ತಾಲ್ಲೂಕಿನಲ್ಲಿ ಯಾವುದೇ ರೀತಿಯಲ್ಲಿ ಮಳೆಗಾಲದಲ್ಲಿ ಹಾನಿ ಆಗದಂತೆ ಮುಂಜಾಗ್ರತಾ ಕ್ರಮ.
(SHIVAMOGA): ಸಾಗರ ಉಪವಿಭಾಗದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಇದಕ್ಕಾಗಿಯೇ ಉಪವಿಭಾಗ ಮಟ್ಟದಲ್ಲಿ ಒಂದು ಕಮಿಟಿಯನ್ನು ಮಾಡಿ ಆ ಕಮಿಟಿಯು ಪ್ರತಿ ಹೋಬಳಿಯಲ್ಲಿ ಏನೇ ಆದರೂ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಹಾರ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಸಾಗರದ ಕೆಲವು ಕಡೆಯಲ್ಲಿ ಅಂದರೆ ತಾಳಗುಪ್ಪ ಗ್ರಾಮದಲ್ಲಿ ಕಸವಿಲೇವಾರಿ ಸ್ಥಗಿತಗೊಂಡಿದ್ದು ಅದಕ್ಕೆ ತಕ್ಷಣವೇ ತಾತ್ಕಾಲಿಕವಾಗಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಇದ್ದರು ಬೆಳಿಗ್ಗೆ 9 ರಿಂದ ಸಂಜೆ 6 ರ ತನಕ .ತಾಲ್ಲೂಕು ಪಂಚಾಯತ್ ನ ಸಹಾಯವಾಣಿ ಸಂಖ್ಯೆ 08183–226074 ಸಂಪರ್ಕಿಸಿ ದೂರನ್ನು ದಾಖಲಿಸಬಹುದು.
ವರದಿ: ರಾಘವೇಂದ್ರ ತಾಳಗುಪ್ಪ