ಕೋಲಾರಜಿಲ್ಲೆನ್ಯೂಸ್

ಪ್ರಜಾಪ್ರಭುತ್ವ ಹಬ್ಬಕ್ಕೆ ಸನ್ನದ್ಧ, ಧೃತಿಗೆಡುವ ಅಗತ್ಯವಿಲ್ಲ: ಸಹಾಯಕ ಚುನಾವಣಾ ಅಧಿಕಾರಿ ಶಿವಕುಮಾರ್ ಅಭಿಮತ.

ಪ್ರಜಾಪ್ರಭುತ್ವ ಹಬ್ಬಕ್ಕೆ ಸನ್ನದ್ಧ, ಧೃತಿಗೆಡುವ ಅಗತ್ಯವಿಲ್ಲ: ಸಹಾಯಕ ಚುನಾವಣಾ ಅಧಿಕಾರಿ ಶಿವಕುಮಾರ್ ಅಭಿಮತ.

(KOLARA): ಬಂಗಾರಪೇಟೆ: ಚುನಾವಣೆ ಎಂಬುದು ದೇಶದ ಬಹುದೊಡ್ಡ ಪ್ರಜಾಪ್ರಭುತ್ವ ಹಬ್ಬವಾಗಿದೆ ಇದನ್ನು ಸಂಭ್ರಮದಿoದ ಆಚರಿಸಲು ಚುನಾವಣಾ ಆಯೋಗ ಸಕಲ ಸಿದ್ಧತೆಗಳೊಂದಿಗೆ ಸನ್ನದ್ಧವಾಗಿದೆ, ಸಾರ್ವಜನಿಕರು ಧೃತಿಗೆಡದೆ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ಮಾಡಬೇಕು ಎಂದು ಸಹಾಯಕ ಚುನಾವಣಾ ಅಧಿಕಾರಿ ಶಿವಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯ ಭೀಮಸಭಾಂಗಣದಲ್ಲಿ ಚುನಾವಣಾ ಆಯೋಗ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಅಧಿಸೂಚನೆ ಹೊರಬಂದಿದ್ದು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ, ದಿನಾಂಕ 18/೦3/2024ರ ಅಧಿಸೂಚನೆಯಂತೆ ನಾಮಪತ್ರ ಸ್ವೀಕರಿಸಲಾಗುವುದು, ದಿನಾಂಕ ೦8/೦4/2024 ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನಾಂಕವಾಗಿರುತ್ತದೆ, ಹಾಗೂ 26/೦4/24ರಂದು ಮತದಾನ ದಿನಾಂಕ ನಿಗದಿಪಡಿಸಲಾಗಿದೆ ಹಾಗೂ ಎಪ್ರಿಲ್ ೨೬ ಮತದಾನ ನಡೆಯಲಿದೆ ಜೂನ್ 6 ರಂದು ಮತದಾನ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರವು ಬಂಗಾರಪೇಟೆ, ಕೆಜಿಎಫ್, ಕೋಲಾರ, ಮುಳಬಾಗಿಲು, ಮಾಲೂರು, ಶ್ರೀನಿವಾಸಪುರ, ಶಿಡ್ಲಘಟ್ಟ, ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ, ಇವುಗಳಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರವನ್ನು ವಿಶ್ಲೇಷಣೆ ಮಾಡುವುದಾದರೆ ಒಟ್ಟು 2,9,292. ಮತದಾರರಿದ್ದು ಅವುಗಳಲ್ಲಿ ಅವುಗಳಲ್ಲಿ 1.03.800 ಪುರುಷ ಮತದಾರರು, 1.0.5.453. ಮಹಿಳಾ ಮತದಾರರು ಹಾಗೂ 39 ತೃತೀಯಲಿಂಗ ಮತದಾರರು ಇದ್ದಾರೆ.

ಬಿಗಿ ಭದ್ರತೆಯೊಂದಿಗೆ ಮುಕ್ತ ಮತದಾನ:
ಮುಕ್ತ ಮತದಾನ ನಡೆಸಲು ಚುನಾವಣಾ ಆಯೋಗವು ಯಾವುದೇ ಅಹಿತಕರ ಘಟನೆ, ನಿಯಮಬಾಹಿರ ಚಟುವಟಿಕೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತನ್ನು ಒದಗಿಸಲಾಗಿದೆ, ಕನಮ್ಮನಹಳ್ಳಿ, ದಿಂಬ, ಡಿ.ಪಿ.ಹಳ್ಳಿ, ಮರಾಠಹೊಸಹಳ್ಳಿ ಬಳಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಚುನಾವಣಾ ಅಕ್ರಮ ತಡೆಗಟ್ಟಲಾಗುವುದು, ಮತ್ತು ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿದ್ದು 11 ಮತಗಟ್ಟೆಗಳನ್ನು ಸೂಕ್ಷ್ಮ, ೬೯ ಮತಗಟ್ಟೆ ಅತಿಸೂಕ್ಷ್ಮ, ಹಾಗೂ ಉಳಿದ 174ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಜಿಲ್ಲಾ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಹೆಚ್ಚಿನ ಭದ್ರತೆಯೊಂದಿಗೆ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು.

ಆಧುನಿಕ ಯಂತ್ರ ಮತ್ತು ತಂತ್ರಾoಶಗಳ ಮೂಲಕ ಪಾರದರ್ಶಕ ಚುನಾವಣೆ:
ಈ ಭಾರಿ ಚುನಾವಣೆಯಲ್ಲಿ ಅತ್ಯಾಧುನಿಕ ಯಂತ್ರ ಮತ್ತು ತಂತ್ರಾoಶಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಹಾಗೂ ವಿವಿಧ ತಂಡಗಳನ್ನು ರಚಿಸಲಾಗಿದೆ ಅವುಗಳಲ್ಲಿ ಎಫ್‌ಎಸ್‌ಟಿ ತಂಡವು ಮೂರು ಹಂತಗಳಲ್ಲಿ ಕಾರ್ಯ ನಿರ್ವಹಿಸಲಿದ್ದು ಅನೈತಿಕ ಚುನಾವಣಾ ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲಿದೆ. ಸಿ.ವಿ.ಸೇಲ್ ಮುಖಾಂತರ ಸಾರ್ವಜನಿಕರು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಆಸೆ ಆಮೀಷಗಳನ್ನು ನೀಡುತ್ತಿದ್ದರೆ ಅಥವಾ ಚುನಾವಣಾ ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಫೋಟೋವನ್ನು ಕ್ಲಿಕ್ಕಿಸಿ ಕಳುಹಿಸಿದರೆ ಕೇವಲ ಮೂರೇ ನಿಮಿಷದಲ್ಲಿ ಎಫ್‌ಎಸ್‌ಟಿ ತಂಡ ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಲಾಗುತ್ತದೆ.
ವಿ.ಎಸ್.ಟಿ ತಂಡವು ರಾಜಕೀಯ ಪಕ್ಷಗಳು ನಡೆಸುವಂತಹ ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಖರ್ಚು ವೆಚ್ಚಗಳನ್ನು ಬಳಕೆ ಮಾಡಿದ ವಸ್ತುಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡುವುದರ ಮೂಲಕ ತೀವ್ರ ನಿಗಾ ವಹಿಸಲಾಗುವುದು.
ಇ.ಎಂ.ಟಿ: ತಂಡವು ಚಿತ್ರೀಕರಿಸಿದ ವಿಡಿಯೋವನ್ನು ಪರಿಶೀಲಿಸಿ ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕ್ರೂಢೀಕರಿಸಲಾಗುತ್ತದೆ.

ಸುವಿಧಾ ಆಪ್ ಮೂಲಕ ಅನುಮತಿ:
ರಾಜಕೀಯ ಪಕ್ಷದ ನಾಯಕರು, ಮುಖಂಡರು ಚುನಾವಣಾ ಪ್ರಚಾರಕ್ಕಾಗಿ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿ ಎಂಬ ಸುವಿಧಾ ಆನ್‌ಲೈನ್ ಆಫ್ ವ್ಯವಸ್ಥೆಯನ್ನು ಒದಗಿಸಲಾಗಿದ್ದು ಆ ಮೂಲಕ ಅನುಮತಿಯನ್ನು ಪಡೆಯಬಹುದು.

ಜನಸ್ನೇಹಿ ಚುನಾವಣೆಗೆ ಕಾರ್ಯಪ್ರವೃತ್ತ:
ಚುನಾವಣಾ ಆಯೋಗವು ಶೇಕಡ 1೦೦ರಷ್ಟು ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಅದರನ್ವಯ ಮಹಿಳಾ ಮತದಾರರಿಗಾಗಿ (ಪಿಂಕ್ ಬೂತ್) ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ವಿಶೇಷಚೇತನರಿಗಾಗಿ ಅಗತ್ಯವಾಗಿಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು, ಮತಕ್ಷೇತ್ರವನ್ನು ಪರಿಸರಸ್ನೇಹಿಯನ್ನಾಗಿಸಿ, ಮತದಾನದ ಸಮಯದಲ್ಲಿ ಕರೆತರುವ ಮಕ್ಕಳಿಗೆ ಶಿಶು ಪಾಲನಾ ಕೇಂದ್ರದ ಮಾದರಿ ರೂಪದಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಹೋಮ್ ವೋಟಿಂಗ್ ವ್ಯವಸ್ಥೆ:
ಹಾಗೂ 85 ವರ್ಷ ಮೇಲ್ಪಟ್ಟ ವಯೋವೃದ್ಧರು ಮತದಾನದಿಂದ ವಂಚಿತರಾಗಬಾರದು ಪ್ರಜಾಪ್ರಭುತ್ವ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು, ಎಂಬ ಸದುದ್ದೇಶದಿಂದ ಹೋಮ್ ವೋಟಿಂಗ್ ಎಂಬ ವಿನೂತನ ಪದ್ಧತಿಯನ್ನು ಜಾರಿಗೆ ತಂದಿದ್ದು, ವಯೋವೃದ್ಧರು ತಮ್ಮ ಮನೆಯಲ್ಲಿಯೇ ಕೂತು ಮತದಾನ ಚಲಾಯಿಸಬಹುದು. ಒಟ್ಟಾರೆಯಾಗಿ ಮುಕ್ತ, ಪಾರದರ್ಶಕ, ಜನಸ್ನೇಹಿ, ಚುನಾವಣೆಗೆ ಹೆಚ್ಚಿನ ಆದ್ಯತೆಯನ್ನು ಒದಗಿಸಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ರಶ್ಮಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code