970 ಲೀಟರ್ ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ.
(HASSANA): ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಡೇನಹಳ್ಳಿ ಹಾಲಿನ ಡೈರಿ ವಿಷಯ ವ್ಯಾಜ್ಯ ತಾರಕಕ್ಕೆ ಏರಿದ್ದು 970 ಲೀಟರ್ ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಜಯಂತಿ ಅವರನ್ನು ಬದಲಾವಣೆ ಮಾಡುವ ವಿಷಯವಾಗಿ ಆಡಳಿತ ಮಂಡಳಿಯಲ್ಲಿ ಗೊಂದಲ ಪ್ರಾರಂಭವಾಗಿದೆ. ಈ ವೇಳೆ ಮೇಲ್ವಿಚಾರಕ್ಕೆ ಮಂಜುಳಾ ಹಾಲು ತೆಗೆದುಕೊಳ್ಳುವುದಿಲ್ಲ ಎಂದು ನೋಟಿಸ್ ನೀಡಿದ್ದಾರೆ.
ಇದರಿಂದ ಬೇಸತ್ತ 189 ಮಂದಿ ಶೇರುದಾರರು 39 ಸಾವಿರ ಬೆಲೆ ಬಾಳುವ ಹಾಲನ್ನು ಹಾಲಿನ ಡೈರಿಯ ಮುಂಭಾಗ ಚೆಲ್ಲಿ ಹಾಗೂ ರಸ್ತೆಗೆ ಚೆಲ್ಲುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಆಶಾ, ನಿರ್ದೇಶಕರಾದ ತೇಜ, ಅನುಸೂಯ, ರೇಣುಕಮ್ಮ, ಸುಧಾ, ಚಂದ್ರಿಕಾ, ಅನಿತಾ, ಶಕುಂತಲಾ, ಲತಾ, ಪದ್ಮಮ್ಮ, ಹಾಗೂ ಊರಿನ ಗ್ರಾಮಸ್ಥರು ಸೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಶಾಸಕ ಬಾಲಕೃಷ್ಣ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ವರದಿ: ಶಾಮಸುಂದರ್ ಕೆ ಅಣ್ಣೇನಹಳ್ಳಿ