ನ್ಯೂಸ್ಶಿವಮೊಗ್ಗ

ಮಹಿಳಾ ಸಿಬ್ಬಂದಿಯರಿಂದ ಪ್ರತಿಭಟನೆ. ಬೇಡಿಕೆ ಈಡೇರದಿದ್ದರೆ ಕೆಲಸಕ್ಕೆ ಗೈರು.

ಮಹಿಳಾ ಸಿಬ್ಬಂದಿಯರಿಂದ ಪ್ರತಿಭಟನೆ. ಬೇಡಿಕೆ ಈಡೇರದಿದ್ದರೆ ಕೆಲಸಕ್ಕೆ ಗೈರು.

(SHIVAMOGA): ಇಂದು ಸಾಗರ ತಾಲೂಕಿನ ಎಂ.ಬಿ.ಕೆ ಮತ್ತು ಎಲ್ ಆರ್ ಸಿ ಆರ್ ಪಿ ಸಂಜೀವಿನಿ ಒಕ್ಕೂಟದ ತಾಲ್ಲೂಕು ಸಂಘಟನೆಯ ಎಲ್ಲಾ ಸಿಬ್ಬಂದಿಗಳು ಸಾಗರದ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಸಾಗರದ E.O ಅವರಿಗೆ ಮನವಿ ಸಲ್ಲಿಸಿದರು.


ಸಾಗರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ವ್ಯಾಪ್ತಿಯ ಎನ್ ಆರ್ ಎಲ್ ಎಂ ಯೋಜನೆಯ ಅಡಿಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಾ ಇದ್ದು ನಮಗೆ ಸರಿಯಾದ ವೇತನ ಆಗಲಿ ಗುರುತಿನ ಚೀಟಿ ಆಗಲಿ ಇಲ್ಲ ನಮ್ಮ ಬೇಡಿಕೆ ಇಷ್ಟೆ ನಮಗೆ ಸರಿಯಾದ ಕನಿಷ್ಠ ವೇತನ ನೀಡುವುದರ ಜೊತೆಗೆ ನಮ್ಮ ಎಲ್ಲಾ ಸಿಬ್ಬಂದಿಗಳು ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.


ನಾವು ನಮ್ಮ ವ್ಯಾಪ್ತಿಯಲ್ಲಿನ ಎಲ್ಲ ಸಂಘಗಳಿಗು ಬೇಟಿ ನೀಡಬೇಕು. ಇದರ ಜೊತೆಗೆ ನಾವು ಆಫೀಸ್ ಸಮಯಕ್ಕೆ ಹೊಗಬೇಕು ಅದು ಸಾದ್ಯ ಆಗುತ್ತಿಲ್ಲ ಎಂದು ಅವರು ನಮಗೆಲ್ಲ ಘನತಾಜ್ಯ ವೀಲೆವಾರಿ ನಮಗೆ ನೀಡಿದ್ದು ನಾವು ಅದನ್ನು ಮಾಡೊದಿಲ್ಲ ಎಂದರು ನಮ್ಮ ಬೇಡಿಕೆ ಇಡೇರಿಸುವ ಬರವಸೆ ನಮ್ಮಲ್ಲಿ‌ ಇದೆ ಒಂದು ವೇಳೆ ಇಡೇರಿಸದೆ ಇದ್ದಲ್ಲಿ ನಾವು ನಮ್ಮ ಕೆಲಸ ಮಾಡವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಲತಾ, ರೇವತಿ‌, ನಾಗರತ್ನ, ವಿನುತಾ, ಶಶಿಕಲಾ, ಲಕ್ಷ್ಮಿ, ಇನ್ನು ಮುಂತಾದ ಸಿಂಬಂದಿಗಳು ಸೆರಿ ಸುಮಾರು 100ಕ್ಕೊ ಹೆಚ್ಚು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code