ಕೋಲಾರನ್ಯೂಸ್

ಭಾರತವನ್ನು ವಿಶ್ವಗುರುವಾಗಿಸುವ ಪಣತೊಟ್ಟಿರುವ ಪ್ರಧಾನಿ ಮೋದಿ.

ಭಾರತವನ್ನು ವಿಶ್ವಗುರುವಾಗಿಸುವ ಪಣತೊಟ್ಟಿರುವ ಪ್ರಧಾನಿ ಮೋದಿ.

(KOLARA): ಕೋಲಾರ : ಭಾರತವನ್ನು ವಿಶ್ವಗುರುವಾಗಿಸುವ  ಪಣವನ್ನು ಪ್ರಧಾನಿ ಮೋದಿ ಪಟ್ಟಿದ್ದಾರೆ ಎಂದು ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಲಕ್ಷ್ಮಣಗೌಡ ತಿಳಿಸಿದರು,

ತಾಲೂಕಿನ ಆರಾಭಿಕೊತ್ತನೂರು ಗ್ರಾಮದಲ್ಲಿ ಬಿಜೆಪಿಯ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74 ನೇ ಜಯಂತಿ ಹಾಗೂ ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯರ 108ನೇ  ಜಯಂತಿಯನ್ನು ಗಿಡ ನೆಡುವುದರ ಮೂಲಕ  ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು,

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮೋದಿಯವರ ಮೂರನೇ ಅವಧಿಯು  ಅವರ ಇಂದಿನ ಅಧಿಕಾರ ಅವಧಿಯಲ್ಲಿ ಹಾಕಿದ ಅಡಿಪಾಯದ ಮೇಲೆ ನಿರ್ಮಾಣ ಮಾಡುವ ನಿರೀಕ್ಷೆ ಇದೆ, ತಾಂತ್ರಿಕ ನಾವಿನ್ಯತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಂತರಾಷ್ಟ್ರೀಯ ರಾಜ ತಾಂತ್ರಿಕತೆಗೆ ನವೀಕೃತ ಒತ್ತು ನೀಡಿ, ಭಾರತವನ್ನು ಜಾಗತಿಕ ಶಕ್ತಿ ಕೇಂದ್ರವನ್ನಾಗಿ ಮತ್ತಷ್ಟು  ಬೆಳೆಯುವಂತೆ ಮಾಡಿದೆ ಎಂದರು

ಬಿಜೆಪಿಯ ತಾಲೂಕು ಅಧ್ಯಕ್ಷ ಸಿ.ಡಿ ರಾಮಚಂದ್ರ ಮಾತನಾಡಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದರೆ ಎಲ್ಲರೊಂದಿಗೆ, ಎಲ್ಲರಿಗೂ ಅಭಿವೃದ್ಧಿ, ಎಲ್ಲರಿಗೂ ನಂಬಿಕೆ ಎಂಬ ಘೋಷಣೆಯೊಂದಿಗೆ ಸಮಗ್ರ ಅಭಿವೃದ್ಧಿ ಆಧಾರಿತ ಮತ್ತು  ಭ್ರಷ್ಟಾಚಾರ ಮುಕ್ತ ವಿಧಾನದ ಮೂಲಕ ಆಡಳಿತದಲ್ಲಿ ಮೂಲಭೂತ ಬದಲಾವಣೆಯನ್ನು ತಂದರು  ಎಂದರು,

ಈ ಕಾರ್ಯಕ್ರಮವು ಕೋಲಾರ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆಂದಟ್ಟಿ ಚಂದ್ರಶೇಖರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಇ. ಶಿವಣ್ಣ, ರಾಜ್ಯ ರೈತ ಮೋರ್ಚಾ ಸದಸ್ಯ ನಾರಾಯಣಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಓಹಿಲೇಶ್, ಕಾರ್ಯಕರ್ತರಾದ ಎನ್ ಚಂದ್ರಶೇಖರ್, ಶ್ರೀನಿವಾಸ ಆಚಾರಿ, ಮುರಳಿ, ಶ್ರೀನಿವಾಸಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code