾರಿಯನ್ನು ಹಾಲಿ ಶಾಸಕರು ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಯಾವ ಹೊಸ ಅನುದಾನ ಕಾಂಗ್ರೇಸ್ ಸರ್ಕಾರ ನೀಡಿಲ್ಲ. ಮಾತೆತ್ತಿದರೆ ಕೇಂದ್ರ ಸರ್ಕಾರ ಬರಪರಿಹಾರಕ್ಕೆ ಹಣ ಕೊಟ್ಟಿಲ್ಲ ಎಂದು ಕಾಂಗ್ರೇಸ್ ಹೇಳುತ್ತದೆ. ಕೇಂದ್ರ ಸರ್ಕಾರ ಹಣ ಕೊಡುವುದು ವಿಳಂಬವಾದರೆ ರಾಜ್ಯ ಸರ್ಕಾರದ ಬಳಿ ಇರುವ ಪ್ರಕೃತಿ ವಿಕೋಪ ನಿಧಿಯನ್ನು ಬಳಕೆ ಮಾಡಿ ಜನರನ್ನು ರಕ್ಷಣೆ ಮಾಡುವತ್ತ ಗಮನ ಹರಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ತರದ್ದು ಐದು ದಶಕಗಳ ಸಮಸ್ಯೆಯಾಗಿದೆ. ಹಿಂದೆ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದು, ಸಚಿವರು, ಶಾಸಕರು ಕಾಂಗ್ರೇಸ್‌ನವರೆ ಇದ್ದರು. ಸಮಸ್ಯೆ ಬಗೆಹರಿಸದೆ ಈಗ ಬಿಜೆಪಿಯತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ಹತ್ತು ವರ್ಷದ ಹಿಂದೆ ಚುನಾವಣೆಯಲ್ಲಿ ಸೋತು ಹೋದವರು ಈಗ ಮತ್ತೆ ಚುನಾವಣೆಗೆ ಬಂದಿದ್ದಾರೆ. ಎಷ್ಟು ಬೂತ್ ಇದೆ, ಸಮಸ್ಯೆ ಏನು ಎನ್ನುವುದು ಕಾಂಗ್ರೇಸ್ ಅಭ್ಯರ್ಥಿಗೆ ಗೊತ್ತಿಲ್ಲ. ಬಿ.ವೈ.ರಾಘವೇಂದ್ರ ನಿರಂತರವಾಗಿ ಜನರ ಜೊತೆ ಸಂಪರ್ಕದಲ್ಲಿದ್ದು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಈಡಿಗರೂ ಸೇರಿದಂತೆ ಎಲ್ಲ ಜಾತಿಜನಾಂಗದವರು ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಲು ಸಂಕಲ್ಪ ಮಾಡಿದ್ದಾರೆ. ಹಾಲಿ ಶಾಸಕರ ಬೆಂಬಲಿಗರು ಮರಳು ಮಾಫಿಯಾವನ್ನು ಪೋಷಣೆ ಮಾಡುತ್ತಿದ್ದು, ಇತರೆಯವರು ಕಾನೂನಾತ್ಮಕವಾಗಿ ಮರಳು ಸಾಗಾಣಿಕೆ ಮಾಡಿದರೆ ಅವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಗೋಷ್ಟಿಯಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ವಿ.ಮಹೇಶ್, ಹು.ಭಾ.ಅಶೋಕ್, ಚಂದ್ರಕಾಂತ್, ರಾಧಿಕಾ ಪೈ ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code