ರೈತ ಮುಖಂಡರ ಮೇಲೆ ಹಲ್ಲೆ , ಗೂಂಡಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ.
(SHIVAMOGA): ಕರ್ನಾಟಕ ರಾಜ್ಯ ರೈತ ಸಂಘ, ಶಿವಮೊಗ್ಗ ಜಿಲ್ಲೆ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಶಿವಮೊಗ್ಗ ಜಿಲ್ಲೆ ಇವರ ವತಿಯಂದ ಇಂದು ಸಾಗರದ ಉಪವಿಭಾಗಾಧಿಕಾರಿಗಳ ಕಛೇರಿಯ ಎದುರು ರೈತ ಮುಖಂಡರ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಮತ್ತು ಆರ್ ಎಸ್ ಎಸ್ ಗೂಂಡಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಚಾಮರಾಜನಗರದಲ್ಲಿರುವ ಪ್ರೋಫೆಸರ್ ಎಮ್.ಡಿ.ನಂಜುಂಡ ಸ್ವಾಮಿಯವರ ಸಮಾಧಿಯಿಂದ ರೈತರಿಗೆ ಮೋಸ ಮಾಡಿದ ಬಿಜೆಪಿ ಸರಕಾರದ ಕಾರ್ಯವೈಖರಿ ಕುರಿತು ರೈತ ಸಮೂದಾಯಕ್ಕೆ ಹಾಗೂ ಮತದಾರರಿಗೆ ಮಾಹಿತಿ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮತ್ತು ರೈತ ವಿರೋಧಿಗಳನ್ನು ಸೋಲಿಸಿ ಅಭಿಯಾನವು ರಾಜ್ಯದ 130 ಕ್ಕೂ ಹೆಚ್ಚು ವಿಧಾನ ಸಭಾ ಕ್ಷೇತ್ರದಲ್ಲಿ ನಡೆಸಲು ಪ್ರತಿಜ್ಞೆ ಕೈಗೊಂಡು ಈಗಾಗಲೇ ಸುಮಾರು 18 ಲೋಕ ಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನ ಸಭಾಕ್ಷೇತ್ರದಲ್ಲಿ ಚಾಲನೆ ಕೊಡಲಾಗಿದೆ ದಿನಾಂಕ 24-04-2024 ರಂದು ಚಾಮರಾಜನಗರದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಉಪಾಧ್ಯಕ್ಷರಾದ ಎ ಎಸ್ ಮಹೇಶ್ ಪ್ರಭು ಹಾಗೂ ಇತರ ಮುಖಂಡರು ಮತ್ತು ಕಾರ್ಯಕರ್ತರು ಅಭಿಯಾನ ನಡೆಸುತ್ತಿರುವಾಗ ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಗೂಂಡಗಳು ರೈತಸಂಘಕ್ಕೆ ಧಿಕ್ಕಾರ ರೈತರಿಗೆ ಧಿಕ್ಕಾರ ಅಂತ ಕೂಗುತ್ತಾ ಪೋಲಿಸ್ ಪೇದೆಗಳಿದ್ದರೂ ಅವರ ಸಮಕ್ಷಮದಲ್ಲಿ ದೈಹಿಕ ಹಲ್ಲೆ ನಡೆಸಿರುತ್ತಾರೆ. ಚಾಮರಾಜನಗರ ನಗರ ಪೋಲೀಸ್ ಠಾಣೆ ಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಸರಕಾರವೂ ತಕ್ಷಣವೇ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸಲಾಯಿತು.
ಈ ಪ್ರತಿಭಟನೆಯಲ್ಲಿ ರೈತ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಕುಗ್ವೆ, ಎನ್.ಡಿ.ವಸಂತ್ ಕುಮಾರ್, ಯು. ಪಿ. ಜೋಸೆಫ್, ಹೆಚ್. ಬಿ. ರಾಘವೇಂದ್ರ,
ಪರಮೇಶ್ವರ ದೂಗೂರ್, ಸುಂದರ್ ಸಿಂಗ್, ರಮೇಶ್ ಐಗಿನ್ ಬೈಲ್, ರಾಮಣ್ಣ ಹಾಗೂ ಇನ್ನಿತರರು ಭಾಗವಹಿಸಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ