ಕೋಲಾರನ್ಯೂಸ್

ಬೆಲೆ ಕುಸಿತದಿಂದ ಕಂಗಾಲಾಗಿರುವ ಹೂವಿನ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಎಂದು ರೈತ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ

ಬೆಲೆ ಕುಸಿತದಿಂದ ಕಂಗಾಲಾಗಿರುವ ಹೂವಿನ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಎಂದು ರೈತ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ


(KOLARA): ಬಂಗಾರಪೇಟೆ,ನ.17: ಬೆಲೆ ಕುಸಿತದಿಂದ ಕಂಗಾಲಾಗಿರುವ ಹೂ ಬೆಳೆಗಾರರ ರಕ್ಷಣೆಗೆ ಪ್ರತಿ ಕೆ.ಜಿಗೆ 20 ರೂ ಬೆಂಬಲ ಬೆಲೆ ಘೋಷಣೆ ಮಾಡಿ ಬೆಳೆ ಸಾಲವಾಗಿ 3 ಲಕ್ಷ ಬಡ್ಡಿರಹಿತ ಸಾಲ ವಿತರಣೆ ಮಾಡಬೇಕೆಂದು ರೈತ ಸಂಘದಿoದ ಆಸ್ಪತ್ರೆ ವೃತ್ತದಲ್ಲಿ ಉಚಿತ ಹೂ ಹಂಚುವ ಮುಖಾಂತರ ಹೋರಾಟ ಮಾಡಿ ತೋಟಗಾರಿಕೆ ಅಧಿಕಾರಿಗಳ ಮೂಲಕ ತೋಟಗಾರಿಕೆ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.



ಗ್ಯಾರಂಟಿಗಳ ಆದಾರದ ಮೇಲೆ ಅಧಿಕಾರಕ್ಕೆ ಬಂದಿರುವ ಸರ್ಕಾರಕ್ಕೆ ಆರ್ಥಿಕ ಬಲ ತುಂಬುವುದು ಒಂದು ಕಡೆಯಾದರೆ ಮತ್ತೊಂದು ಕಡೆ ರಾಜ್ಯದಲ್ಲಿ 224 ತಾಲ್ಲೂಕುಗಳು ಬರ ಪೀಡಿತ ಎಂದು ಸರ್ಕಾರವೇ ಘೋಷಣೆ ಮಾಡಿ 3 ತಿಂಗಳಾದರೂ ಇದುವರೆಗೂ ನಯಾ ಪೈಸೆ ಹಣವೂ ರೈತರ ಖಾತೆಗೆ ಬಿಡುಗಡೆ ಮಾಡುತ್ತಿಲ್ಲ, ಸಂಬoಧಪಟ್ಟ ಸಚಿವರು ಹಾಗೂ ಸರ್ಕಾರವನ್ನು ಪ್ರಶ್ನೆ ಮಾಡಿದರೆ ಕೇಂದ್ರ ಸರ್ಕಾರ ರಾಜ್ಯದ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯದ ರೈತರಿಗೆ ರಾತ್ರಿ ವೇಳೆ ಕಾಣಿಸುವ ನಕ್ಷತ್ರಗಳನ್ನು ಹಗಲು ವೇಳೆಯೇ ತೋರಿಸುತ್ತಿದ್ದಾರೆಂದು ಸರ್ಕಾರದ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.



ಒಂದು ಕಡೆ ಹೂ ಬೆಲೆ ಕುಸಿತ ಮತ್ತೊಂದೆಡೆ ಸೂಕ್ತವಾದ ಹೂ ಮಾರುಕಟ್ಟೆಯಿಲ್ಲದೆ 90 ದಿನ ಬಿಸಿಲು ಮಳೆ ಗಾಳಿ ಎನ್ನದೆ ದುಡಿಯುವ ರೈತರು ಹೂ ಮಾರಾಟ ಮಾಡಲು ಮಾರುಕಟ್ಟೆ ಬಂದರೆ 100ರೂ 10 ರಂತೆ ಕಮೀಷನ್ ನೂರಕ್ಕೆ 10 ಕೆ.ಜಿ ಜಾಕ್‌ಪಾಟ್ ಒಟ್ಟಾರೆಯಾಗಿ ಅನ್ನದಾತನ ಬದುಕು ದಲ್ಲಾಳಿಗಳ ಕೈಯಲ್ಲಿ ಸಿಲುಕಿ ಇತ್ತ ಶ್ರೀಮಂತನಾಗದೆ ಅತ್ತ ಬಡವನಾಗದೆ ಮದ್ಯಮ ವರ್ಗದ ರೈತನಾಗಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ರೈತರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇದ್ದರೆ ಮುಂದಿನ ದಿನಗಳಲ್ಲಿ ತುತ್ತು ಅನ್ನಕ್ಕಾಗಿ ಅನ್ನದಾತನ ಕಾಲು ಹಿಡಿಯುವ ಕಾಲ ದೂರವಿಲ್ಲ ಎಂದು ರೈತ ವಿರೋದಿ ಸರ್ಕಾರಗಳಿಗೆ ಬುದ್ದಿ ಮಾತು ಹೇಳಿದರು.
ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಒಂದು ಕಡೆ ಬರ ಮತ್ತೊಂದು ಕಡೆ ಬೆಳೆದಬೆಳೆ ರೋಗದಿಂದ ನಷ್ಟ ಅನುಭವಿಸುತ್ತಿದ್ದರೆ ಲಕ್ಷಾಂತರ ಬಂಡವಾಳ ಹಾಕಿ ಬೆಳೆದಿರುವ ಸೇವಂತಿ ಚೆಂಡೂ ಹೂ, ಮತ್ತಿತರ ಹೂ ಬೆಳೆಗಳು ಹಬ್ಬದ ದಿನ ಮಾತ್ರ ಬೆಲೆ ಸಿಕ್ಕರೆ ಉಳಿದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ತೋಟದಲ್ಲೇ ಕೊಳೆಯುವ ಜೊತೆಗೆ ಕೋಯ್ಲು ಮಾಡಿಕೊಂಡು ಮಾರುಕಟ್ಟೆಗೆ ಬಂದಿರುವ ಹೂಗಳನ್ನು ಹರಾಜು ಇಲ್ಲದೆ ರಸ್ತೆ ರಸ್ತೆಗಳಲ್ಲಿ ಸುರಿಯುವ ಪರಿಸ್ಥಿತಿ ಇದ್ದರೂ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಗಂಬೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಒಂದು ಎಕರೆ ಹೂ ಬೆಳೆಯಬೇಕಾದರೆ ತಿಪ್ಪೆಗೊಬ್ಬರದಿಂದ ಇಡಿದು ಔಷಧಿ ಕೂಲಿ ಸೇರಿ 80 ರಿಂದ 1 ಲಕ್ಷ ಖರ್ಚು ಬರುತ್ತದೆ, ಬೆಲೆ ಇದ್ದರೆ ಕನಿಷ್ಠ ರೈತರಿಗೆ ಅವರ ಬೆವರ ಹನಿಯ ಕಷ್ಟ ಸಿಗುತ್ತದೆ. ಇವತ್ತಿನ ಪರಿಸ್ಥಿತಿಯನ್ನು 3 ತಿಂಗಳಿoದ ಹೂ ಬೆಳೆಗಾರರು ಬೆಲೆ ಸಿಗದೆ ತೋಟಗಳಲ್ಲೇ ರೋಟರ್ ಹಾಕುವ ಮುಖಾಂತರ 3 ತಿಂಗಳು ಸಾಕಿದ ಬೆಳೆಯನ್ನು ಕಣ್ಣಿರಿನಿಂದ ನಾಶ ಮಾಡಬೇಕಾದ ಪರಿಸ್ಥಿತಿ ಇದ್ದರೂ ರೈತರ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲ ಎಂದರು.


ಬರ ಹಾಗೂ ಬೆಳೆ ನಷ್ಟದಿಂದ ಕಂಗಲಾಗಿರುವ ರೈತರ ರಕ್ಷಣೆಗೆ ಸರ್ಕಾರ ಷರತ್ತು ಇಲ್ಲದೆ ಬಡ್ಡಿರಹಿತ 3 ಲಕ್ಷ ಸಾಲ ವಿತರಣೆ ಮಾಡಬೇಕೆಂದು ಹೂ ಬೆಲೆ ಕುಸಿತದಿಂದ ನಷ್ಟವಾಗಿರುವ ಹೂ ಬೆಳೆಗಾರರ ರಕ್ಷಣೆಗೆ 20 ರೂ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಅಧಿಕಾರಿ ಶಿವಾರೆಡ್ಡಿ ರವರು ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.


ಹೋರಾಟದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಹಸಿರು ಸೇನೆ ಜಿಲ್ಲಾದ್ಯಕ್ಷ ಕಿರಣ್, ಜಿಲ್ಲಾ ಉಪಾದ್ಯಕ್ಷ ಚಾಂದ್‌ಪಾಷ, ಬಾಬಾಜಾನ್, ಮೊಹಮದ್ ಶೋಹಿಬ್, ತಾಲ್ಲೂಕಾದ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಗೋವಿಂದಪ್ಪ, ಮುನಿಯಪ್ಪ, ಕಾ.ಹೋ.ಅ ಮುನಿಕೃಷ್ಣ, ವಿಶ್ವ, ಮುನಿರಾಜು, ಮಂಗಸAದ್ರ ತಿಮ್ಮಣ್ಣ, ನರಸಿಂಹಯ್ಯ, ರಾಮಸಾಗರ ವೇಣು, ಸುರೇಶ್‌ಬಾಬು, ಲಕ್ಷಣ್, ಯಾರಂಘಟ್ಟ ಗೀರೀಶ್, ಶೈಲಜ, ರಾಧಮ್ಮ, ನಾಗರತ್ನ, ಇದ್ದರು.

ವರದಿ ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code