ವಕೀಲರ ಮೇಲೆ ಹಲ್ಲೆ ಹಾಗೂ ಕೊಲೆ ಖಂಡಿಸಿ ತಾಲೂಕು ಕಚೇರಿ ಮುಂದೆ ವಕೀಲರ ಸಂಘದಿಂದ ಪ್ರತಿಭಟನೆ
(KOLARA):ಬಂಗಾರಪೇಟೆ: ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಮ್ ಮೇಲೆ ಪೊಲೀಸನವರು ಹಲ್ಲೆ ನಡೆಸಿರುವುದು ಹಾಗೂ ಕಲ್ಬುರ್ಗಿಯಲ್ಲಿ ವಕೀಲರಾ ಸಂಘದ ಈರಣ್ಣ ಗೌಡರ್ ಪಾಟೀಲ್ ರವರ ಕೊಲೆ ಖಂಡಿಸಿ ಪಟ್ಟಣದ ತಾಲೂಕು ಕಚೇರಿ ಮುಂದೆ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿದರು.
ತಾಲೂಕು ವಕೀಲರ ಸಂಘದ ಕುಸುಮ ಸಂತೋಷ್ ಮಾತನಾಡಿ, ದಿನೇ ದಿನೇ ವಕೀಲರ ಮೇಲೆ ಹಲ್ಲೆ ದೌರ್ಜನ್ಯಗಳು, ಪೊಲೀಸರ ದೌರ್ಜನ್ಯಗಳು ಯತೆಚ್ಚವಾಗಿ ನಡೆಯುತ್ತಿದೆ. ಇತ್ತೀಚೆಗೆ ಚಿಕ್ಕಮಂಗಳೂರು ವಕೀಲ ಪ್ರೀತಮ್ ವಿರುದ್ಧ ಪೊಲೀಸನವರು ಹಲ್ಲೆ ನಡೆಸಿ ಹಾಗೂ ವಕೀಲ ಸಮುದಾಯವನ್ನು ಅವಮಾನಗೊಳಿಸಿದ್ದಾರೆ.
ಇದನ್ನು ಬಂಗಾರಪೇಟೆ ತಾಲೂಕಿನ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ.ಸಮಾಜವನ್ನು ರಕ್ಷಿಸುವ ಪೋಲಿಸ್ ನವರೇ ಈ ರೀತಿ ವರ್ತಿಸಿದರೆ ಹೇಗೆ, ಸರ್ಕಾರ ಈ ಕೂಡಲೇ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಹಾಡುವಗಳೇ ವಕೀಲರ ಸಂಘದ ಈರಣ್ಣ ಗೌಡರ್ ಪಾಟೀಲ್ ರವರನ್ನು ಬರ್ಬರವಾಗಿ ಸಮಾಜವು ಹೆದರುವ ರೀತಿಯಲ್ಲಿ ಕೊಲೆ ಮಾಡಿರುತ್ತಾರೆ. ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ವಕೀಲರ ಬಹುದಿನದ ಬೇಡಿಕೆಯಾದ ವಕೀಲರ ಸಂರಕ್ಷಣಾ ಕಾಯ್ದೆಜಾರಿಗೆ ತರುವಂತೆ ಸರ್ಕಾರವನ್ನು ಆಗ್ರಹಿಸಿದರು.ಈ ಕೂಡಲೇ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆಜಾರಿಗೆತರದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಂಗಾರಪೇಟೆ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ