ಥ್ರೋ ಬಾಲ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹೆಮ್ಮೆಯ ವಿದ್ಯಾರ್ಥಿನಿಯರು
(VIJAYANAGARA): ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಶ್ರೀ ಚಂದ್ರಮೌಳೀಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಇಂದು ಕೊಪ್ಪಳದಲ್ಲಿ ನಡೆದ ವಿಭಾಗ ಮಟ್ಟದ ಥ್ರೋ ಬಾಲ್ ಸ್ಪರ್ಧೆಯ ರೋಚಕ ಹಣಾಹಣಿಯಲ್ಲಿ ಮೊದಲ ಸುತ್ತಿನಲ್ಲಿ ಕಲಬುರಗಿ, ಎರಡನೇ ಸುತ್ತಿನಲ್ಲಿ ರಾಯಚೂರು ಹಾಗೂ ಅಂತಿಮ ಹಣಾಹಣಿಯಲ್ಲಿ ಬಳ್ಳಾರಿ ಜಿಲ್ಲಾ ತಂಡದೊಂದಿಗೆ ಸೆಣಸಿ ಅಂತಿಮವಾಗಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ರಾಜ್ಯ ಮಟ್ಟದ ಥ್ರೋ ಬಾಲ್ ಸ್ಪರ್ಧೆಗಳು ನವೆಂಬರ್ 20 ರಂದು ಶಿವಮೊಗ್ಗದಲ್ಲಿ ನಡೆಯಲಿದ್ದು ಅಲ್ಲೂ ಕೂಡಾ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಕೀರ್ತಿ ತಂದ ಎಲ್ಲ ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಶುಭಾಶಯಗಳು ಹಾರೈಸಿದ್ದಾರೆ.
ಶಾಲಾ ಮುಖ್ಯ ಗುರುಗಳಾದ ಚಂದ್ರನಾಯ್ಕ್ , ಹಿಂದಿ ಶಿಕ್ಷಕರಾದ ಮಲ್ಲಿಕಾರ್ಜುನ್, ಕನ್ನಡ ಶಿಕ್ಷಕರದ ಕೋಟೆಪ್ಪ ಮತ್ತೂರು ವಿಜ್ಞಾನ ಶಿಕ್ಷಕರದ ರಾಘವೇಂದ್ರ, ಗಣಿತ ಶಿಕ್ಷಕರಾದ ಮಧು ಬೋಧಕೇತರ ಸಿಬ್ಬಂದಿಗಳಾದ ವೀರೇಂದ್ರ ಶೆಟ್ಟಿ ನಾಯ್ಕ್ ಹಾಗೂ ಊರಿನ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಕ್ರೀಡಾ ಪ್ರೇಮಿಗಳು ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸದಸ್ಯರು ಈ ಒಂದು ಕ್ರೀಡಾ ಮನೋಭಾವಕ್ಕೆ ಸ್ಪೂರ್ತಿದಾಯಕವಾಗಿ ನಿಂತಿದ್ದಾರೆ. ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮವಾದ ಆಟವನ್ನು ಪ್ರದರ್ಶಿಸಿದ ಕೀರ್ತಿ ಚಂದ್ರಮೌಳೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಸಲ್ಲುತ್ತದೆ ಎಂಬುವುದನ್ನು ಅತಿಥಿ ದೈಹಿಕ ಶಿಕ್ಷಕರಾದ ಉಮೇಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಂಪಾಪಟ್ಟಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದ ವರ್ಗಾವಣೆಗೊಂಡಿದ್ದ ದೈಹಿಕ ಶಿಕ್ಷಕರಾದ ಷಡಕ್ಷರಿ ಅವರು ಕೂಡಾ ವಿದ್ಯಾರ್ಥಿನಿಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸಿ ರಾಷ್ಟ್ರಮಟ್ಟದಲ್ಲಿ ತಮ್ಮ ಆಟವನ್ನು ಪ್ರದರ್ಶಿಸುವಂತೆ ಸಲಹೆ ನೀಡಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಾದ ಆರತಿ, ಯಶೋಧ, ಸವಿತಾ, ಸುಶೀಲಾ, ಸಂಜನಾ, ಅಮೂಲ್ಯ, ಜ್ಯೋತಿ, ಅಕ್ಷತಾ, ಅನು, ಆಶಾ, ಲತಾ, ಲಕ್ಷ್ಮಿ ಹಾಗೂ ಶಿಕ್ಷಕರು ಇದ್ದರು.
ವರದಿ: ಸುನಿಲ್ ಕುಮಾರ್ ಎಂ NSD