ರೈತರ ಕೃಷಿ ಪಂಪ್ಸೆಟ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ಪ್ರತಿಭಟನೆ.
(SHIVAMOGA): ದಿನಾಂಕ 26/10/2023 ರಂದು ಶಿವಮೊಗ್ಗ ಜಿಲ್ಲಾ ರೈತ ಸಂಘದ ಸಾಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದ್ದು.
ರೈತರ ಕೃಷಿ ಪಂಪ್ಸೆಟ್ಗಳಿಗೆ ಹಿಂದಿನಿಂದಲೂ ಹಗಲು ಹೊತ್ತಿನಲ್ಲಿ ನಿರಂತರ ಘಂಟೆ ಫೇಸ್ ವಿದ್ಯುತ್ ನೀಡುತ್ತಿದ್ದ ಸೌಲಭ್ಯವನ್ನು ಏಕಾಏಕಿ ಬೇಸಿಗೆ ಆರಂಭಕ್ಕೂ ಮುನ್ನ ಘಂಟೆಗೆ ಕಡಿತಗೊಳಿಸಿದ ಸರ್ಕಾರದ ತೀರ್ಮಾನವನ್ನು ಒಂಡಿಸಿ ಮತ್ತು ಇಲ್ಲಿಯವರೆಗೂ ನೀಡುತ್ತಿದ್ದ ಸೌಲಭುಗಳಾದ ಶೀಘ್ರ ಸಂಪರ್ಕ, ಸಾಮಾನ್ಯ ನೀರಾವರಿ ಮತ್ತು ಅಕ್ರಮ ಸಕ್ರಮ ದಂತಹ ಉಪಯುಕ್ತ ಯೋಜನೆಗಳನ್ನು ಯಾರ ಕಾಲಾವಕಾಶವನ್ನು ನಿಗದಿ ಮಾಡದೆ ಮುನ್ಸೂಚನೆಯನ್ನು ನೀಡರೆ ನೊಂದಣಿ ಪ್ರಕ್ರಿಯೆಯನ್ನು ನಿಲ್ಲಿಸಿರುವುದನ್ನು ಖಂಡಿಸಿ ಮತ್ತು ಈಗ ಪೂರೈಸುತ್ತಿರುವ 4 ಘಂಟೆಯ ಫೇಸ್ ವಿದ್ಯುತ್ ಸೌಲಭ್ಯ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು, ಬೇಸಿಗೆ ಆರಂಭಕ್ಕೂ ಮುನ್ನ ಬೆಳೆಗಳಿಗೆ ನೀರು ಉಣಿಸಲು ಸಾಧ್ಯವಾಗದೇ ರೈತರೆಲ್ಲ ಕಂಗಾಲಾಗಿದ್ದಾರೆ, ತೆನೆ ಕಟ್ಟುವ ಈ ಸಂದರ್ಭದಲ್ಲಿ ಬೆಳೆಗಳಿಗೆ ನೀರು ಉಣಿಸಲು ಕಷ್ಟಪಡುತ್ತಿರುವ ರೈತ ಸಮೂಹ ಇಂಧನ ಇಲಾಖೆಯ ಈ ನಿರ್ಧಾರಗಳಿಂದ ವಿಚಲಿತರಾಗಿದ್ದು, ಇನ್ನೂ 4 ತಿಂಗಳುಗಳ ಕಾಲ ದೀರ್ಘಾವಧಿ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಚಿಂತೆಗಿಡಾಗಿದ್ದಾರೆ.
ಆದ್ದರಿಂದ ದಿನಾಂಕ 26/10/2023ರಂದು ತಾಲೂಕಿನ ರೈತರೆಲ್ಲ ಸರ್ಕಾರಕ್ಕೆ, ತಮ್ಮ ಬೇಡಿಕೆಯನ್ನು ಸಲ್ಲಿಸಲು ಸಾಗರದಲ್ಲಿ ಪ್ರತಿಭಟನಾ ರಾಲಿಯನ್ನು ಹಮ್ಮಿಕೊಂಡಿದ್ದರು. ನಂತರ, ಮೆಸ್ಕಾಂ ಕಛೇರಿ, ಸಾಗರದಲ್ಲಿ ಪ್ರತಿಭಟನಾ ಸಭೆಯನ್ನು ಏರ್ಪಡಿಸಿದ್ದು, ಈ ಪ್ರತಿಭಟನಾ ಸಭೆಯ ಮೂಖಾಂತರ, ತಮಗೆ ಈ ಮನವಿಯನ್ನು ಮಾಡುತ್ತಿದ್ದೇವೆ ದಯವಿಟ್ಟು ಈ ಹಿಂದಿನಂತೆ ಹಗಲು ಹೊತ್ತಿನಲ್ಲಿ ಗುಣಮಟ್ಟದ 7 ಘಂಟೆ, 3 ಫೀಸ್ ವಿದ್ಯುತ್ ಅನ್ನು ರೈತರಿಗೆ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಮತ್ತು ಹಿಂದಿನಿಂದ ಭಜನೆಗಳ ನೊಂದಣಿಯನ್ನು ರೈತರಿಗೆ ಯಾವುದೇ ಮುನ್ಸೂಚನೆ ನೀಡದೇ ಸ್ಥಗಿತಗೊಳಿಸಿರುವ ತೀರ್ಮಾನವನ್ನು ಕೂಡಲೇ ರದ್ದುಗೊಳಿಸಿ ಈ ಎಲ್ಲ ಯೋಜನೆಗಳ ಅಡಿಯಲ್ಲಿ ರೈತರಿಗೆ ವಿದ್ಯುತ್ ಸೌಲಭ್ಯವನ್ನು ಮುಂದುವರೆಸಬೇಕೆಂದು ಈ ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತಿದ್ದೇವೆ. ಎಂದು ಶಿವಮೊಗ್ಗ ಜಿಲ್ಲಾ ರೈತ ಸಂಘ, ಸಾಗರ ತಾಲೂಕು ಘಟಕ ವತಿಯಿಂದ ಕರ್ನಾಟಕ ಸರ್ಕಾರದ ಇಂಧನ ಸಚಿವರಿಗೆ ಮನವಿ ಪಾತ್ರ ಸಲ್ಲಿಸಲಾಯಿತು.
ವರದಿ: ರಾಘವೇಂದ್ರ ತಾಳಗುಪ್ಪ