ಕಾರ್ಯಕ್ರಮಗಳು ಯಾವತ್ತೂ ಸಣ್ಣದಾಗಿರಬೇಕು, ಮಾಡುವ ಕೆಲಸಗಳು ದೊಡ್ಡದಾಗಿರಬೇಕು.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಗಡಿಗೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪದವಿ ಸ್ವೀಕಾರ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಪೂವಸಿದ್ಧತೆ ತಯಾರಿಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.
ತಾಲೂಕು ಮತ್ತು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತು ವತಿಯಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು ಹಾಗೂ ನಡೆದುಕೊಂಡು ಬರುತ್ತಿದ್ದು ಹೆಚ್ಚು ಹೆಚ್ಚು ಕನ್ನಡ ಶಾಲೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ನಡೆಸುವುದಾಗಿ ಪ್ರಾಸ್ತವಿಕ ನುಡಿಯಲ್ಲಿ ಸತೀಶ್ ಅರಳಿಕೊಪ್ಪ ರವರು ತಿಳಿಸಿದರು. ಹಾಗೂ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ಶಾಲೆಗೆ ಎರಡು ತಿಂಗಳ ಅವಧಿಗೆ ಕನ್ನಡ ಅತಿಥಿ ಶಿಕ್ಷಕರನ್ನು ನೀಡುವುದಾಗಿ ತಿಳಿಸಿದರು. ಶೃಂಗೇರಿ ಕ್ಷೇತ್ರದಲ್ಲಿ 6 ವಲಯಗಳಲ್ಲಿ ಗಡಿಗೇಶ್ವರ ಪ್ರೌಢಶಾಲೆಯು ಆಯ್ಕೆಯಾಗಿದ್ದು ಗ್ರಾಮ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಶಾಲೆಗೆ 10 ಸಾವಿರಾರುಗಳು ನೀಡಲಾಗಿದೆ.
ಶಾಲೆ ವತಿಯಿಂದ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದು ಹನುಮಂತಪ್ಪ ಛಲವಾದಿ ಕನ್ನಡ ಶಿಕ್ಷಕರಾಗಿದ್ದು ಅವರಿಗೂ ಹಾಗೂ ರೇಣುಕಾ ರವರಿಗೂ ಶಾಲೆ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.
ತಾಲೂಕಿನಲ್ಲಿ ಒಂದು ನೊಗ ಹಾಕಿರುವ ಬಗ್ಗೆ ಆ ಪದ್ಧತಿಯ ಮೂಲಕ ಎಲ್ಲಾ ವಿವಿಧ ಇಲಾಖೆಯಲ್ಲಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿತ್ತು. ಹೆಚ್ಚು ಕಾರ್ಯಕ್ರಮ ನಡೆಸಲು ಬಾಳೆಹೊನ್ನೂರು ಹೋಬಳಿ ಮಟ್ಟದಲ್ಲಿ ಪದವಿ ಸ್ವೀಕಾರ ಮಾಡಲಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಮಾಡಿದ ಪಾಠವನ್ನು ಆ ದಿನವೇ ಓದುವುದರಿಂದ ಪರೀಕ್ಷೆ ದಿನ ಓದುವ ಅಗತ್ಯವಿರುವುದಿಲ್ಲ, ಸರ್ಕಾರಿ ಶಾಲೆಯ ಮಕ್ಕಳು ಎಲ್ಲಾದಕ್ಕೂ ಸಿದ್ದರಿರುವ ಮಕ್ಕಳು ನೀವು, ತಂದೆ ತಾಯಿಗಳು ಪರೀಕ್ಷೆಯ ಸಮಯದಲ್ಲಿ ಮಕ್ಕಳಲ್ಲಿ ಒತ್ತಡ ಹೇರುವುದು ಒಳ್ಳೆಯದಲ್ಲ, ಪರೀಕ್ಷೆಗಳು ಮತ್ತೆ ಮತ್ತೆ ಬರುವುದು ಆದರೆ ಮಕ್ಕಳನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಕ್ಕಳಿಗೆ ಕನ್ನಡದಲ್ಲಿ 125ಕ್ಕೆ /125 ಅಂಕಗಳು ಪಡೆದಲ್ಲಿ ಹಾಗೂ ಶಾಲೆಯಲ್ಲಿ 100/100 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದರೆ ಹೆಚ್ಚು ಅಂಕಗಳು ಪಡೆದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗೌರವಿಸುವುದು ಸನ್ಮಾನಿಸುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಲಾಗುವುದು ಎಂದು ತಾಲೂಕು ಅಧ್ಯಕ್ಷರಾದ ಪೂರ್ಣೇಶ್ ಅವರು ತಿಳಿಸಿದರು.
ಕಾರ್ಯಕ್ರಮಗಳು ಯಾವತ್ತೂ ಸಣ್ಣದಾಗಿರಬೇಕು ಮಾಡುವ ಕೆಲಸಗಳು ದೊಡ್ಡದಾಗಿರಬೇಕು , ಕಾರ್ಯಕ್ರಮ ಮಾಡುವುದರೊಂದಿಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳು ಉತ್ತಮವಾಗಿರುವ ಕಾರ್ಯಕ್ರಮಗಳು ಮಾಡಬೇಕು, ಸರ್ಕಾರಿ ಶಾಲೆಗಳಿಗೆ ಹೆಚ್ಚು ಹಾಗೂ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ವಸ್ತುಗಳನ್ನು ನೀಡುವುದರ ಮೂಲಕ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಥಾ ಕಮ್ಮಟ, ಕಾವ್ಯ ಕಮ್ಮಟ, ಸಾಹಿತ್ಯ ಕಮ್ಮಟ, ಜನಪದ ಕಲೆ, ಈ ರೀತಿಯ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಮುಂದೆ ಬರುವ ದಿನಗಳಲ್ಲಿ ಈ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಪದವಿ ಸ್ವೀಕರಿಸಿದ ರತ್ನಾಕರ ರವರು ತಿಳಿಸಿದರು.
ಈ ಸಂದರ್ಭದಲ್ಲಿ ರತ್ನಾಕರ್, ಪೂರ್ಣೇಶ್, ಮೋಹನ, ಚೇತನ, ವೆಂಕಟೇಶ್, ವಿವೇಕ್, ರಾಘವೇಂದ್ರ, ಮಂಜುನಾಥ್, ಸತೀಶ್ ಅರಳಿಕೊಪ್ಪ, ರೇಣುಕಾ, ಹೇಮ, ಲತಾ, ಹನುಮಂತಪ್ಪ ಛಾಲವಾದಿ ಇತರರು ಸಹ ಇದ್ದರು.